Advertisement
Opinion

#Dosa | ನಾವು ತಿನ್ನುವ ದೋಸೆಯ ಮಹಿಮೆ ನಿಮಗೆ ಗೊತ್ತಾ..? ದೋಸೆಯಲ್ಲಿ ಅಡಗಿದೆ ಆಧ್ಯಾತ್ಮ ಮತ್ತು ಜೋತಿಷ್ಯ

Share

ದೋಸೆ ಸಾಮಾನ್ಯವಾಗಿ ಎಲ್ಲರ ಮನೆಯ ಬೆಳಗ್ಗಿನ ತಿಂಡಿ. ಕೆಲವರು ಇಷ್ಟಪಟ್ಟು ತಿಂದರೆ, ಇನ್ನು ಕೆಲವರು ಕಷ್ಟಪಟ್ಟು ತಿಂತಾರೆ. ಕೆಲವರಿಗೆ ಅದು ಉದ್ದಿ ದೋಸೆ ಆಗಿರೋದ್ರಿಂದ ಬರೇ ಗ್ಯಾಸ್ಟ್ರಿಕ್‌ ಸಮಸ್ಯೆ ತಂದೊಡ್ಡುತ್ತದೆ. ಹುಳಿ ತೇಗು ಆರಂಭವಾದ್ರೆ ಬಾಯಿರುಚಿಗೆ ತಿಂದ ದೋಸೆ ಆಮೇಲೆ ಹೊಟ್ಟೆಯಲ್ಲೀ ತಿರುಗಾಕೆ ಆರಂಭಿಸುತ್ತೆ.  ಈ ದೋಸೆಯ ಹಿಂದೆ ದೊಡ್ಡ ಮಹಿಮೆಯೇ ಇದೆ. ನಮ್ಮ ಹಿರಿಯರು ಈ ದೋಸೆಯನ್ನು ಕೇವಲ ಹೊಟ್ಟೆ ತುಂಬಿಸಲು ತಯಾರು ಮಾಡಿಲ್ಲ. ನಾವು ದಿನನಿತ್ಯ ಸವಿದು ತಿನ್ನುವ ದೋಸೆಯಲ್ಲಿ ಆಧ್ಯಾತ್ಮ ಮತ್ತು ಜೋತಿಷ್ಯ ಅಡಗಿದೆಯಂತೆ.

ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ತಿರುವಿ ಒಂದು ರಾತ್ರಿಯ ವರೆಗೆ “ಹುದುಗಲು” ಬಿಡುವುದರ ಮೂಲಕ ಸಿದ್ಧಪಡಿಸಲಾಗುತ್ತದೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತಿದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೇಬೇಳೆ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದೂ ಉಂಟು. ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ಹುಯ್ಯುವುದರ ಮೂಲಕ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸುವುದು ವಾಡಿಕೆ. ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮೊದಲಾದವನ್ನು ಉಪಯೋಗಿಸಿ “ದಿಢೀರ್ ದೋಸೆ” ಮೊದಲಾದವನ್ನೂ ಮಾಡಬಹುದು.

ದೋಸೆ ತಯಾರಿಸಲು ಉಪಯೋಗಿಸುವ ವಸ್ತುಗಳಲ್ಲಿ ‘ನವಗ್ರಹ’ಗಳೇ ಅಡಗಿದೆ. ಅಗ್ನಿ – ಸೂರ್ಯ ಅಕ್ಕಿ- ಚಂದ್ರ ಉದ್ದಿನ ಬೇಳೆ – ರಾಹು-ಕೇತು ಮೆಂತ್ಯ – ಬುಧ ದೋಸೆಯ ಕಲ್ಲು – ಕಬ್ಬಿಣ- ಶನಿ ದೋಸೆಯ ಬಣ್ಣ- ಅಂಗಾರಕ- ಮಂಗಳ ಅದನ್ನು ತಿನ್ನುವವರು ಗಂಡು – ಗುರು ಹೆಣ್ಣು – ಶುಕ್ರ ದೋಸೆಯ ರೂಪವೇ ಗುಂಡಗಿನ ಭೂಮಂಡಲ. ದೋಸೆಯನ್ನು ಗಡಿಯಾರ ಚಲನೆಯಂತೆ ಸುತ್ತಿದರೆ ತಾನೇ ಚೆನ್ನಾಗಿ ಬರುವುದು, ಭೂಮಿಯು ಹಾಗೆ ತಾನೇ ಪರಿಭ್ರಮಿಸುವುದು. ಮುಂಚೆಲ್ಲಾ ನಮ್ಮ ಹಿರಿಯರು ದೋಸೆಯನ್ನು ವಿಶೇಷ ದಿನಗಳಲ್ಲಿ ಮಾತ್ರ ಮಾಡುತ್ತಿದ್ದರು. ಹಾಗೂ ಈಗಲೂ ಸಹ ವೈಷ್ಣವ ದೇವಾಲಯಗಳಲ್ಲಿ ದೇವರಿಗೆ ದೋಸೆಯ ನೈವೇದ್ಯ ಪ್ರತಿ ನಿತ್ಯ ನಡೆಯುವುದು. ದೋಸೆ ಎಂಬ ಹೆಸರು ಕಾದ ಕಾವಲಿಯ ಮೇಲೆ ಹಿಟ್ಟನ್ನು ದೋ ಎಂದು ಸುರಿದಾಗ, ಅದು ಸೈ ಎನ್ನುತ್ತಾ ಶಬ್ದ ಮಾಡುವುದರಿಂದ ‘ದೋಸೆ’ ಎನ್ನುವ ಪದ ಉಗಮವಾಗಿರಬೇಕು. ಇತ್ತೀಚೆಗೆ ಬಂದ ಸುದ್ದಿ ಏನಪ್ಪಾ ಅಂದ್ರೆ ಬ್ರಿಟೀಷರು ನಮ್ಮನ್ನು ಆಳುತ್ತಿದ್ದಾಗ ಅವರು ತಮ್ಮ ಒಬ್ಬ ಬಟ್ಲರ್ ಗೆ ಆ ಹಿಟ್ಟನ್ನು ಕೊಟ್ಟು ಹೇಗೆ ಮಾಡುವುದನ್ನು ತಿಳಿಸುತ್ತಾ ‘ Do as I say’ ಎನ್ನುವ ಅಪಭ್ರಂಶವೇ ‘ ದೋಸೆ ‘ ಆಗಿರಬಹುದೆಂದು ಕೆಲ ಜನರ ಅಂಬೋಣ..! –

(Source: Social Media )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

12 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

12 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

12 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

13 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

13 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

1 day ago