ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ ಡಿಎಂಕೆ ಕೌನ್ಸಿಲರ್ ಜಾನ್ ಅಲಿಯಾಸ್ ಶ್ರೀನಿವಾಸನ್ ಅವರನ್ನು ಕಂದಾಯ ಗುಪ್ತಚರ ಇಲಾಖೆ (ಡಿಆರ್ಐ) ವಶಕ್ಕೆ ತೆಗೆದುಕೊಂಡಿದೆ.
ಕಳೆದ ನವೆಂಬರ್ ಕೊನೆಯ ವಾರ ಅಡಿಕೆಯನ್ನು ಗೋಡಂಬಿ ಎಂದು ನಮೂದಿಸಿ ಇಂಡೋನೇಶಿಯಾದಿಂದ ತೂತುಕುಡಿ ಬಂದರಿಗೆ ಆಮದು ಮಾಡಿಕೊಂಡಿದ್ದ ಪ್ರಕರಣದಲ್ಲಿ ಡಿಆರ್ಐ ಒಂದು ಕಂಟೇನರ್ ಅನ್ನು ವಶಪಡಿಸಿಕೊಂಡಿತ್ತು. ತನಿಖೆಯ ವೇಳೆ ಅಡಿಕೆಯನ್ನು ಬೇರೆ ಉತ್ಪನ್ನ ಎಂದು ತಪ್ಪಾಗಿ ಘೋಷಿಸುವ ಮೂಲಕ ಆಮದು ಮಾಡಿಕೊಳ್ಳುವ ವ್ಯಕ್ತಿಗಳ ಗುಂಪಿನ ಬಗ್ಗೆ ಸುಳಿವು ಲಭ್ಯವಾಗಿತ್ತು.
ಅಡಿಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ವಾಣಿಜ್ಯ ಸಚಿವಾಲಯ ವಿಧಿಸಿದ ನಿರ್ಬಂಧಗಳು ಹಾಗೂ ಆಮದು ಸುಂಕಗಳ ಕಾರಣ, ಡಿ ಆರ್ ಐ ಗೋಡಂಬಿ ಎಂದು ಘೋಷಿಸಲಾದ ಕಂಟೇನರ್ ಪರಿಶೀಲಿಸಿತು. ಅದನ್ನು ತೆರೆದಾಗ 1.25 ಕೋಟಿ ಮೌಲ್ಯದ 22 ಮೆಟ್ರಿಕ್ ಟನ್ ಅಡಿಕೆ ಪತ್ತೆಯಾಗಿತ್ತು. ಬಳಿಕ ತನಿಖೆಯ ವೇಳೆ ಶಿಪ್ಪಿಂಗ್ ಕಂಪನಿಯ ಇಬ್ಬರು ಉದ್ಯೋಗಿಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಯಿತು. ಹೆಚ್ಚಿನ ವಿಚಾರಣೆಯಲ್ಲಿ ಜಾನ್ ಅಲಿಯಾಸ್ ಶ್ರೀನಿವಾಸನ್ ಕಳ್ಳಸಾಗಣೆ ಕಾರ್ಯಾಚರಣೆಗೆ ಸಂಬಂಧಿಸಿದ್ದು, ಗುರುವಾರ ಡಿ ಆರ್ ಐ ವಶಕ್ಕೆ ಪಡೆದಿದೆ ತನಿಖೆ ಮುಂದುವರಿದಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಆಗಮನ ನಿರೀಕ್ಷೆಗಿಂತಲೂ ಮೊದಲೇ ಆಗಲಿದೆ. ಜೊತೆಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆ ತಟ್ಟೆಯ ನಿಷೇಧವು ಅಡಿಕೆ ಕೃಷಿಗೆ ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಸತತ…
ತಿರುಗಾಟವು ಜ್ಞಾನವೃದ್ಧಿಗೆ ಹೇತು. ಓಡಾಡದವನ ಜ್ಞಾನಕ್ಕೆ ಉಸಿರು ಇರುವುದಿಲ್ಲ. ತಂತ್ರಜ್ಞಾನದ ವಾಯುವೇಗದ ಕಾಲಘಟ್ಟದಲ್ಲಿ…
ದೆಹಲಿಯಲ್ಲಿ ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…
ಮುಂದಿನ 5 ದಿನಗಳ ಕಾಲ ಕೇರಳದಲ್ಲಿಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ…