MIRROR FOCUS

ಭಾರತೀಯ ಕೃಷಿಯಲ್ಲಿ “ಡ್ರೋನ್ ಮೂಮೆಂಟ್” | ಕಿಸಾನ್ ಡ್ರೋನ್‌ಗಳ ಅಭಿವೃದ್ಧಿಯ ಹೆಜ್ಜೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತದ ಕೃಷಿ ಕ್ಷೇತ್ರವು ಬೆಳವಣಿಗೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳು ಗಮನ ಸೆಳೆಯುತ್ತಿದೆ. ಯುವಕರು ಕೃಷಿಯತ್ತ ಆಸಕ್ತರಾಗಬೇಕಾದರೆ ನೂತನ ತಂತ್ರಜ್ಞಾನಗಳೂ ಅಗತ್ಯ ಇದೆ. ಈ ಹಂತದಲ್ಲಿ ಪರಿಸರದ ಮೇಲೂ ಹಾನಿಯಾಗದಂತೆ ಆಧುನಿಕ ಕೃಷಿ ಉಪಕರಣಗಳ ಬಳಕೆಯ ಕಡೆಗೆ ಹೆಚ್ಚು ಚರ್ಚೆ ಆಗಬೇಕಿದೆ. ಅಂತಹ ಚರ್ಚೆಯಲ್ಲಿ ಈಗ ಡ್ರೋನ್‌ ತಂತ್ರಜ್ಞಾನ ಇದೆ. ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಉಪಯೋಗವಾಗಬಲ್ಲ ಡ್ರೋನ್‌ ಬಳಕೆ ಈಗ ವೇಗವಾಗಿ ಬೆಳೆಯುತ್ತಿದೆ. ಮುಂದೆ ಓದಿ

Advertisement

ಭಾರತದ ಯುವ ಮತ್ತು ಡೈನಾಮಿಕ್ ಸ್ಟಾರ್ಟ್‌ಅಪ್‌ಗಳಿಂದ ಕಿಸಾನ್ ಡ್ರೋನ್‌ಗಳ ಅಭಿವೃದ್ಧಿಯು ದ್ರವ ರಸಗೊಬ್ಬರಗಳ ಬಳಕೆ ಹಾಗೂ ಪರಿಣಾಮಕಾರಿಯಾದ ಬಳಕೆಯ ತಂತ್ರವನ್ನು ನೀಡುತ್ತಿದ್ದಾರೆ. ಈಗಾಗಲೇ ಪಂಜಾಬ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡ್ರೋನ್‌ ಬಳಕೆ ವಿಶೇಷ ಗಮನ ಸೆಳೆದಿದೆ. ಮುಂದೆ ಓದಿ

ಪಂಜಾಬಿನ ಹಚ್ಚ ಹಸಿರಿನ ಗದ್ದೆಗಳ ನಡುವೆ ಡ್ರೋನ್‌ ಹಾರಾಟದ ಸದ್ದು ಈಗ ಹೆಚ್ಚಾಗುತ್ತಿದೆ.ಅಲ್ಲಿ ದ್ರವರೂಪದ ನ್ಯಾನೋ ಯೂರಿಯಾವನ್ನು ಸಿಂಪಡಿಸಲು ಡ್ರೋನ್ ಬಳಕೆ ಹೆಚ್ಚಾಗುತ್ತಿದೆ. ಅತ್ಯಂತ ಗ್ರಾಮೀಣ ಭಾಗದಲ್ಲೂ ಕೂಡಾ ಡ್ರೋನ್‌ ಬಳಕೆ ಈಗ ಅನಿವಾರ್ಯ ಎಂಬ ಸ್ಥಿತಿಯಲ್ಲಿದೆ. ಕಾರ್ಮಿಕರ ಸಮಸ್ಯೆ ನಡುವೆ ಕೃಷಿ ಬೆಳೆವಣಿಗೆಗೆ ಡ್ರೋನ್‌ ಕೂಡಾ ಅಗತ್ಯವಾಗಿದೆ. ನ್ಯಾನೋ ಯೂರಿಯಾದಂತಹ ಹೊಸ ತಂತ್ರಜ್ಞಾನಗಳು ಬಂದಾಗ ಅವುಗಳ ಸಿಂಪಡಣೆಗೂ ಅದೇ ಮಾದರಿಯ ಇನ್ನೊಂದು ತಂತ್ರಜ್ಞಾನವನ್ನೂ ಯುವ ಕೃಷಿಕರು ಅಪೇಕ್ಷೆ ಪಡುತ್ತಾರೆ. ಅಂತಹ ಸಂದರ್ಭದಲ್ಲಿ ಡ್ರೋನ್‌ ಬಳಕೆಯ ಪರಿಣಾಮಕಾರಿ ಅಂಶಗಳ ಬಗ್ಗೆ ಚರ್ಚೆಯಾಗಿ ಅನುಷ್ಟಾನಕ್ಕೆ ಬರಬೇಕಿದೆ. ಮುಂದೆ ಓದಿ

