Advertisement
ವೈರಲ್ ಸುದ್ದಿ

ದೇವಚಳ್ಳ | ಮೂಲಭೂತ ಹಕ್ಕಿಗಾಗಿ ಕಚೇರಿಗೆ ಅಲೆದಾಡಿದ ಯುವಕನಿಗೆ ಸಿಗದ ಸೌಲಭ್ಯ | ಸೀಎಂಗೆ ಮನವಿ ಮಾಡಿರುವ ವಿಡಿಯೋ ವೈರಲ್‌ |

Share
News Flash
| ದೇವಚಳ್ಳ ಗ್ರಾಮದ ಎಲಿಮಲೆಯ ಯುವಕ ಶರತ್ ಕುಮಾರ್‌ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ | ವಿಡಿಯೋ ವೈರಲ್‌ | ಮೂಲಭೂತ ಅವಶ್ಯಕತೆಗೆ ಸ್ಥಳೀಯ ಪಂಚಾಯತ್‌ ಅಲೆದಾಡಿಸಿದೆ ಎನ್ನುವುದು  ಯುವಕನ ವಿಷಾದ |

ಸುಳ್ಯದಲ್ಲಿ  ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಎರಡು ವಾರಗಳ ಹಿಂದೆ ಸುಳ್ಯ ನಗರದ ಕಸದ ಬಗ್ಗೆ ಚಿತ್ರನಟ, ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಅವರು ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಇಡೀ ರಾಜ್ಯಾದ್ಯಂತ ಚರ್ಚೆಯೂ ಆಗಿತ್ತು. ಇದೀಗ ದೇವಚಳ್ಳ ಗ್ರಾಮದ ಯುವಕನೊಬ್ಬ ಕಚೇರಿಗೆ ಅಲೆದು ಅಲೆದು ಯಾವುದೇ ಫಲ ಸಿಗದೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಡಿರುವ ಮನವಿಯ ವಿಡಿಯೋ ಕೂಡಾ ವೈರಲ್‌ ಆಗಿದೆ. 

Advertisement
Advertisement
Advertisement
Advertisement

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಂಬೆಕಲ್ಲು ನಿವಾಸಿ ಶರತ್‌ ಕುಮಾರ್‌ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಕೆಲವು ಸಮಯದ ಹಿಂದೆ ಮಕ್ಕಳಿಗೆ ಶಿಕ್ಷಣ ಹಾಗೂ ಕೃಷಿಯ ಉದ್ದೇಶದಿಂದ ಊರಿಗೆ ಮರಳಿದ್ದರು. ಎಲಿಮಲೆ ಬಳಿ ನಿವೇಶನ ಖರೀದಿ ಮಾಡಿದ್ದರು. ಹಲವು ಬಾರಿ ಅಲೆದಾಟದ ಬಳಿಕ ನಿವೇಶನ ಕನ್ವರ್ಶನ್‌ ಮಾಡಿಸಿಕೊಂಡಿದ್ದರು. ಅದಾದ ಬಳಿಕ ಅಲ್ಲಿಯೇ ವಾಸ ಇದ್ದು 9/11 ಗೆ ಪಡೆಯಲು ಅಲೆದಾಟ ಮಾಡುತ್ತಲೇ ಇದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್‌ ಗೆ ಹಲವು ಬಾರಿ  ಹೋದರೂ ನಿವೇಶನ 9/11  ಹಾಗೂ ಮನೆ ನಂಬರ್‌ ದೊರೆತಿಲ್ಲ. ಇದರಿಂದಾಗಿ ಮನೆ ಪೂರ್ಣಗೊಳಿಸಲು ಬೇಕಾದ ಬ್ಯಾಂಕ್‌ ಸಾಲ ಮಾಡಲೂ ಸಾಧ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕೂಡಾ ಸಾಧ್ಯವಾಗಿಲ್ಲ. ಹೀಗಾಗಿ ವ್ಯವಸ್ಥೆಯ ಬಗ್ಗೆ ರೋಸಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಅವರ ಗಮನ ಸೆಳೆಯಲು ಮನವಿ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ. ಹಲವು ಮಂದಿ ಶರತ್‌ ಕುಮಾರ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂತಹ ಸಮಸ್ಯೆ ಕೃಷಿ ಹಾಗೂ ಗ್ರಾಮೀಣ ಭಾಗವನ್ನು ನೆಚ್ಚಿ ಬಂದಿರುವ ನನ್ನಂತಹವರಿಗೆ, ಸಮಾಜದಲ್ಲಿನ ಬಡವರಿಗೆ ಬಾರದೇ ಇರಲಿ ಎಂದು  ಮನವಿ ಮಾಡಿದ್ದಾರೆ ಶರತ್‌ ಕುಮಾರ್.‌

Advertisement

ಸುಳ್ಯದಲ್ಲಿ  ಕಳೆದ ವಾರ ಕಸದ ಬಗ್ಗೆಯೂ ಇದೇ ಮಾದರಿಯ ಚರ್ಚೆಯಾಗಿತ್ತು. ಸುಳ್ಯದ ಸುಪ್ರೀತ್‌ ಮೋಂಟಡ್ಕ ಅವರು ಚಿತ್ರನಟ ಅನಿರುದ್ಧ ಅವರ ಗಮನಕ್ಕೆ ಸುಳ್ಯದ ಕಸದ ಬಗ್ಗೆ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅನಿರುದ್ಧ ಅವರು ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ವಿಡಿಯೋ ಮಾಡಿ ಗಮನ ಸೆಳೆದಿದ್ದರು. ಆ ವಿಡಿಯೋ ಕೂಡಾ ವೈರಲ್‌ ಆಗಿತ್ತು.

ಸುಳ್ಯದಲ್ಲಿ ಇಲಾಖೆಗಳಿಂದ ತೊಡಗಿ ಹಲವು ಮೂಲಭೂತ ಸಮಸ್ಯೆಗಳಿಗೆ ಮುಕ್ತಿ ಸಿಗದೇ ಇರುವುದು ಇದೀಗ ಜನರೇ ಅಸಹನೆ ವ್ಯಕ್ತಪಡಿಸುವಂತಾಗಿದೆ. ಸುಳ್ಯದ ಹಲವು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ  ಆಗಾಗ ಚರ್ಚೆಯಾಗುತ್ತಿದೆ. ಆದರೂ ಪರಿಹಾರ ಮಾತ್ರಾ ಕಾಣುತ್ತಿಲ್ಲ.

Advertisement

ಗ್ರಾಮೀಣ ಭಾಗ, ಕೃಷಿಯ ಕಡೆಗೆ ಆಸಕ್ತರಾಗಿ , ಮಕ್ಕಳ ಶಿಕ್ಷಣದ ಕಡೆಗೂ ಗಮನಹರಿಸಿ ಊರಿಗೆ ಮರಳಿರುವ ಯುವಕನೊಬ್ಬ ಸಂಕಷ್ಟ ಪಡುವಂತಾಗಿದೆ. ಆತ್ಮನಿರ್ಭರ ಹೆಸರಿನಲ್ಲಿ ಯುವಕರು ಹಳ್ಳಿಯಲ್ಲಿ ನೆಲೆಯೂರಲು ಬೇಕಾದ ವ್ಯವಸ್ಥೆ ಮಾಡಿಸಲಾಗುತ್ತದೆ ಎನ್ನುವ ಯಾರೊಬ್ಬರೂ ಶರತ್‌ ಅವರ ಸಮಸ್ಯೆ ನಿವಾರಣೆಗೆ ಮುಂದಾಗದೇ ಇರುವುದು  ದೌರ್ಭಾಗ್ಯ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…

9 mins ago

ಕಾಫಿ ಉತ್ಪಾದನೆಯಲ್ಲಿ ಭಾರತವು  ಏಳನೇ ದೇಶ |

ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…

13 hours ago

ತೊಗರಿ ಖರೀದಿಗೆ ನೋಂದಣಿ ಮಾಡಿಸುವಂತೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…

13 hours ago

ಚಿಕ್ಕಮಗಳೂರು ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ | ಡ್ರೋನ್‌ ಮೊರೆ ಹೋಗುತ್ತಿರುವ ಅರಣ್ಯ ಇಲಾಖೆ |

ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…

13 hours ago

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆ | ಹವಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…

23 hours ago

ಕುಂಭಸ್ನಾನ ಮತ್ತು ವಿಜ್ಞಾನ

ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…

23 hours ago