ಸುದ್ದಿಗಳು

#Tomato | ಮಾರುಕಟ್ಟೆಗೆ ಬಂದಿದೆ ಬಣ್ಣ ಬಣ್ಣದ ತರಹೇವಾರಿ ಟೊಮೆಟೊ ಹಣ್ಣು…! | ಕೆಂಪು ಟೊಮೆಟೋಗಿಂತ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದಕ್ಕೆ…! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಟೊಮೆಟೋ ಬೆಲೆ ಗಗನಕ್ಕೇರಿ ಕುಳಿತಿದೆ. ದಿನದ ಸಾಂಬಾರಿಗೂ ಒಂದು ಟೊಮೆಟೋ #Tomato ಹಾಕಲು ಹಿಂದೆ ಮುಂದೆ ನೋಡುವಂತಾಗಿದೆ. ಅಂತದ್ದರಲ್ಲಿ ಮಾರುಕಟ್ಟೆಗೆ ಕಪ್ಪು ಟೊಮೆಟೋ, ಚಾಕಲೇಟ್ ಟೊಮೆಟೋ, ಹೀಗೆ ತರತರದ ಟೊಮೆಟೋ ಬಂದ್ರೆ ಅದನ್ನು ಕೊಳ್ಳುವವರಾರೋ..?. ಆದರೆ ಕೆಂಪು ಟೊಮೆಟೊ ಕೃಷಿ ಕೆಲವೊಮ್ಮೆ ಲಾಭ ನೀಡಿದ್ರೆ, ಇನ್ನೂ ಕೆಲವೊಮ್ಮೆ ಭೀಕರ ನಷ್ಟ ತರುತ್ತದೆ. ರೇಟ್‌ ಕಡಿಮೆಯಾದ್ರೆ ರೈತರು ಟೊಮೆಟೊಗಳನ್ನು ರಸ್ತೆಗೆ ಎಸೆದು ಬಿಡ್ತಾರೆ. ದಿನಬಳಕೆಯ ಕೆಂಪು ಟೊಮೆಟೋ ಪರಿಸ್ಥಿತಿ ಹೀಗಿರುವಾಗ ಈ ಕಪ್ಪು ಟೊಮೆಟೊ, ಚಾಕಲೇಟ್ ಟೊಮೆಟೋ ಕೊಳ್ಳುವವರಾರು ಅನ್ನೋದೆ ಪ್ರಶ್ನೆ. ಆದರೆ ಇದಕ್ಕೆ ಭಾರಿ ಬೇಡಿಕೆ ಇದೆಯಂತೆ, ಬೆಳೆದರೆ ಯಾವಾಗಲೂ ಲಾಭವನ್ನೇ ತಂದುಕೊಡುತ್ತೆ ಅಂತೆ…!

Advertisement

 ಈ ಚಾಕೊಲೇಟ್ ಟೊಮ್ಯಾಟೊಗಳು ಕಾಯಿ ಇದ್ದಾಗ ಹಸಿರು ಬಣ್ಣದಲ್ಲಿ ಕಾಣುತ್ತವೆ. ಆದರೆ ಮಾಗಿದಾಗ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತವೆ. ಪಶ್ಷಿಮ ಬಂಗಾಳದ ಮುಸ್ತಫಾನಗರದ ದಂಪತಿ ಪ್ರಥಮ ಬಾರಿಗೆ ಈ ಚಾಕಲೇಟ್ ಟೊಮ್ಯಾಟೊ ಕೃಷಿ ಮಾಡಿ ಮಾರಾಟಕ್ಕೆ ಇಟ್ಟಿದ್ದಾರೆ.  ಚಾಕೋಲೇಟ್ ಟೊಮ್ಯಾಟೊ ಬೀಜವನ್ನು ಒಮ್ಮೆ ಬಿತ್ತಿದರೆ 4-5 ತಿಂಗಳಿಗೆ ಉತ್ತಮ ಬೆಳೆಯನ್ನು ಪಡೆಯಬಹುದು. ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಈ ಟೊಮ್ಯಾಟೊ ಬೀಜಗಳನ್ನು ಬಿತ್ತಿದರೆ, ಜೂನ್-ಜುಲೈನಲ್ಲಿ ಟೊಮ್ಯಾಟೊಗಳು ಕಟಾವಿಗೆ ಬರುತ್ತವೆ.

ಈ ಟೊಮ್ಯಾಟೊದಿಂದ ಚಟ್ನಿಯನ್ನು ತಯಾರಿಸಲಾಗುತ್ತದೆ. ಇವು ಇತರ ಟೊಮ್ಯಾಟೊಗಳಂತೆ ಹುಳಿಯಾಗಿರುವುದಿಲ್ಲ, ಆದರೆ ಸಿಹಿಯಾಗಿರುತ್ತವೆ. ಹಾಗಾಗಿ ತಿನ್ನಲು ತುಂಬಾ ರುಚಿಕರವಾಗಿವಾಹಿರುತ್ತದೆ.ಈ ಟೊಮ್ಯಾಟೊಗಳನ್ನು ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಈ ಟೊಮ್ಯಾಟೊಗಳು ಮೂಲತಃ ಸೋಲಾನಮ್ ಲೈಕೋಪರ್ಸಿಕಮ್ ಜಾತಿಯಿಂದ ಬಂದವು. ಇವು ಕಾಯಿಯಾಗಿದ್ದಾಗ ಹಸಿರು ಮತ್ತು ಮಾಗಿದಾಗ ಚಾಕೊಲೇಟ್ ಬಣ್ಣವನ್ನು ಹೊಂದಿರುತ್ತವೆ. ಈ ಟೊಮೆಟೊ ಪ್ರಭೇದವು ಪಶ್ಚಿಮ ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಕ್ಕೆ ಸ್ಥಳೀಯವಾಗಿದೆ. ಇದರ ಬಣ್ಣ ಚಾಕೊಲೇಟ್‌ನಂತೆ ಮತ್ತು ಅದರ ರುಚಿ ಚಾಕೊಲೇಟ್‌ನಂತೆಯೇ ಇರುತ್ತದೆ.

(ಕೃಪೆ: ಅಂತರ್ಜಾಲ)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ

ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

1 hour ago

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

2 hours ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

1 day ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago

ಹವಾಮಾನ ವರದಿ | 09-08-2025 | ಬಂಗಾಳಕೊಲ್ಲಿಯ ವಾಯುಭಾರ ಕುಸಿತ- ಮುಂಗಾರು ಚುರುಕು |

ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…

2 days ago

ಹೊಸರುಚಿ | ಹಲಸಿನ ಹಣ್ಣಿನ ಹಲ್ವ

ಹಲಸಿನ ಹಣ್ಣಿನ ಹಲ್ವಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 1 ಕಪ್. ಜಾರ್…

2 days ago