ನೀರು(Water) ಜೀವ ಜಲ. ಈಗಲೇ ಎಚ್ಚರವಾಗಿ, ಹಲವು ಕಡೆ ನೀರಿಗೆ ಹಾಹಾಕಾರವೆದ್ದಿದೆ(Water Crisis). ಕೆಲವು ಕಡೆ ನೀರಿಲ್ಲದೆ ಪರದಾಟ ಶುರುವಾಗಿದೆ. ನೀರಿನ ಮೂಲ(Water source) ಮಾರ್ಚ್ ಮೊದಲರ್ಧದಲ್ಲೇ ಈ ಬಾರಿ ಬರಿದಾಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಬೆಂಗಳೂರಿಗೆ(Bengaluru) ನೀರುಣಿಸುವ KRS ಕೂಡಾ ಬರಿದಾಗಲಿದೆ. ಪ್ರಕೃತಿ ಮುನಿಸಿಕೊಂಡು ಮಳೆಯ(Rain) ಕೃಪೆ ತೋರದೇ ಇದ್ದರೆ ಜೀವನದ ಸಂಕಷ್ಟ ಹೇಳತೀರದಂತಾಗಲಿದೆ, ಕುಡಿಯುವ ನೀರಿಗೂ(Drinking water) ಸಂಕಷ್ಟ ಎದುರಾಗಲಿದೆ. ಗುಳೇ(Migration) ಹೋಗುವ ಪರಿಸ್ಥಿತಿ ಬಂದರೂ ಬರಬಹುದು. ಇದಕ್ಕಾಗಿ ಈಗಲೇ ಎಚ್ಚರವಾಗಿ ನೀರಿನ ಬಗ್ಗೆ ಇರಲಿ ಎಚ್ಚರ.
ಇದು ಎಚ್ಚರಿಕೆ ಕರೆಗಂಟೆ, ಪ್ರತಿಯೊಬ್ಬರೂ ನೀರಿನ ಮಿತಬಳಕೆ ಬಗ್ಗೆ ಯೋಚಿಸಿ, ತಮ್ಮ ತಮ್ಮ ಮನೆ, ಅಪಾರ್ಟ್ಮೆಂಟ್ನಲ್ಲಿ ನೀರುಳಿಸುವ ಪ್ರಯತ್ನ ಪಡಬೇಕಾದ ಅತ್ಯವಶ್ಯಕತೆ ಇದೆ.ಕೃಷಿಯಲ್ಲೂ ಯಥೇಚ್ಛವಾಗಿ ನೀರು ಬಳಕೆ ಮಾಡಬೇಡಿ. ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಬಳಕೆ ಮಾಡಿ. ಕೊಳವೆಬಾವಿಯಿಂದ ಬೇಕಾಬಿಟ್ಟಿಯಾಗಿ ನೀರೆತ್ತಬೇಡಿ, ಉಚಿತ ವಿದ್ಯುತ್ ನೆಪದಲ್ಲಿ ಕೊಳವೆಬಾವಿಯನ್ನೇ ಬರಿದು ಮಾಡಬೇಡಿ. ಈ ಪರಿಸರ, ಸಮಾಜದ ಮೇಲೂ ಕಾಳಜಿ ಇರಲಿ. ನೀರು ಉಳಿಸಲು ಈಗ ಹೀಗೆ ಮಾಡಿ…
ಎಚ್ಚರಿಕೆಗಳು ಹೀಗೆ ಇರಲಿ:
ರಬ್ಬರ್ ಆಮದು ತಡೆಯಾದರೆ ಟಯರ್ ಉದ್ಯಮ ಹಾಗೂ ರಬ್ಬರ್ ಬೆಳೆಗಾರರ ರಕ್ಷಣೆ ಸಾಧ್ಯವಿದೆ…
ಮೇ 22 ರಂದು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 26ರಂದು ಮ್ಯಾನ್ಮಾರ್,…
ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…
ಗ್ಯಾರಂಟಿ(Guarantee) ಘೋಷಣೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ಒಂದು ವರ್ಷ…
ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ…
ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…