ಪ್ರಮುಖ

#DeveGowda | ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ಲೋಕ, ಪ್ರಾರ್ಥನೆಗಳನ್ನು ಓದಿದ ಮಾಜಿ ಪ್ರಧಾನಿ ಎಚ್‌ ಡಿ ದೇವೇ ಗೌಡ | ದೇವೇ ಗೌಡರ ಜೀವನೋತ್ಸಾಹದ ಮಾದರಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಎಚ್‌ ಡಿ ದೇವೇ ಗೌಡ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಕ್ಕೆ ಕ್ಷೇತ್ರಕ್ಕೆ ಪ್ರತೀ ವರ್ಷ ಭೇಟಿ ನೀಡುವ ದೇವೇ ಗೌಡರು ಈ ಬಾರಿಯೂ ಕ್ಷೇತ್ರ ದರ್ಶನ ಮಾಡಿದ್ದಾರೆ. ಈ ಬಾರಿ ಬಿಡುವಿನ ನಡುವೆ ಸುಬ್ರಹ್ಮಣ್ಯ ಶ್ಲೋಕ, ಪ್ರಾರ್ಥನೆಗಳ ಪುಸ್ತಕವನ್ನು ಓದುತ್ತಾ ಕುಳಿತಿದ್ದರು.

Advertisement
Advertisement

ಭಾನುವಾರ ಸಂಜೆ‌ ಹೆಲಿಕ್ಟಾಪರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಬೇಕಿದ್ದ ದೇವೇ ಗೌಡರು ಪ್ರತಿಕೂಲ ಹವಾಮಾನದ  ಕಾರಣದಿಂದ ಹೆಲಿಕಾಪ್ಟರ್‌ ಬಾರದೆ ವಿಮಾನ ಮೂಲಕ ಮಂಗಳೂರು ಬಂದು ಅಲ್ಲಿಂದ ವಾಹನದಲ್ಲಿ  ಕುಕ್ಕೆಗೆ ತಡರಾತ್ರಿ ತಲಪಿದರು.

ದೇವೇ ಗೌಡರಿಗೆ ಆಶ್ಲೇಷ ನಕ್ಷತ್ರದಂದು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಆಗಬೇಕಿತ್ತು, ಪೂಜೆ ಸಲ್ಲಿಸಬೇಕಿತ್ತು. ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ನಕ್ಷತ್ರ ವಿಶೇಷವಾದ ದಿನವಾಗಿದೆ. ದೇವೇ ಗೌಡರು ಪ್ರತೀ ಬಾರಿ ವಿಶೇಷ ಪೂಜೆ, ಸೇವೆ ಸಲ್ಲಿಸಲು ಬಂದಿರುವುದು ಕೂಡಾ ಆಶ್ಲೇಷ ನಕ್ಷತ್ರದಂದೇ. ಈ ಬಾರಿ ಪತ್ನಿ ಚೆನ್ನಮ್ಮ ಸಹಿತ ಆಗಮಿಸಿದ ದೇವೇ ಗೌಡರು ಸಹಾಯಕರ ಮೂಲಕ ಕ್ಷೇತ್ರಕ್ಕೆ ಸುತ್ತು ಹಾಕಿ ಪೂಜೆ ಸಲ್ಲಿಸಿದರು.

ದೇವೇ ಗೌಡರ ಜೀವನೋತ್ಸಾಹ ಎಲ್ಲರಿಗೂ ಮೆಚ್ಚುಗೆಯಾಗುವಂತಹದ್ದು.90 ವರ್ಷದ ದೇವೇ ಗೌಡರು ಈಗಲೂ ಧ್ಯಾನದಂತಹ ಕೆಲಸಕ್ಕೂ ಸಮಯ ಮೀಸಲಿಡುತ್ತಾರೆ. ಭಾನುವಾರ ರಾತ್ರಿ 10 ಘಂಟೆ ರಾತ್ರಿ ಮಂಗಳೂರು ತಲುಪಿ ಅಲ್ಲಿಂದ 1.30 ಕ್ಕೆ ಕುಕ್ಕೆ ಗೆ ಬಂದರು.6 ಘಂಟೆಗೆ ಮತ್ತೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಪೂಜೆಗೆ ಹೊರಟು ಕಾರಿನಲ್ಲಿ ಕುಳಿತು ಚೆನ್ನಮ್ಮ ಅವರನ್ನು ಕಾಯುತ್ತಿದ್ದರು. ಈ 10 ನಿಮಿಷದ ಕಾಲವನ್ನು ವ್ಯರ್ಥ ಮಾಡದೆ ತನ್ನ ಬಳಿಯೇ ಇದ್ದ ಸುಬ್ರಹ್ಮಣ್ಯ ಶ್ಲೋಕ, ಪ್ರಾರ್ಥನೆಗಳ ಪುಸ್ತಕವನ್ನು ವಾಚಿಸಿದರು. ಈ ಬಗ್ಗೆ ಜೆಡಿಎಸ್‌ ಮುಖಂಡ ಎಂ ಬಿ ಸದಾಶಿವ ಅವರು ತಮ್ಮ ಪೇಸ್‌ಬುಕ್‌ ವಾಲಲ್ಲಿ ಬರೆದುಕೊಂಡಿದ್ದಾರೆ.

Advertisement

ಮಾಜಿ ಪ್ರಧಾನಿ ಎಚ್‌ ಡಿ ದೇವೇ ಗೌಡರು ಏಕಾಏಕಿ ಈ ಪುಸ್ತಕವನ್ನು ತೆರೆದು ಓದಲು ಸಾಧ್ಯವಿಲ್ಲ, ಈ ಹಿಂದೆಯೂ ಅವರು ಶ್ಲೋಕ, ಪ್ರಾರ್ಥನೆಯ ಪುಸ್ತಕಗಳನ್ನು ಓದಿರುತ್ತಾರೆ. ವ್ಯಕ್ತಿಯ ಬದುಕಿನ ಯಶಸ್ಸಿನ ಹಿಂದೆ, ಜೀವನೋತ್ಸಾಹದ ಹಿಂದೆ ಇಂತಹ ಸಂಗತಿಗಳೂ ಕಾರಣವಾಗುತ್ತದೆ.

ಜೆಡಿಎಸ್‌ ಮುಖಂಡ ಎಂ ಬಿ ಸದಾಶಿವ ಅವರು ಈ ಬಗ್ಗೆ ಪೇಸ್‌ಬುಕ್‌ ವಾಲಲ್ಲಿ  ಬರೆದುಕೊಂಡಿದ್ದಾರೆ. ಅನೇಕರು ದೇವೇ ಗೌಡರ ಜೀವನೋತ್ಸಾಹದ ಬಗ್ಗೆ, ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ

ದೆಹಲಿಯಲ್ಲಿ  ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…

4 hours ago

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

18 hours ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

19 hours ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

19 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

1 day ago