ತೆಲಂಗಾಣದ(Telangana) ರಾಜನ್ನ- ಸಿರಿಸಿಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ(DC) 2012 ನೇ ಸಾಲಿನ ಐಎಎಸ್ ಅಧಿಕಾರಿ(IAS officer) ಜಿಲ್ಲೆಯಾದ್ಯಂತ ಅಂತರ್ಜಲ(found water) ವೃದ್ಧಿಯಾಗಿ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ, ಅಲ್ಲಿನ ಅಂತರ್ಜಲ ಮಟ್ಟ ಕೇವಲ ಮೂರು ವರ್ಷಗಳಲ್ಲಿ ಆರು ಮೀಟರ್ಗಳಷ್ಟು ಹೆಚ್ಚಾಗಿದೆ.
ಭಾರತದ ಹೆಚ್ಚಿನ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ. ಕ್ಷೀಣಿಸುತ್ತಿರುವ ಅಂತರ್ಜಲವು ಜಮೀನುಗಳು, ಕೈಗಾರಿಕೆಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಅಗತ್ಯಗಳಿಗೆ ದೊಡ್ಡ ಅಪಾಯ ಎನಿಸಿದೆ. ತೆಲಂಗಾಣದ ಒಂದು ಜಿಲ್ಲೆಯಲ್ಲಿ ಅಂತರ್ಜಲ ಕೊರತೆಯನ್ನು ನಿವಾರಿಸಿ, ಅದನ್ನು ವೃದ್ಧಿಸುವ ಸವಾಲು ಕೈಗೆತ್ತಿಕೊಂಡು ಅದರಲ್ಲಿ ಅಧ್ಬುತ ಯಶಸ್ಸು ಸಾಧಿಸಿರುವ ಐಎಎಸ್ ಅಧಿಕಾರಿ ದೇವರಕೊಂಡ ಕೃಷ್ಣ ಭಾಸ್ಕರ್.
ಅವರು ಈ ಕುರಿತು ಮಾತನಾಡಿ, “ಜಿಲ್ಲೆಯ ನೀರಿನ ಕೊರತೆ ಎಂದಿಗೂ ಮುಗಿಯದ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಮೊದಲಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳು ಅಥವಾ ಮಂಡಲಗಳನ್ನು ಬರಪೀಡಿತ ಅಥವಾ ಅರೆ ಬರಪೀಡಿತ ವರ್ಗದಲ್ಲಿ ಲೇಬಲ್ ಮಾಡಲಾಯಿತು” ಎಂದು ತಮ್ಮ ಯೋಜನೆಯ ಪ್ರಾರಂಭಿಕ ಹಂತವನ್ನು ವಿವರಿಸುತ್ತಾರೆ.
ನೀರಿನ ಕೊರತೆಯನ್ನು ನಿಭಾಯಿಸಲು, ಜಿಲ್ಲೆಯು ಹಳೆಯ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸುವುದು, ನೀರಿನ ಕೊರತೆ ಇರುವ ಕಡೆಗಳಲ್ಲಿ ಆಧುನಿಕ ಕೊಳವೆ ಬಾವಿ ಸ್ಥಾಪಿಸುವ ಕಾರ್ಯ ಪ್ರಾರಂಭಿಸಲಾಯಿತು. ಜಲಾಶಯಗಳಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲಾಯಿತು. ಅಸ್ತಿತ್ವದಲ್ಲಿದ್ದ ಜಲಮೂಲಗಳನ್ನು ಪುನಶ್ಚೇತನಗೊಳಿಸಲಾಯಿತು. ಹೊಸ ಇಂಗುಗುಂಡಿಗಳು, ಚೆಕ್ ಡ್ಯಾಂಗಳನ್ನು ಸಮರೋಪಾಧಿಯಲ್ಲಿ ತೋಡಿಸಲಾಯಿತು. ಆ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಇಂಗುವಿಕೆಯ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲಾಯಿತು.
ಹೀಗೆ ಅಂತರ್ಜಲ ಸಂರಕ್ಷಣೆ, ಅಭಿವೃದ್ಧಿಯ ಸಂಯೋಜಿತ ಪ್ರಯತ್ನಗಳನ್ನು ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಧಾನದೊಂದಿಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಯಿತು. ಈ ಮೂಲಕ ಅಲ್ಲಿ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಹೆಚ್ಚಳ ಸಾಧ್ಯವಾಯಿತು ಎನ್ನುತ್ತಾರೆ.
Source: The Better India
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…