ಸ್ನೇಹ ಶಾಲೆಯ ಸೂರ್ಯಾಲಯದ ಮುಕ್ತಪರಿಸರದಲ್ಲಿ ಡಿಸೆಂಬರ್ 15 ರಿಂದ ನಿರಂತರವಾಗಿ ಬೆಳಿಗ್ಗೆ 5.30 ರಿಂದ ಧನು ಪೂಜೆ ನಡೆಯುತ್ತಿದೆ. ಇದು ಪತ್ರಂ, ಪುಷ್ಪಂ, ಫಲಂ ತೋಯಂ ಎಂಬ ನಿಸರ್ಗದ ವಸ್ತುಗಳನ್ನೇ ಆರಾಧನೆಗೆ ಉಪಯೋಗಿಸಿ ಮಾಡುವ ಸರಳ ಪೂಜೆ. ಗ್ರಹಗಳಿಗೆ ಪ್ರದಕ್ಷಿಣೆ, ಸೂರ್ಯನಮಸ್ಕಾರ, ಸರಳ ಯೋಗಾಸನಗಳು, ಸೂರ್ಯಾಷ್ಟಕ, ಅಥರ್ವಶೀರ್ಷ, ರಾಮರಕ್ಷಾ ಹೇಳಿ ಮಂಗಳಾರತಿ ಮಾಡಿದಲ್ಲಿಗೆ ಪೂಜೆ ಸಮಾಪ್ತವಾಗುತ್ತದೆ. ಈ ಆರಾಧನೆಯು ಇದೇ ಜನವರಿ 14 ಮಕರ ಸಂಕ್ರಮಣದ ಆಚರಣೆಯೊಂದಿಗೆ ಮುಕ್ತಾಯವಾಗಲಿದೆ. ಆಸಕ್ತರು ಬೆಳಿಗ್ಗೆ 5.30 ಕ್ಕೇ ಬಂದರೆ 6.15 ರೊಳಗೆ ಹಿಂದಿರುಗಬಹುದು. ಯೋಗಾಸನಗಳನ್ನು ಮಾಡುವವರಿಗೆ ಸೂರ್ಯಾಲಯವು ತೆರೆದಿರುತ್ತದೆ. ಆಸಕ್ತರಿಗೆ ಸ್ವಾಗತವಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…