Advertisement
Opinion

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ | ಇದು ಡಿಸೆಂಬರ್ ತಿಂಗಳು ಅಷ್ಟೇ…! | ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ತಾಪ, ಉರಿ ಬಿಸಿಲು ಹೇಗಿರಬಹುದು?

Share

ಈ ಬಾರಿ ಮಳೆ ಕೈಕೊಟ್ಟಿದೆ. ಬರಗಾಲ ಎಲ್ಲೆಡೆಯೂ ಕಾಟ ನೀಡಿದೆ.  ಈ ಹಿಂದೆ ನಮ್ಮ ಕಾಲ ಮಾನ ಮಳೆಗಾಲ, ಚಳಿಗಾಲ(Winter), ಬೇಸಿಗೆಗಾಲ(Summer) ಎಂಬುದಾಗಿತ್ತು. ಆದರೆ ಈಗ ಮಳೆಗಾಲ ಸೆಕೆಗಾಲ(Hot season), ಬರಗಾಲ ಎಂಬಂತೆ ಆಗಿದೆ. ಮಳೆ ಮುಗಿದ ಕೂಡಲೇ ಚಳಿ ಇರಬೇಕಾಗಿತ್ತು, ಆದರೆ ಈಗ ಚಳಿಗಾಲ ಮಾಯವಾಗಿ ನೇರವಾಗಿ ಮುಂದಿನ ಮಳೆಗಾಲದವರೆಗೆ ಬರಗಾಲ ತನ್ನ ಅಟ್ಟಹಾಸವನ್ನು ಪ್ರದರ್ಶಿಸುತ್ತದೆ. ಈಗಲೇ ಸೆಕೆ ಏರಿಕೆಯಾಗುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಚಳಿಯ ಕೊರತೆಯೂ ಕಾಡುತ್ತಿದೆ..!

ಯಾಕೆ ಹೀಗೆ ಬದಲಾವಣೆ ಆಯಿತು ? ಪ್ರಕೃತಿ ಯಾಕೆ ಈ ರೀತಿ ಮುನಿಸುತ್ತಿದೆ? ಇದರ ದುಷ್ಪರಿಣಾಮ ಏನಾಗಬಹುದು? ನಮ್ಮ ಮಕ್ಕಳ ಭವಿಷ್ಯ ಏನಾಗಬಹುದು ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವವರು ಯಾರೂ ಇಲ್ಲ. ಯಾರಿಗೂ ಇದರ ಬಗ್ಗೆ ಚಿಂತನೆ ಮಾಡಲು ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ. ಅದು ಮುಂದಕ್ಕೆ ಅಲ್ಲ ಮುಂದೆ ನೋಡುವ ಎಂಬ ಮಂದೆಯೇ ಹೆಚ್ಚಾಗುತ್ತಿದೆ.

ಪ್ರಕೃತಿ ಯಾವಾಗಲೂ ಅದರ ಕೆಲಸವನ್ನು ಸಮರ್ಪಕವಾಗಿಯೇ ಮಾಡುತ್ತಿದೆ. ಆದರೆ ಪ್ರಕೃತಿಗೆ ವಿರುದ್ಧವಾಗಿ ಹೋಗಿರುವ ನಮ್ಮ ಕೆಲಸ ಕಾರ್ಯಗಳೇ ಇಂದು ಈ ರೀತಿ ಪರಿಸರ ಅಸಮತೋಲನ ಆಗಲು ಕಾರಣ. ನಾವೇ ಆರೋಪಿಗಳಾಗಿ ಪ್ರಕೃತಿಯ ಮೇಲೆ ದೋಷಾರೋಪಣೆ ಮಾಡುವಷ್ಟು ನೀಚರಾಗುತ್ತಿದ್ದೇವೆ ನಾವು. ಮನುಜ ಸಂತಾನದ ಐಷಾರಾಮಿ ಬದುಕಿಗೋಸ್ಕರ, ರಾಜಕಾರಣಿಗಳ ‘ ಅಭಿವೃದ್ಧಿ ‘ ಎಂಬ ಸರ್ಟಿಫಿಕೇಟ್ ಗೋಸ್ಕರ ಇಂದು ನಮ್ಮ ಪ್ರಕೃತಿ ಬಲಿಯಾಗುತ್ತಿದೆ. ಪಶ್ಚಿಮ ಘಟ್ಟದ ಧಾರಣಾ ಶಕ್ತಿಗೂ ಮೀರಿ ಅಸಂಬದ್ಧ, ಅವೈಜ್ಞಾನಿಕ, ಅಸಮರ್ಪಕ ಯೋಜನೆಗಳನ್ನು ಮಾಡಿ ಇಂದು ಬರಗಾಲಕ್ಕೆ ನಾವೇ ಆಮಂತ್ರಣ ನೀಡಿ ಆಹ್ವಾನಿಸುವಂತೆ ಆಗಿದೆ. ನಾವೇ ಮಾಡಿರುವ ಕರ್ಮಕ್ಕೆ ನಾವೇ ಏಟು ತಿನ್ನಬೇಕೇ ಹೊರತು ಈ ಅಮೂಲ್ಯ ನಿಸರ್ಗದ ಮೇಲೆ ದೋಷಾರೋಪ ಮಾಡುವುದೆಂದರೆ ಅದರ ಪ್ರತಿಫಲ ಮತ್ತು ಪ್ರತೀಕಾರಗಳ ಫಲಿತಾಂಶವೇ ಈಗ ಆಗುತ್ತಿರುವ ಎಲ್ಲಾ ನೈಸರ್ಗಿಕ ದುರಂತಗಳಿಗೆ ನೇರ ಕಾರಣವಾಗಿರುತ್ತದೆ.