ಭಾರತೀಯ ಕೃಷಿಯು ಸಾಂಪ್ರದಾಯಿಕವಾಗಿ ಎತ್ತಿನ ಗಾಡಿಯಿಂದ ಟ್ರಾಕ್ಟರ್ ಆಧಾರಿತ ಕೃಷಿಯತ್ತ ಈ ಹಿಂದೆ ಸಾಗಿತ್ತು. ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು ಡ್ರೋನ್‌ ತಂತ್ರಜ್ಞಾನವನ್ನೂ ಕೃಷಿ ವಲಯ ಒಪ್ಪಿಕೊಳ್ಳುತ್ತಿದೆ.  ಕೃಷಿ ಕೆಲಸಗಳಲ್ಲಿ ಡ್ರೋನ್‌ಗಳ ಬಳಕೆಯು ಕೃಷಿ ಕ್ರಾಂತಿಯ ಮೂರನೇ ಅಲೆಯಾಗಿ ಹೊರಹೊಮ್ಮುತ್ತಿದೆ. ಕೃಷಿ-ಡ್ರೋನ್ ತಂತ್ರಜ್ಞಾನವು ನಮ್ಮ ಕೃಷಿ ಪದ್ಧತಿಗಳನ್ನು ಆಧುನೀಕರಿಸುವಲ್ಲಿ ಮತ್ತು ಪರಿವರ್ತಿಸುವಲ್ಲಿ ಪ್ರಗತಿಯಾಗಿದೆ ಎನ್ನುವುದು ಸತ್ಯ. ಇದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಚಿಂತನೆಗಳು ಅಗತ್ಯವಿದೆ.ಮುಂದೆ ಓದಿ

1960 ರ ಹಸಿರು ಕ್ರಾಂತಿಯು ಹೊಸ ಕೃಷಿ ಉಪಕರಣಗಳಿಗೆ, ಹೊಸ ಬೀಜಗಳಿಗೆ, ಕೀಟನಾಶಕಗಳಿಗೆ, ರಾಸಾಯನಿಕಗಳಿಗೆ ಕಾರಣವಾಗಿದೆ. ಈಗ ರಾಸಾಯನಿಕ ಮುಕ್ತ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ ಪರಿಣಾಮಕಾರಿ ವಿಧಾನಗಳ ಕಡೆಗೇ ಯುವ ಕೃಷಿ ವಲಯ ಹುಡುಕುತ್ತಿದೆ. ಈಗ ಬಯೋ, ನ್ಯಾನೋ ಮತ್ತು ಸಾವಯವ ಗೊಬ್ಬರಗಳಂತಹ ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಲು ಸರ್ಕಾರವು  ಜಾಗೃತಿಯನ್ನುಮೂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಡ್ರೋನ್‌ ಬಳಕೆಯ ಪರಿಣಾಮಕಾರಿಯಾದ ಅಂಶಗಳು ಅಗತ್ಯ ಇದೆ. ಕೆಲವು ಕಡೆ ರಸಗೊಬ್ಬರ ಅನಿವಾರ್ಯದಂತಹ ಸಂದರ್ಭದಲ್ಲಿ ಒಂದು ಚೀಲ ಯೂರಿಯಾವು ಒಂದು ಲೀಟರ್‌ಗೆ ಇಳಿಕೆ ಮಾಡುತ್ತಾ, ಪೋಷಕಾಂಶಗಳನ್ನು ಗಿಡಗಳಿಗೆ ಹೆಚ್ಚು ನೀಡಲು ಸಾಧ್ಯ. ಈ ಸಮಯದಲ್ಲಿ ಡ್ರೋನ್‌ಗಳಂತಹ ಹೊಸ ತಂತ್ರಜ್ಞಾನವನ್ನು ಎಷ್ಟು ಶೀಘ್ರವೋ ಅಷ್ಟು ಶೀಘ್ರದಲ್ಲಿ ಪರಿಣಾಮಕಾರಿ ಬಳಕೆಯ ಬಗ್ಗೆ ಮಾಹಿತಿಯೂ ಅಗತ್ಯ ಇದೆ.ಈ ಮೂಲಕ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಬೆಳೆ ಇಳುವರಿಯನ್ನು ಸುಧಾರಿಸಲು ಕೃಷಿ ಸಮುದಾಯಕ್ಕೆ  ಸಂವಹನ ಮಾಡುವುದು ಅಗತ್ಯ ಇದೆ.ಮುಂದೆ ಓದಿ

