ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗರ್ತಲಾದಿಂದ ಕೆಂಪಡಿಕೆ ಬಂದಿದೆ. 1519 ಕೆಜಿ ತೂಕದ ಕೆಂಪಡಿಕೆ ಅಗರ್ತಲಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಶಿವಮೊಗ್ಗಕ್ಕೆ ರಸ್ತೆಯ ಮೂಲಕ ಸಾಗಿದೆ. ದೇಶೀಯ ಸರಕು ಕಾರ್ಯಾಚರಣೆಯನ್ನು ವಿಮಾನ ಯಾನದ ಮೂಲಕ ಪ್ರಾರಂಭಿಸಿದ ನಂತರ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ನಿರ್ವಹಿಸಿದ ಬೆಳೆಗಳ ಅತ್ಯಧಿಕ ಪ್ರಮಾಣ ಸಾಗಾಟ ಇದಾಗಿದೆ.ಮುಂದೆ ಓದಿ
ಕರಾವಳಿ ಹಾಗೂ ಮಲೆನಾಡು ಅಡಿಕೆ ಬೆಳೆಯುವ ಪ್ರದೇಶ. ಅಡಿಕೆ ಇಲ್ಲಿಂದಲೇ ರವಾನೆಯಾಗುವುದು ಬಹುಪಾಲು ನಡೆದುಕೊಂಡು ಬಂದಿರುವುದು. ಈಗ ಅಗರ್ತಲಾದಿಂದ ಅಡಿಕೆ ಬಂದಿರುವ ಬಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ. ಶಿವಮೊಗ್ಗ ಮೂಲದ ಅಡಿಕೆ ಟ್ರೇಡಿಂಗ್ ಕಂಪನಿಯಾದ ಶ್ರೀನಿವಾಸ ಸುಪಾರಿ ಟ್ರೇಡರ್ಸ್ ಈ ಅಡಿಕೆ ಸಾಗಾಟ ಮಾಡಿದೆ. ಇದುವರೆಗೆ ಕಡಿಮೆ ಪ್ರಮಾಣದಲ್ಲಿ ಅಡಿಕೆ ಸಾಗಾಟ ಇದ್ದರೂ ಇಷ್ಟು ದೊಡ್ಡ ಸರಕನ್ನು ಮೊದಲ ಬಾರಿಗೆ ಸಾಗಾಟ ಮಾಡಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಕಟಣೆ ತಿಳಿಸಿದೆ. ಅಲ್ಲದೆ, ಸರಕುಗಳನ್ನು ಸ್ವೀಕರಿಸಿದ ಕಂಪನಿಯ ಪ್ರತಿನಿಧಿಗಳು ನಂತರ ಹೆಚ್ಚಿನ ಸಂಸ್ಕರಣೆಗಾಗಿ ಬೆಳೆಯನ್ನು ಶಿವಮೊಗ್ಗಕ್ಕೆ ರಸ್ತೆ ಮೂಲಕ ಸಾಗಿಸಿದರು ಎಂದೂ ಹೇಳಿದೆ.ಮುಂದೆ ಓದಿ
ಅಗರ್ತಲಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನಿಯಮಿತವಾಗಿ ಅಡಿಕೆಯನ್ನು ರಸ್ತೆಯ ಮೂಲಕ ಪಡೆಯುವ ಕಂಪನಿಗೆ ಅಡಿಕೆಯನ್ನು ಏರ್ಲಿಫ್ಟಿಂಗ್ ಮಾಡುವುದು ಮೊದಲನೆಯದು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
Mangaluru International Airport (MIA) facilitated the inbound handling of areca nut (areca catechu), a tropical crop at its integrated cargo terminal (ICT) earlier in January 2024. The red variety of areca nut weighing 1519 kgs in 60 bags was ferried as belly air cargo from Agartala to this coastal city.
ಮುಂಗಾರು ಮಳೆ(Manson) ಆರಂಭವಾಗುತ್ತಿದ್ದಂತೆ ಸಾಂಕ್ರಮಿಕ ರೋಗಗಳು(Infectious disease) ಆರಂಭವಾಗುವುದು ಮಾಮೂಲು. ಅದರಲ್ಲೂ ಮಳೆ(Rain)…
ಪ್ರಧಾನಿ ಮೋದಿ(PM Modi) ಬೇರೆ ಬೇರೆ ವಿಚಾರದಲ್ಲಿ ಉಳಿದ ರಾಜಕಾರಣಿಗಳಿಗಿಂತ(Politician) ಭಿನ್ನ. ಈ…
ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ(World)…
ಕೇಂದ್ರ ಗೃಹ ಸಚಿವಾಲಯವು(Union Home Ministry) ಸಿಎಎ(CAA) ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳ ಮೊದಲ…
ಉಚಿತ ಉಚಿತ ಉಚಿತ(Free).. ರಾಜ್ಯದ ಪ್ರತೀ ಮನೆಗೂ ವಿದ್ಯುತ್ ಉಚಿತ(Free Current). ಇಂಥ…
ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…