Advertisement
ಪರಿಸರ

ಜೇನುನೊಣಗಳಿಂದ ನಿಮ್ಮ ಹತ್ತಿರದ ಪರಿಸರ ಮಾಲಿನ್ಯ ಪತ್ತೆ…! | ಜೇನುತುಪ್ಪದ ಮೂಲಕ ಪರಿಸರ ಮಾಲಿನ್ಯದ ಸುಳಿವು..! |

Share

ಜೇನುಹುಳ ಹಾಗೂ ಜೇನುತುಪ್ಪವು ನಿಮ್ಮ ಹತ್ತಿರದ ಪರಿಸರ ಮಾಲಿನ್ಯದ ಸುಳಿವನ್ನು ನೀಡುತ್ತದೆ ಎಂದು  ಯುನೈಟೆಡ್  ಸ್ಟೇಟ್ಸ್ ನ  ತುಲೇನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನ ಹೇಳಿದೆ.…..ಮುಂದೆ ಓದಿ….

ಯುನೈಟೆಡ್ ಸ್ಟೇಟ್ಸ್ನಾದ್ಯಂತ 260 ಜೇನುತುಪ್ಪದ ಮಾದರಿಗಳ ಅಧ್ಯಯನದಲ್ಲಿ ವಿಷಕಾರಿ ಲೋಹ ಇರುವುದು ಪತ್ತೆಯಾಗಿದೆ ಹಾಗೂ ಪ್ರಾದೇಶಿಕ ವ್ಯತ್ಯಾಸಗಳಲ್ಲಿ ಈ ವಿಷಕಾರಿ ಅಂಶಗಳಲ್ಲೂ ಬದಲಾವಣೆ ಕಂಡಿದೆ. ಇದು ಪರಿಸರ ಮಾಲಿನ್ಯವನ್ನು ಎತ್ತಿ ತೋರಿಸುವ ಅಂಶವಾಗಿದೆ ಎಂದು ವರದಿ ಹೇಳಿದೆ. ಸಾಮಾನ್ಯವಾಗಿ ಜೇನುತುಪ್ಪದಲ್ಲಿ ಸ್ಥಳೀಯ ಪರಿಸರದ ಅಂಶದ ಪ್ರಭಾವ ಇರುತ್ತದೆ. ಜೇನಿನ ರುಚಿ, ಅದರ  ಸಿಹಿ ಹಾಗೂ ಸುವಾಸನೆಯು ಆಯಾ ಪ್ರದೇಶದ ಹತ್ತಿರದ ಹೂವುಗಳ ಕಾರಣದಿಂದ ನಿರ್ಧಾರವಾಗುತ್ತದೆ. ಆದರೆ, ತುಲೇನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನವು ಜೇನುತುಪ್ಪವು ಹತ್ತಿರದ ಮಾಲಿನ್ಯದ ಒಂದು ನೋಟವನ್ನು ಕೂಡಾ ನೀಡುತ್ತದೆ ಎಂದು ಕಂಡುಹಿಡಿದಿದೆ.

Advertisement

ಪರಿಸರ ಮಾಲಿನ್ಯದ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ ಆರು ವಿಷಕಾರಿ ಲೋಹಗಳ ಅಂಶಗಳು ಯುನೈಟೆಡ್ ಸ್ಟೇಟ್ಸ್ ನ  48 ರಾಜ್ಯಗಳಿಂದ 260 ಜೇನು ಮಾದರಿಗಳಿಂದ ಬೆಳಕಿಗೆ ಬಂದಿದೆ. ಆರ್ಸೆನಿಕ್, ಸೀಸ, ಕ್ಯಾಡ್ಮಿಯಮ್, ನಿಕಲ್, ಕ್ರೋಮಿಯಂ ಮತ್ತು ಕೋಬಾಲ್ಟ್ ಅಂಶಗಳು ಹೆಚ್ಚಾಗಿ ಕಂಡುಬಂದಿದೆ ಎಂದು ವರದಿ ಹೇಳಿದೆ. ಆದರೆ ಯಾವುದೇ ಜೇನುತುಪ್ಪವು ವಿಷಕಾರಿ ಲೋಹಗಳ ಅಸುರಕ್ಷಿತ ಮಟ್ಟವನ್ನು ತೋರಿಸಲಿಲ್ಲ.

ಸಂಶೋಧಕರು ವಿಷಕಾರಿ ಲೋಹದ ಅಂಶಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಕಂಡುಕೊಂಡಿದ್ದಾರೆ. ಪೆಸಿಫಿಕ್ ವಾಯುವ್ಯ  ರಾಜ್ಯಗಳ ಸಮೂಹದಿಂದ ಜೇನುಗಳಲ್ಲಿ ಅತ್ಯಧಿಕ ಆರ್ಸೆನಿಕ್ ಮಟ್ಟಗಳು ಕಂಡುಬಂದಿವೆ. ಲೂಯಿಸಿಯಾನ ಮತ್ತು ಮಿಸ್ಸಿಸ್ಸಿಪ್ಪಿ ಸೇರಿದಂತೆ ಆಗ್ನೇಯದಲ್ಲಿ ಕೋಬಾಲ್ಟ್ ಮಟ್ಟ ಅಧಿಕವಾಗಿತ್ತು. ಹೀಗಾಗಿ ಜೇನುತುಪ್ಪವು ಸ್ಥಳೀಯವಾದ ಪರಿಸರ ಮಾಲಿನ್ಯದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

Advertisement

ಜೇನುನೊಣಗಳು ಆಹಾರ ಹುಡುಕುವಾಗ ಗಾಳಿ, ನೀರು ಮತ್ತು ಸಸ್ಯಗಳಿಂದ ಮಾಲಿನ್ಯಕಾರಕಗಳನ್ನೂ ಸಂಗ್ರಹಿಸುತ್ತದೆ. ಈ ಮಾಲಿನ್ಯಕಾರಕಗಳು ಜೇನುತುಪ್ಪದಲ್ಲಿ ಉಳಿದುಕೊಳ್ಳುತ್ತದೆ. ಇದು ಆಯಾ ಪ್ರದೇಶದ ಪರಿಸರ ಮಾಲಿನ್ಯದ ಚಿತ್ರಣವನ್ನು ನಮಗೆ ನೀಡುತ್ತದೆ ಎನ್ನುತ್ತಾರೆ  ತುಲೆನ್‌ ವಿಶ್ವವಿದ್ಯಾಲಯದ ಸಿಲಿಯಾ  ಪರಿಸರ ಆರೋಗ್ಯ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಟೆವೊಡ್ರೊಸ್ ಗೊಡೆಬೊ. ಜೇನುತುಪ್ಪದಲ್ಲಿ ಕಂಡುಬರುವ ಮಾಲಿನ್ಯವನ್ನು ಅವುಗಳ ಮೂಲಗಳೊಂದಿಗೆ ಇನ್ನಷ್ಟು  ಅಧ್ಯಯನದ ಅಗತ್ಯವಿದೆ. ಏಕೆಂದರೆ ಜೇನುನೊಣಗಳ ಮೂಲಕ ಜೇನುತುಪ್ಪದಲ್ಲಿ ಈ ಅಂಶ ಕಂಡುಬರುವುದಕ್ಕಿಂತ ಹೆಚ್ಚಿನ ಲೋಹಗಳನ್ನು ಪರಿಸರವು ಹೊಂದಿರಬಹುದು ಎನ್ನುತ್ತಾರೆ.

ಪ್ರಾದೇಶಿಕ ಮಾಲಿನ್ಯದ ಮಾದರಿಗಳನ್ನು  ಪತ್ತೆ ಮಾಡಲು ಜೇನುಹುಳ ಹಾಗೂ ಜೇನುತುಪ್ಪ ಉತ್ತಮ ಮಾದರಿಗಳಾಗಿವೆ. ಆದರೆ ಪರಿಸರದಲ್ಲಿ ಯಾವ ಮಾಲಿನ್ಯಕಾರಕಗಳು ಇರುತ್ತವೆ ಮತ್ತು ಅವು ಆಯಾ ಪ್ರದೇಶದ ಸಮುದಾಯದ ಜನರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದರ ಬಗ್ಗೆ ಹೆಚ್ಚು ಮಾಹಿತಿಯನ್ನು ಜೇನುನೊಣಗಳಿಂದ ನಾವು ಇನ್ನೂ ಬಹಳಷ್ಟು ಕಲಿಯಬಹುದು ಎನ್ನುತ್ತದೆ ವರದಿಗಳು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ

ಒಂದು ಕಾಲದಲ್ಲಿ ಬಡವರ ಹಣ್ಣು ಎಂದೇ ಕರೆಯಲ್ಪಟ್ಟ ಹಲಸು ಈಗ ಆರೋಗ್ಯಕರ ಆಹಾರ…

12 hours ago

ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”

ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರೈತರಿಗೆ ಉತ್ತಮ…

12 hours ago

ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ

ಅಡಿಕೆ ಉತ್ಪಾದನಾ ವೆಚ್ಚ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಆಮದು ಬೆಲೆ (MIP)ಯನ್ನು…

1 day ago

ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಭತ್ತದ ಬೆಳೆ ವಿಮೆ ನೋಂದಣಿ ಆರಂಭವಾಗಿದ್ದು, ಆಗಸ್ಟ್‌…

1 day ago

ಎಲ್ ನಿನೋ ಎಚ್ಚರಿಕೆ – ದೇಶದಲ್ಲಿ 43% ಮಳೆ ಕೊರತೆ, ಕರ್ನಾಟಕ ಸೇರಿ 12 ರಾಜ್ಯಗಳ 315 ಜಿಲ್ಲೆಗಳಿಗೆ ಕೇಂದ್ರದ ವಿಶೇಷ ಕೃಷಿ ಯೋಜನೆ

ದೇಶದಲ್ಲಿ 43% ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆ ಎಲ್ ನಿನೋ ಪರಿಣಾಮ ಎದುರಿಸಲು…

2 days ago

ತೆಂಗು ಬೆಳೆಗೂ ಏರಿದ ಉತ್ಪಾದನಾ ವೆಚ್ಚ, ರೈತರು ಸಂಕಷ್ಟದಲ್ಲಿ – ತಮಿಳುನಾಡಿನಲ್ಲಿ ತೆಂಗು ಬೆಳೆಗಾರರಿಗೆ ಕಾರ್ಮಿಕರ ಕೊರತೆ

ತೆಂಗು ಬೆಳೆಗಾರರು ಕಾರ್ಮಿಕ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.…

2 days ago