ಮನೆಗಳಲ್ಲಿ ಮಕ್ಕಳಿಗೆ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಪರಿಸರ ಪಾಠ, ಅಥವಾ ಪರಿಸರದ ಅಗತ್ಯ ಮತ್ತು ಮಹತ್ವಗಳನ್ನು, ಪ್ರಕೃತಿಯ ಸೂಕ್ಷ್ಮ ಜೀವ ವೈವಿದ್ಯತೆ, ಜೀವ ಸಂಕುಲಗಳ ಕಾರ್ಯ ವಿಧಾನಗಳನ್ನು, ಅಡವಿ, ನದೀ ಮೂಲ, ಪಶ್ಚಿಮ ಘಟ್ಟದ ಸಕಲ ಜೀವ ಸಂಕಲೆಯ ವ್ಯವಸ್ಥೆ, ನದಿ, ಸಾಗರಗಳ ನಡುವಿನ ಸಂಕೀರ್ಣವನ್ನು, ಪಶ್ಚಿಮ ಘಟ್ಟದ ಹುಲ್ಲುಗಾವಲು ಮತ್ತು ಶೋಲಾ ಅಡವಿಯ ಸಂಬಂಧವನ್ನು, ಬುಡಕಟ್ಟು ಸಮುದಾಯದವರು ಅಡವಿಯ ಒಳಿತಿಗಾಗಿ ಬದುಕುವ ರೀತಿ, ವಿಧಾನಗಳನ್ನು, ಪ್ರಕೃತಿಯ ಫಲಾನುಭವಿಗಳಾದ ನಾವು ಪ್ರಕೃತಿಯನ್ನೇ ಕಳೆದುಕೊಂಡರೆ ಮುಂದೆ ಆಗಲಿರುವ ದುರಂತಗಳನ್ನು ಮಕ್ಕಳಿಗೆ ನಾವು ತಿಳಿಸದೇ ಇದ್ದರೆ ಇಂದಿನ ಮಕ್ಕಳಿಗೆ ಪರಿಸರದ ಮೇಲೆ ಯಾವ ಕಾಳಜಿ, ಗೌರವ, ಅಭಿಮಾನವೂ ಉಳಿಯಲಿಕ್ಕಿಲ್ಲ.

ಮಕ್ಕಳನ್ನು ಕೇವಲ ನಗರದ ಮಾಲ್, ಮಹಲ್ ಗಳಿಗೆ ಕರೆದು ಕೊಂಡು ಹೋದರೆ  ಅವರಿಗೆ ಈ ಕಾಂಕ್ರೀಟು ಕಾಡೇ ಸತ್ಯ ಅದರ ಆಚೆ ಇರುವ ನೈಸರ್ಗಿಕ ಕಾಡು ಬರೇ ಶೂನ್ಯ ಎಂಬ ಮನೋಭಾವ ಬೆಳೆಯಬಹುದು. ನಮ್ಮ, ನಿಮ್ಮ ಮಕ್ಕಳಿಗೆ ಪರಿಸರ, ಪ್ರಕೃತಿ ಬಗ್ಗೆ ನಾವೇ ಮಾಹಿತಿ, ತಿಳುವಳಿಕೆ, ಜಾಗೃತಿ ಮೂಡಿಸಿ, ಮುಂದಕ್ಕೆ ಭದ್ರವಾಗಿ ಇರಬೇಕಾದ ಅವರ ಬದುಕು ಛಿದ್ರವಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಬೇಕು. ಪ್ರಕೃತಿಯ ಬಗ್ಗೆ ಕೇವಲ ಬೋಧನೆ ಸಾಲದು, ಶೋಧನೆಯೂ ಆದರೆ ಮಾತ್ರ ಮಕ್ಕಳ ಮನಸಿಗೆ ತಲುಪುವಂತೆ ಅನುಮೋಧನೆ ಆಗಬಹುದು. ‘ ವನ ಚೇತನಾ ‘ ಕಾರ್ಯಕ್ರಮವು ಕಾಡಿನ ನಡುವೆನೇ ಆಗುತ್ತಿರುವುದರಿಂದ ಮಕ್ಕಳನ್ನು ಕಾಡಿನ ಸುತ್ತ ಇರುವ ಬೆಟ್ಟ, ಅಡವಿ, ನದಿಗಳ ತೊರೆ, ಹರಿವು ಗಳನ್ನು ತೋರಿಸಿ ಪಶ್ಚಿಮಘಟ್ಟ ಮತ್ತು ಅದರ ಜೀವ ಸಂಕೀರ್ಣದ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತದೆ.

ಮೂಲ : ದಿನೇಶ್ ಹೊಳ್ಳ ಅವರು ಪೇಸ್‌ ಬುಕ್‌ ಬರಹ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

14 seconds ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

14 minutes ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

16 hours ago

ಹವಾಮಾನ ವರದಿ | 26-07-2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ಕರಾವಳಿ–ಮಲೆನಾಡಿನಲ್ಲಿ 10 ದಿನ ಮಳೆಯ ಸಾಧ್ಯತೆ

ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…

16 hours ago

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

2 days ago