MIRROR FOCUS

ಅಂತರ್ಜಲ ಹೆಚ್ಚಳಕ್ಕೆ ಜಿಲ್ಲಾಧಿಕಾರಿಯ ದಿಟ್ಟ ಕ್ರಮ | ಮೂರು ವರ್ಷದಲ್ಲಿ ಆರು ಮೀಟರ್ ಅಂತರ್ಜಲ ಹೆಚ್ಚಳ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತೆಲಂಗಾಣದ(Telangana) ರಾಜನ್ನ- ಸಿರಿಸಿಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ(DC) 2012 ನೇ ಸಾಲಿನ ಐಎಎಸ್ ಅಧಿಕಾರಿ(IAS officer) ಜಿಲ್ಲೆಯಾದ್ಯಂತ ಅಂತರ್ಜಲ(found water) ವೃದ್ಧಿಯಾಗಿ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ, ಅಲ್ಲಿನ ಅಂತರ್ಜಲ ಮಟ್ಟ ಕೇವಲ ಮೂರು ವರ್ಷಗಳಲ್ಲಿ ಆರು ಮೀಟರ್‌ಗಳಷ್ಟು ಹೆಚ್ಚಾಗಿದೆ.

Advertisement

ಭಾರತದ ಹೆಚ್ಚಿನ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ. ಕ್ಷೀಣಿಸುತ್ತಿರುವ ಅಂತರ್ಜಲವು ಜಮೀನುಗಳು, ಕೈಗಾರಿಕೆಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಅಗತ್ಯಗಳಿಗೆ ದೊಡ್ಡ ಅಪಾಯ ಎನಿಸಿದೆ. ತೆಲಂಗಾಣದ ಒಂದು ಜಿಲ್ಲೆಯಲ್ಲಿ ಅಂತರ್ಜಲ ಕೊರತೆಯನ್ನು ನಿವಾರಿಸಿ, ಅದನ್ನು ವೃದ್ಧಿಸುವ ಸವಾಲು ಕೈಗೆತ್ತಿಕೊಂಡು ಅದರಲ್ಲಿ ಅಧ್ಬುತ ಯಶಸ್ಸು ಸಾಧಿಸಿರುವ ಐಎಎಸ್ ಅಧಿಕಾರಿ ದೇವರಕೊಂಡ ಕೃಷ್ಣ ಭಾಸ್ಕರ್.

ಅವರು ಈ ಕುರಿತು ಮಾತನಾಡಿ, “ಜಿಲ್ಲೆಯ ನೀರಿನ ಕೊರತೆ ಎಂದಿಗೂ ಮುಗಿಯದ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ‌ ಮೊದಲಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳು ಅಥವಾ ಮಂಡಲಗಳನ್ನು ಬರಪೀಡಿತ ಅಥವಾ ಅರೆ ಬರಪೀಡಿತ ವರ್ಗದಲ್ಲಿ ಲೇಬಲ್ ಮಾಡಲಾಯಿತು” ಎಂದು ತಮ್ಮ ಯೋಜನೆಯ ಪ್ರಾರಂಭಿಕ ಹಂತವನ್ನು ವಿವರಿಸುತ್ತಾರೆ.

ನೀರಿನ ಕೊರತೆಯನ್ನು ನಿಭಾಯಿಸಲು, ಜಿಲ್ಲೆಯು ಹಳೆಯ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸುವುದು, ನೀರಿನ ಕೊರತೆ ಇರುವ ಕಡೆಗಳಲ್ಲಿ ಆಧುನಿಕ ಕೊಳವೆ ಬಾವಿ ಸ್ಥಾಪಿಸುವ ಕಾರ್ಯ ಪ್ರಾರಂಭಿಸಲಾಯಿತು. ಜಲಾಶಯಗಳಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲಾಯಿತು. ಅಸ್ತಿತ್ವದಲ್ಲಿದ್ದ ಜಲಮೂಲಗಳನ್ನು ಪುನಶ್ಚೇತನಗೊಳಿಸಲಾಯಿತು. ಹೊಸ ಇಂಗುಗುಂಡಿಗಳು, ಚೆಕ್ ಡ್ಯಾಂಗಳನ್ನು ಸಮರೋಪಾಧಿಯಲ್ಲಿ ತೋಡಿಸಲಾಯಿತು‌. ಆ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಇಂಗುವಿಕೆಯ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲಾಯಿತು.

ಹೀಗೆ ಅಂತರ್ಜಲ ಸಂರಕ್ಷಣೆ, ಅಭಿವೃದ್ಧಿಯ ಸಂಯೋಜಿತ ಪ್ರಯತ್ನಗಳನ್ನು ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಧಾನದೊಂದಿಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಯಿತು. ಈ ಮೂಲಕ ಅಲ್ಲಿ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಹೆಚ್ಚಳ ಸಾಧ್ಯವಾಯಿತು‌ ಎನ್ನುತ್ತಾರೆ.

Source: The Better India

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

4 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

9 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

17 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

18 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

1 day ago