ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ನಿರ್ಮಾಣವಾಗಿದ್ದ ಕೃತಕ ಕೆರೆಯ ಕಟ್ಟೆ ಗುರುವಾರ ಬೆಳಗ್ಗೆ ಒಡೆದಿದೆ. ಹೀಗಾಗಿ ಅಪಾರ ಪ್ರಮಾಣದ ಕೃಷಿ ಹಾನಿ ಸಂಭವಿಸಿದೆ. ರಸ್ತೆಯ ಅಂಚಿಗೆ ಸದ್ಯ ಯಾವುದೇ ಅಪಾಯವಿಲ್ಲದಿದ್ದರೂ ಇನ್ನಷ್ಟು ಮಣ್ಣು ಕುಸಿದರೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚತುಷ್ಫಥ ರಸ್ತೆ ಕಾಮಗಾರಿ ನಿರ್ಮಾಣದ ಸಂದರ್ಭ ಮಣ್ಣು ರಾಶಿ ಹಾಕಲಾಗಿತ್ತು. ಆದರೆ ಮೋರಿ ಅಳವಡಿಕೆ ಮಾಡದ ಕಾರಣ ಕೃತಕ ಕೆರೆ ನಿರ್ಮಾಣವಾಗಿತ್ತು. ಇದೀಗ ನೀರಿನ ಒತ್ತಡಕ್ಕೆ ಕೆರೆ ಕಟ್ಟೆ ಒಡೆದಿದೆ. ಕಾಫಿ, ಭತ್ತ, ಅಡಿಕೆ ಕೃಷಿಗೆ ಹಾನಿಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel