ತೆಲಂಗಾಣದ(Telangana) ರಾಜನ್ನ- ಸಿರಿಸಿಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ(DC) 2012 ನೇ ಸಾಲಿನ ಐಎಎಸ್ ಅಧಿಕಾರಿ(IAS officer) ಜಿಲ್ಲೆಯಾದ್ಯಂತ ಅಂತರ್ಜಲ(found water) ವೃದ್ಧಿಯಾಗಿ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ, ಅಲ್ಲಿನ ಅಂತರ್ಜಲ ಮಟ್ಟ ಕೇವಲ ಮೂರು ವರ್ಷಗಳಲ್ಲಿ ಆರು ಮೀಟರ್ಗಳಷ್ಟು ಹೆಚ್ಚಾಗಿದೆ.
ಭಾರತದ ಹೆಚ್ಚಿನ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ. ಕ್ಷೀಣಿಸುತ್ತಿರುವ ಅಂತರ್ಜಲವು ಜಮೀನುಗಳು, ಕೈಗಾರಿಕೆಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಅಗತ್ಯಗಳಿಗೆ ದೊಡ್ಡ ಅಪಾಯ ಎನಿಸಿದೆ. ತೆಲಂಗಾಣದ ಒಂದು ಜಿಲ್ಲೆಯಲ್ಲಿ ಅಂತರ್ಜಲ ಕೊರತೆಯನ್ನು ನಿವಾರಿಸಿ, ಅದನ್ನು ವೃದ್ಧಿಸುವ ಸವಾಲು ಕೈಗೆತ್ತಿಕೊಂಡು ಅದರಲ್ಲಿ ಅಧ್ಬುತ ಯಶಸ್ಸು ಸಾಧಿಸಿರುವ ಐಎಎಸ್ ಅಧಿಕಾರಿ ದೇವರಕೊಂಡ ಕೃಷ್ಣ ಭಾಸ್ಕರ್.
ಅವರು ಈ ಕುರಿತು ಮಾತನಾಡಿ, “ಜಿಲ್ಲೆಯ ನೀರಿನ ಕೊರತೆ ಎಂದಿಗೂ ಮುಗಿಯದ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಮೊದಲಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳು ಅಥವಾ ಮಂಡಲಗಳನ್ನು ಬರಪೀಡಿತ ಅಥವಾ ಅರೆ ಬರಪೀಡಿತ ವರ್ಗದಲ್ಲಿ ಲೇಬಲ್ ಮಾಡಲಾಯಿತು” ಎಂದು ತಮ್ಮ ಯೋಜನೆಯ ಪ್ರಾರಂಭಿಕ ಹಂತವನ್ನು ವಿವರಿಸುತ್ತಾರೆ.
ನೀರಿನ ಕೊರತೆಯನ್ನು ನಿಭಾಯಿಸಲು, ಜಿಲ್ಲೆಯು ಹಳೆಯ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸುವುದು, ನೀರಿನ ಕೊರತೆ ಇರುವ ಕಡೆಗಳಲ್ಲಿ ಆಧುನಿಕ ಕೊಳವೆ ಬಾವಿ ಸ್ಥಾಪಿಸುವ ಕಾರ್ಯ ಪ್ರಾರಂಭಿಸಲಾಯಿತು. ಜಲಾಶಯಗಳಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲಾಯಿತು. ಅಸ್ತಿತ್ವದಲ್ಲಿದ್ದ ಜಲಮೂಲಗಳನ್ನು ಪುನಶ್ಚೇತನಗೊಳಿಸಲಾಯಿತು. ಹೊಸ ಇಂಗುಗುಂಡಿಗಳು, ಚೆಕ್ ಡ್ಯಾಂಗಳನ್ನು ಸಮರೋಪಾಧಿಯಲ್ಲಿ ತೋಡಿಸಲಾಯಿತು. ಆ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಇಂಗುವಿಕೆಯ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲಾಯಿತು.
ಹೀಗೆ ಅಂತರ್ಜಲ ಸಂರಕ್ಷಣೆ, ಅಭಿವೃದ್ಧಿಯ ಸಂಯೋಜಿತ ಪ್ರಯತ್ನಗಳನ್ನು ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಧಾನದೊಂದಿಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಯಿತು. ಈ ಮೂಲಕ ಅಲ್ಲಿ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಹೆಚ್ಚಳ ಸಾಧ್ಯವಾಯಿತು ಎನ್ನುತ್ತಾರೆ.
Source: The Better India
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…