ಒಂದು ಎಕರೆ ಕೃಷಿ ಭೂಮಿಯನ್ನು ನಿಮಿಷಗಳಲ್ಲಿ ಸುತ್ತುವ ಸಾಮರ್ಥ್ಯವನ್ನು ಡ್ರೋನ್‌ ಹೊಂದಿದ್ದು, ತಮ್ಮ ಹೊಲಗಳಲ್ಲಿ ಗಂಟೆಗಟ್ಟಲೆ  ಶ್ರಮಿಸುವ ರೈತರಿಗೆ ಇದು ವರವಾಗಿ ಪರಿಣಮಿಸುತ್ತದೆ. ಸಮಯ ಉಳಿತಾಯ, ಉತ್ಪಾದಕತೆ ಹೆಚ್ಚು ಹಾಗೂ ಶ್ರಮ ಉಳಿತಾಯದ ವ್ಯವಸ್ಥೆ ಇಲ್ಲಿದೆ. ಈ ಮೂಲಕ ಗ್ರಾಮೀಣ ಆರ್ಥಿಕತೆ ಹೆಚ್ಚಳ, ಉದ್ಯೋಗ ಸೃಷ್ಟಿಯೂ ಸಾಧ್ಯವಿದೆ. ಹೀಗಾಗಿ ಡ್ರೋನ್‌ ಮೂಮೆಂಟ್‌ ಭಾರತದಲ್ಲಿ ಅಗತ್ಯವಾಗಿ ಚರ್ಚೆಯಾಗಬೇಕಾದ ವಿಷಯವಾಗಿದೆ. ಮುಂದೆ ಓದಿ

ಯಾವುದೇ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ಬಂದಾಗ ಋಣಾತ್ಮಕ ಅಂಶಗಳೇ ಹೆಚ್ಚಾಗಿರುತ್ತದೆ. ಡ್ರೋನ್‌ ಕೂಡಾ ಅದನ್ನು ಹೊರತುಪಡಿಸಿಲ್ಲ. ಆದರೆ ಮುಕ್ತವಾದ ಚರ್ಚೆಗಳು ಆದಷ್ಟು ಬೇಗ ನಡೆದಷ್ಟು ಕೃಷಿ ಬೆಳವಣಿಗೆಗೆ ಪೂರಕವಾಗಿದೆ. ಕೃಷಿ ಆರ್ಥಿಕತೆ ಸುಧಾರಣೆಗೂ ಕಾರಣವಾಗಲಿದೆ.

The “drone movement” is gaining a lot of attention in Indian agriculture. At this stage, farmers need information about the use of drones and their effective use.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

Published by
ಸಮರ್ಥ ಸಮನ್ಯು

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

10 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

10 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

10 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

19 hours ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

1 day ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

1 day ago