ದೀಪಾವಳಿ | ಬೆಳಕು ಚೆಲ್ಲುವ ಹಬ್ಬ

October 24, 2022
11:25 AM
ದೀಪಗಳ ಹಬ್ಬವಿದು ದೀಪಾವಳಿ ಮುಗ್ಧ ಮನಕಿದು ಸಂಭ್ರಮದ ತಾರಾವಳಿ ಸುತ್ತಲು ಬೆಳಗಿವೆ ಸಾಲಾಗಿ ಹಣತೆಗಳು ಹಬ್ಬದ ಸಡಗರ ಕಾಣಿಸುತಿದೆ ಮೇದಿನಿಯೊಳು ||
ಕವಿದ ಕತ್ತಲೆಯ ಜಾಡ್ಯವ ಕಳೆದು ಪಸರಿಸುತಿದೆ ಹರುಷದ ಹೊನಲ ನಗೆ ತನು ಮನ ತಣಿಸುವ ಒಡಲೊಳು ವಿಜೃಂಭಿಸುವ ಕಾಂತಿಯನ್ನೇ ತಂದಿದೆ ದೀಪಾವಳಿ ಇಳೆಗೆ| |
ದೀಪದಿಂದ ದೀಪವ ಬೆಳಗಿದಂತೆ ಬೆಳೆಯಲಿ ಜ್ಞಾನವೆಂಬ ಸಾಗರ ಅಜ್ಞಾನವು ನಶಿಸಿ ಅರಿಷಟ್ ವೈರಿಗಳೆಲ್ಲ ತೊಲಗಿ ದಿನ ದಿನವು ಏರಲಿ ಕೀರ್ತಿಯೆಂಬ ಶಿಖರ||
ಕೆಟ್ಟ ಗುಣಗಳ ಸುಟ್ಟು ಅರಿವೆಂಬ ದೀವಟಿಗೆಯ ಬೆಳಗಲು ಸಕಾಲವಿದು ಆಡಂಬರವಿಲ್ಲದೆ ಆಚರಣೆಯ ಮೂಲಕವೇ ಜಗಕ್ಕೆ ಸಾರವ ತಿಳಿಸುವ ಹಬ್ಬ ದೀಪಾವಳಿಯಿದು||
ಬರಹ:
ಅನ್ನಪೂರ್ಣ ಎನ್ ಕುತ್ತಾಜೆ
ಅನ್ನಪೂರ್ಣ ಎನ್.ಕೆ ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರ ಕವನಗಳು ಪಾಂಚಜನ್ಯ ರೇಡಿಯೋ ಕೇಂದ್ರದಲ್ಲೂ ಪ್ರಸಾರವಾಗಿದೆ. ‘ಮೊದಲ ಹೆಜ್ಜೆ.. ಹೊಂಗನಸಿನೆಡೆಗೆ ‘ಇವರ ಮೊದಲ ಪ್ರಕಟಿತ ಕವನ ಸಂಕಲನ.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಎಲ್ಲರೂ ಒಂದಾಗಿ ಬಾಳುವ, ಮೇಳು-ಕೀಳು ಮದ -ಮತ್ಸರ ಬಿಟ್ಟು ಬದುಕುವ | ಎಲ್ಲಾರೂ ಮಾಡುವುದು ಹೊಟ್ಟೆಗಾಗಿ…ಗೇಣು ಬಟ್ಟೆಗಾಗಿ |
April 20, 2024
4:21 PM
by: The Rural Mirror ಸುದ್ದಿಜಾಲ
ಕಗ್ಗದ ಬೆಳಕು | “ಎಲ್ಲರೊಳಗೊಂದಾಗು” ಕೃತಿ ಲೋಕಾರ್ಪಣೆ |
April 1, 2024
9:19 AM
by: ದ ರೂರಲ್ ಮಿರರ್.ಕಾಂ
ಸುಳ್ಯದ ಸಾಯಿಶೃತಿ ಅವರಿಗೆ ‘MISS WORLD INTERNATIONAL INDIA’ ಸೆಕೆಂಡ್ ರನ್ನರ್ ಅಪ್ಅವಾರ್ಡ್
February 28, 2024
11:13 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಏಳಿಗೆ ಹಾಗೂ ಉಳಿವಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ದಕ್ಕಿದ್ದೇನು..?
February 16, 2024
1:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror