ಸಣ್ಣಕಥೆ | ದಣಿವು

October 18, 2021
8:49 PM

ಉನ್ನತ ಶಿಕ್ಷಣವನ್ನು ಪಡೆದು ಬಹುದೊಡ್ಡ ಹುದ್ದೆಗೇರುವ ಕನಸು ರಾಮನದು.

ಆದರೆ ಮನೆಯಲ್ಲಿ ಕಡು ಬಡತನ.ಬಸ್ಟಾಂಡ್ ಪಕ್ಕದ ಅಂಗಡಿಯಲ್ಲಿ ಮುಂದಿನ ಭವಿಷ್ಯ ಹೇಗೆಂಬ ಚಿಂತೆಯಲ್ಲಿ ಕುಳಿತಿದ್ದ ಸ್ವಾಭಿಮಾನಿ ರಾಮನಿಗೆ ಕಂಡದ್ದು ಮುಂದಿದ್ದ ಕಸದ ತೊಟ್ಟಿಯ ಪಕ್ಕದಲ್ಲಿ ಯಾರೋ ಎಸೆದು ಹೋಗಿದ್ದ ಬೂಟ್ ಪಾಲಿಶ್ ಮಾಡುವ ಬ್ರಶ್ ಹಾಗೂ ಅಳಿದುಳಿದ ಸ್ವಲ್ಪವೇ ಸ್ವಲ್ಪ ಪಾಲಿಶ್ ನ ಡಬ್ಬ.

ಹಿಂದೆ ಮುಂದೆ ಯೋಚಿಸದೆ ಅದನ್ನೆತ್ತಿಕೊಂಡ ರಾಮ…ರಾಮನ ಕೈಯ್ಯಲ್ಲಿದ್ದ ವಸ್ತುಗಳನ್ನು ಕಂಡು ತಮ್ಮ ಬೂಟುಗಳನ್ನು ಅವನತ್ತ ಚಾಚಿದ ಅಂಗಡಿಯ ಮುತ್ತುಸ್ವಾಮಿ ದೀಕ್ಷಿತರು ಅವನ ಕೈಯಲ್ಲಿ ನೂರು ರೂಪಾಯಿಯ ನೋಟೊಂದನ್ನು ಕೊಟ್ಟು ಹೊಸ ಬ್ರಶ್ ಹಾಗೂ ಪಾಲೀಶ್ ಡಬ್ಬ ಖರೀದಿಸುವಂತೆ ಹೇಳಿ ಅಪ್ಯಾಯತೆಯಿಂದ ಅವನ ತಲೆ ಸವರಿದರು.

ಹೊಸ ಪಾಲೀಶ್ ಡಬ್ಬ ಖರೀದಿಸಿದ ರಾಮ ದಣಿವರಿಯದೆ ದುಡಿದ….ಇಂದು……….ಅಂದು ತಾನೇ ಪಾಲೀಶ್ ಮಾಡುತ್ತಿದ್ದ ಅದೆಷ್ಟೋ ಹೆಸರಾಂತ ಕಪೆನಿಗಳ ಬೂಟುಗಳ ಬಹುದೊಡ್ಡ ಶಾಖೆಯನ್ನೇ ತಾನು ಹೊಂದಿದ್ದಾನೆ ರಾಮ. ತಾನು ಅಂದು ಆ ಮಾಸಲು ಬಟ್ಟೆಯಲ್ಲಿ ದಣಿವರಿಯದೆ ಬೂಟು ಪಾಲೀಶ್ ಮಾಡುತ್ತಿರುವ ಚಿತ್ರ ಅವನ ಆಫೀಸಿನ ಗೋಡೆಯನ್ನಲಂಕರಿಸಿದೆ.

ಪಕ್ಕದಲ್ಲೇ ಮುತ್ತುಸ್ವಾಮಿ ದೀಕ್ಷಿತರ ವಾತ್ಸಲ್ಯ ಸೂಸುವ ನಗುಮೊಗದ ಚಿತ್ರವೂ.

 ಭಾರತಿ ಭಟ್ ಪಾಣಾಜೆ ( ಅಧ್ಯಕ್ಷರು ಪಾಣಾಜೆ ಗ್ರಾಮ ಪಂಚಾಯತ್ ), ಪುತ್ತೂರು

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಮನೆಲ್ಲೇ ಸುಲಭವಾಗಿ ಮಾಡುವ “ಉಪ್ಪು ಸೊಳೆ ಬೋಳು ಬೆಂದಿ”
March 7, 2026
10:14 PM
by: ದಿವ್ಯ ಮಹೇಶ್
ಅಂಕಗಳಾಚೆಗೆ ಶಿಕ್ಷಣದ ಉದ್ದೇಶ
March 6, 2026
6:56 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror