‘ಕವಳ’ ಅಂದ್ರೆ ಗೊತ್ತು…| ‘ಕಳವೆ’ ಗೊತ್ತಾ ? ನಮ್ಮೂರ ಬೀಜ ಬೆಳೆಸೋಣ-ಬಳಸೋಣ-ಬಾಳಿಸೋಣ

January 11, 2024
1:44 PM
ಜನವರಿ 12-13, ಶುಕ್ರವಾರ-ಶನಿವಾರ ಕೊಲ್ಹಾಪುರ ಸಮೀಪವಿರುವ ಕನ್ನೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ಕೃಷಿ ಕಾಯಕ ಕ್ಷೇತ್ರದ ಈ ರೀತಿಯ ಹಲವು ಪ್ರಶ್ನೆಗಳಿಗೆ ಪರಿಹಾರ-ಉತ್ತರ ಹುಡುಕುವ ತವಕ ಇದೆ. ಈ ಸಂಬಂಧವಾಗಿ ಆ ಶ್ರೀ ಆನಂದ ಅವರು ಬರೆದಿರುವ ಬರಹ ಇಲ್ಲಿದೆ...

ಶಿವಮೊಗ್ಗ ಜಿಲ್ಲೆಯ ಸಾಗರ(Shivmoga,Sagara) ವೈವಿಧ್ಯ ಭತ್ತದ ಪ್ರಬೇಧಗಳ(Paddy breed) ಕಣಜವೇ ಆಗಿತ್ತು… ಸಿಹಿ ಕೆಂಪಕ್ಕಿಯ ಸಿದ್ಧಸಾಲೆ, ಶ್ರೀಮಂತರ ಅಕ್ಕಿ(Rice) ಎಂದೇ ಖ್ಯಾತವಾದ ರಾಜಭೋಗ-ರಾಜಮುಡಿ , ಪಾಯಸಕ್ಕೆ ಪರಿಮಳ ಕೊಡುವ ಜೀರಿಗೆ ಸಣ್ಣ -ಗಂಧಸಾಲೆ-ಕುಂಕುಮ ಕೇಸರಿ , ‘ಕಳೆಯಬಾರದ ತಾಯಿ ಭತ್ತ ‘ ಎಂದೆ ಗೌರವಿಸಿ ಪ್ರತಿ ವರ್ಷ ತಪ್ಪದೆ ಬೆಳೆಸುವ ಕಳವೆ, ಚಕ್ಕುಲಿಗೆ ಪ್ರಿಯವಾದ ಕರೆಕಾಲ್ದಡಿಗ , ಬುತ್ತಿ ಊಟಕ್ಕೆ ಅತ್ಯುತ್ತಮವಾದ ಸಣ್ಣವಾಳ್ಯ, ಪಸೆ ಹೆಚ್ಚು ಬೇಡದ ಹಕ್ಲು ಹೊನಸು, ತೀರಾ ತೆಳು ಸಿಪ್ಪೆಯ ಪುಟ್ಟ ಹೆಗ್ಗೆ , ಜನಪ್ರಿಯವಾದ ಆಲೂರು ಸಣ್ಣ , ನೆರೆಗೂ ಸೆಡ್ಡು ಹೊಡೆವ ನೆರಗುಳಿ, ಗಂಡು ಭತ್ತ ತೆಗೆಯಲು ಸಹಕರಿಸುವ ನ್ಯಾರೆಮಿಂಡ…ಅಬ್ಬಬ್ಬಾ ಎಷ್ಟೆಲ್ಲ ವಿಶೇಷತೆ !

Advertisement
Advertisement

ಕೇವಲ 20 ವರುಷಗಳ ಹಿಂದೆ ಸಾಗರದಲ್ಲಿ 62 ಭತ್ತದ ಪ್ರಬೇಧಗಳಿದ್ದವು. ಈಗ …? ಅದ್ನೇನ್ ಕೇಳ್ತಿ , ಅಕ್ಕಾಳು , ಅರ್ಲು ಹೊನಸು , ಕೆಂಪುದಡಿ ಗೊಳ್ತೀಗ, ಚಿಟಗ, ಚಿಳಗ, ಕರೆಕಣ್ ಹೊನಸು , ಚಿಕ್ಕಸಾಲೆ, ಜೇನುಗೂಡು , ತೊಗರಿನ ಭತ್ತ , ನ್ಯಾರೆಮಿಂಡ, ಬಿಳಿದಡಿ ಬಂಗಾರದ ಗುಂಡು , ಬರ ರತ್ನಚೂಡಿ , ಬಿಳಿ ಇಸಡಿ, ಬಂಗಾರ ಕಡ್ಡಿ , ಬಿಳಿದಡಿ ಗೋಳ್ತಿಗ , ಮಲ್ಲಿಗೆ ಸಣ್ಣ , ಮುಸಳ್ಳಿ , ಬುಲ್ಬುಲ್ , ಬಿಳಿ ಮಳ್ಹೆಗ್ಗೆ, ಮೈಸೂರು ಸಣ್ಣ , ದಬ್ಬಣ ಸಾಲೆ, ಸಂಪೆದಳ, ಸಣ್ಣ ಅಭಿಲಾಷ, ಮುಳ್ ಭತ್ತ , ರಾಜಮಣಿ…ಕಳೆದಿವೆ…ಎಲ್ಲೂ ಕಾಣದು. ಮತ್ತೆ ತರಲಾದೀತೆ ? ಒಂದು ತಾಲೂಕಿನ ಸ್ಥಿತಿಯಿದು. ರಾಜ್ಯದಲ್ಲಿ, ದೇಶದಲ್ಲಿ ಇನ್ನೆಷ್ಟು ಕಳೆದಿವೆಯೊ … ಬೀಜಗಳ ಉಳಿಸಲು ಇರುವ ಸುಲಭ ದಾರಿ ಒಂದೆ ; ಬೆಳೆಸುವುದು ಮತ್ತು ಬಳಸುವುದು. ಹುಡುಕಿ ಸಂರಕ್ಷಿಸೋಣ ; ನಮ್ಮ ಸುತ್ತಲಿರುವ ಪಾರಂಪರಿಕ ಬೀಜ ವೈವಿಧ್ಯ. ನಮ್ಮೂರ ಬೀಜ ಬೆಳೆಸೋಣ-ಬಳಸೋಣ-ಬಾಳಿಸೋಣ. ದೇಶೀ ಬೀಜಗಳು ಸಾವಯವ ಕೃಷಿಗೆ ಬಹಳ ಪೂರಕ.

Advertisement

ಬೀಜಗಳು ನಮ್ಮ ಮನೆಯ ಪುಟ್ಟ ಸದಸ್ಯರಲ್ಲವೆ ? ಜನವರಿ 12-13, ಶುಕ್ರವಾರ-ಶನಿವಾರ ಕೊಲ್ಹಾಪುರ ಸಮೀಪವಿರುವ ಕನ್ನೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ಕೃಷಿ ಕಾಯಕ ಕ್ಷೇತ್ರದ ಈ ರೀತಿಯ ಹಲವು ಪ್ರಶ್ನೆಗಳಿಗೆ ಪರಿಹಾರ-ಉತ್ತರ ಹುಡುಕುವ ತವಕ. ಪರಮಪೂಜ್ಯ ಶ್ರೀ ಅದೃಶ್ಯ ಕಾಡ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರೇರಣೆಯಲ್ಲಿ ‘ಸಾವಯವ ಕೃಷಿ ಪರಿವಾರ’ ಮತ್ತು ‘ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ‘ ಸಂಸ್ಥೆಗಳು ಸಮಾನಾಸಕ್ತ ಸಂಸ್ಥೆಗಳೊಡಗೂಡಿ ಸಂಘಟಿಸುತ್ತಿರುವ ಎಲ್ಲಾ ಸಂಪ್ರದಾಯಗಳ ಪರಮಪೂಜ್ಯ ಮಠಾಧೀಶರು, ಸಂತರು, ಧರ್ಮದರ್ಶಿಗಳು ಹಾಗೂ ರೈತರು, ವಿಜ್ಞಾನಿಗಳು, ಶಿಕ್ಷಣ ತಜ್ಞರ ‘ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು’ ಮಹಾಸಮಾವೇಶದ ಆಶಯ.

ಬರಹ :
ಆನಂದ ಆ. ಶ್ರೀ.
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |
May 12, 2024
11:56 AM
by: ಸಾಯಿಶೇಖರ್ ಕರಿಕಳ
ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ : ಗೋಕೃಪಾಮೃತ ಇರುವಾಗ ಮಾರುಕಟ್ಟೆಯಲ್ಲಿನ ದುಬಾರಿ ಕೃಷಿ ಗೊಬ್ಬರ & ಕ್ರಿಮಿನಾಶಕಗಳ ಹಂಗೇಕೆ?
May 12, 2024
11:53 AM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ
May 12, 2024
11:34 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ
May 12, 2024
11:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror