Advertisement
Opinion

ಗೋದಾನಕ್ಕೆ ಕಾಟಾಚಾರದ “ಬೆಳ್ಳಿ, ಬಂಗಾರದ ಗೋವಿನ ಮೂರ್ತಿಯ ದಾನ ಮಾಡದಿರಿ : ದೇಸಿ ಹಸು ಸಾಕುವವರಿಗೆ ಹುಲ್ಲು, ಹಿಂಡಿ ತರಲು, ನಿರ್ವಹಣೆಗೆ ಹಣ ನೀಡಿ

Share

ಒಂದು ಕಾಲದಲ್ಲಿ ಬ್ರಾಹ್ಮಣರಿಗೆ(Brahman) ಗೋದಾನ(Godana) ಕೊಡುವುದು ಬಹಳ ಶ್ರೇಷ್ಠವಾಗಿತ್ತು. ‌ಯಾವಾಗ ಬ್ರಾಹ್ಮಣರಲ್ಲಿ ಶಿಕ್ಷಣಕ್ಕೆ(Education) ಹೆಚ್ಚು ಒತ್ತು ಕೊಟ್ಟು ಬ್ರಾಹ್ಮಣರ ಕುಟುಂಬದ ಹೊಸ ಪೀಳಿಗೆ ಹೆಚ್ಚಿನ ವಿಧ್ಯಾಭ್ಯಾಸ ಮಾಡಿಕೊಂಡು ಪಟ್ಟಣ(City) ಸೇರಿದ ಲಗಾಯ್ತಿನಿಂದ ಬ್ರಾಹ್ಮಣರ ಮನೆಯಲ್ಲಿ ಈಗ ಪೂಜೆಗೂ ಹಾಲಿಗೂ ಗೋವಿಲ್ಲದ ಪರಿಸ್ಥಿತಿ ಬಂದಿದೆ‌…!

ನಿಜ … ಇದೀಗ ಬ್ರಾಹ್ಮಣರಲ್ಲಿ ಬೊಜ್ಜ ಇತ್ಯಾದಿ ಸಂಧರ್ಭದಲ್ಲಿ ಗೋದಾನ ಹಿಡಿಯೋರೇ ಇಲ್ಲ..!! ಜೀವಂತ ಗೋವಿನ
ಬದಲಿಗೆ ಬೆಳ್ಳಿ ಗೋದಾನ ಚಾಲ್ತಿಗೆ ಬಂದಿದೆ. ಯಾವುದೋ ಕಾಲದಲ್ಲಿ ಗೋದಾನಕ್ಕೆ ಬಹಳ ಮೌಲ್ಯ ಇತ್ತು. ಈಗಿಲ್ಲ…
ಭೂದಾನ ಕೊಡ್ತಾರೆ…!!! ಅದೂ ಪ್ರಯೋಜನ ಇಲ್ಲದ ಬಂಜರು ಭೂಮಿಯನ್ನು.. ಎಲ್ಲಾ ದಾನಗಳೂ ಕಾಟಾಚಾರ ಆಗಿದೆ.
ಒಂದು ಇಪ್ಪತ್ತೈದು ವರ್ಷಗಳ ಹಿಂದೆ ಗೋದಾನಕ್ಕೆ ಮನೆಯವರು ಒಳ್ಳೆಯ ಒದಕಲು ದನವನ್ನ ಹಿಡಿದು ದಾನ ಕೊಟ್ಟು ಒಂದೇ ಏಟಿಗೆ ಒದೆಯೋ ದನದ ಸಮಸ್ಯೆ ಮತ್ತು ದಾನ ಕೊಡುವ ಸಮಸ್ಯೆಗೆ ಪರಿಹಾರ ಕಂಡು ಕೊಳ್ತಿದ್ದರು. ಈಗ ಗೋ ದಾನಕ್ಕೆ ಮೌಲ್ಯ ಕಳೆದು ಹೋಗಿದೆ.

ಗೋದಾನ ಹಿಡಿಯುವ ಬ್ರಾಹ್ಮಣರು ತಮ್ಮ ಮನೆಯ ಗೋವನ್ನೇ ಕರ್ತೃಗಳ ಮನೆಗೆ ಪಿಕ್ಅಪ್‌ನಲ್ಲಿ ತಂದು ದಾನ ಹಿಡಿದ ಶಾಸ್ತ್ರ ಮಾಡಿ ನಂತರ ಆ ಗೋವಿನ ಮೌಲ್ಯದ ಮೊತ್ತ ಪಡೆದು ಮನೆಗೆ ಗೋವಿನೊಂದಿಗೆ ಮರಳುತ್ತಾರೆ. ಈ “ಸುಧಾರಿತ ದಾನಕ್ಕೆ” ಪಾಪದ ಅರೆ ಸಿಂಧಿ ಗೋವುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಖಾಯಂ ದಾನ ಹಿಡಿಯುವವರ ಮನೆಯ ಗೋದಾನದ ಕರು ದನಕ್ಕೆ ಈ ಪಿಕ್ಅಪ್ ಹತ್ತುವುದು ಇಳಿಯುವುದು, ಪೂಜೆ ಮಾಡಿಸಿಕೊಳ್ಳುವುದು ಅವಕ್ಕೆ ಅಭ್ಯಾಸ ವಾಗಿರುತ್ತದೆ. ಕರ್ತೃಗಳಿಗೂ ಒಳ್ಳೆಯ ಗೋಪೂಜೆ ಮಾಡಿ ದಾನ ಕೊಟ್ಟ ಖುಷಿಯಾಗುತ್ತದೆ.

ಬಂಧುಗಳೇ…, ದಯಮಾಡಿ ಗೋದಾನದ ವಿಚಾರ ಬಂದಾಗ ಹೀಗೆ ಕಾಟಾಚಾರದ ಹೆಚ್ಎಫ್ ಜಾನುವಾರುಗಳೋ, ಒದಕಲು ದನಗಳನ್ನೋ‌ ಅಥವಾ ಬೆಳ್ಳಿ ಬಂಗಾರದ ಗೋದಾನ ಮಾಡದೇ ಸಮೀಪದ ದೇಸಿ ಹಸು ಸಾಕುವವರಿಗೆ ಹುಲ್ಲು ತರಲು, ಹಿಂಡಿ ತರಲು, ನಿರ್ವಹಣೆ ಬಾಬ್ತು ಹಣವನ್ನು ನೀಡಿದರೆ ಅದು ಶ್ರೇಷ್ಠ “ಗೋದಾನ”ವಾಗುತ್ತದೆ. ಗೋದಾನ ಎಂದಾಕ್ಷಣ ಹಾಲುಕೊಡುವ ಹಸು ಕರುವೇ ಆಗಬೇಕು ಎಂಬುದು ಮೌಡ್ಯ. ಹತ್ತಾರು ದೇಸಿ ಹಸುಗಳ ಸಾಕಿ ಕೊಂಡು ಕಷ್ಟ ಬಿಟ್ಟು ಸಾಕುವ ಗೋಪಾಲಕರು ಯಾವುದೇ ಜಾತಿಯವರಾದರೂ ಈ ಬಗೆಯ ಗೋದಾನಕ್ಕೆ ಅರ್ಹರು.

ಈ ಗೋದಾನಕ್ಕೆ ಜಾತಿ ನೋಡದಿರಿ. ದೇಸಿ ತಳಿ ಹಸುಗಳನ್ನು ಸಾಕುವವರೇ ಪುಣ್ಯವಂತ ಗೋಪಾಲಕರು, ಗೋಪಾಲಕೃಷ್ಣ ರೂಪಿಗಳು. ಇಂತಹ ಗೋಪಾಲಕರ “ಗೋಪಾಲನೆ” ಗೆ ಹಣ ಗೋಗ್ರಾಸವನ್ನು ನೀಡಿದರೆ ಅದೇ ಈ ಕಾಲದ ಶ್ರೇಷ್ಠ ಗೋದಾನ ವಾಗುತ್ತದೆ. ಅದು ಭಗವಂತನಿಗೆ ಈ ಮೂಲಕ ತಲುಪುತ್ತದೆ. ದಯಮಾಡಿ ಗೋದಾನದ ಸಂಧರ್ಭದಲ್ಲಿ ಈ ಕಾಟಾಚಾರದ “ಬೆಳ್ಳಿ ಬಂಗಾರದ ಗೋವಿನ ಮೂರ್ತಿ ಯ ಗೋದಾನ ಮಾಡದಿರಿ “. ದೇವರು ಇಂತಹ ಕಾಟಾಚಾರದ ಪುರೇತರ ಅನುಕೂಲದ “ದಾನವನ್ನು” ಒಪ್ಪಿಕೊಳ್ಳೋಲ್ಲ. ಏಕೆಂದರೆ ಈ ನಾಡಿನಲ್ಲಿ ಇನ್ನೂ ಪಾಪದ ದೇಸಿ ಹಸುಗಳು ಇವೆ. ಅವಿದ್ದೂ “ಬೆಳ್ಳಿ ಗೋದಾನ ” ಮಾಡುವುದು ದೇವರಿಗೆ ಮಾಡುವ ವಂಚನೆಯಾಗುತ್ತದೆ. ದಯಮಾಡಿ ಇಂತಹ ಕಾಟಾಚಾರದ ಲೋಹದ ಮೂರ್ತಿಯ ಗೋದಾನ ಬೇಡ ಎಂದು ಸಮಸ್ತ ದೇಸಿ ತಳಿ ಗೋವುಗಳ ಪರವಾಗಿ ಕೋರುತ್ತಿದ್ದೇನೆ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

6 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

15 hours ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

16 hours ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

20 hours ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

21 hours ago