ಸುಳ್ಯ ತಾಲೂಕಿನ ವಿವಿದೆಡೆ ಜೂ.30 ತಡರಾತ್ರಿ ಭೂಕಂಪನದ ಬಳಿಕ ಇದೀಗ ಮತ್ತೆ 10.45 ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಜನತೆ ಹೇಳಿದ್ದಾರೆ. ಸುಳ್ಯ ತಾಲೂಕಿನ ಉಬರಡ್ಕ, ಚೆಂಬು, ಗೂನಡ್ಕದಲ್ಲಿ ಭೂಮಿ ಕಂಪನದ ಅನುಭವವಾಗಿದೆ ಎಂದು ಜನರು ಹೇಳಿದ್ದಾರೆ. ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮತ್ತೆ ಮತ್ತೆ ಭೂಕಂಪನಕ್ಕೆ ಕಾರಣ ಏನು ಹಾಗೂ ಏಕೆ ಕಂಪನವಾಗುತ್ತಿದೆ. ಇದುವರೆಗೆ ಒಟ್ಟು 5 ನೇ ಬಾರಿ ಭೂಮಿ ಕಂಪನವಾಗಿದೆ. ಇದು ಏಕೆ ಎಂಬುದು ಈಗ ಜನರ ಪ್ರಶ್ನೆಯಾಗಿದೆ.
ಜೂ.30 ತಡರಾತ್ರಿ 1.15 ಕ್ಕೆ ಭೂಕಂಪನದ ತೀವ್ರತೆ 2.5 ಮ್ಯಾಗ್ನಿಟ್ಯೂಡ್ ಇತ್ತು ಎಂದು ಕೇಂದ್ರ ಸರ್ಕಾರದ ಭೂಗರ್ಭ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಇಲಾಖೆಯ ಚೆಂಬು ಪ್ರದೇಶದಲ್ಲಿ ಭೂಕಂಪನವನ್ನು ತಿಳಿಯುವ ಸಾಧನವನ್ನು ಇರಿಸಿದೆ. ಕಳೆದ 24 ಗಂಟೆಯಲ್ಲಿ 32 ಬಾರಿ ಲಘುಪ್ರಮಾಣದಲ್ಲಿ ಭೂಮಿ ಕಂಪಿಸಿದೆಯೇ ಎನ್ನುವ ಪ್ರಶ್ನೆ ಇದೆ. ಆದರೆ 2 ಬಾರಿ ಮಾತ್ರಾ ಅನುಭವವಾಗಿದೆಯೇ ? ಈ ಬಗ್ಗೆ ಅಧಿಕೃತವಾಗಿ ಇಲಾಖೆಗಳು ಸ್ಪಷ್ಟಪಡಿಸಬೇಕಿದೆ. ಸಂಪಾಜೆ, ಚೆಂಬು ಸೇರಿದಂತೆ ಆಸುಪಾಸಿನ ಪ್ರದೇಶದ ಈ ಕಂಪನಗಳು ಜನರನ್ನು ಆತಂಕಕ್ಕೀಡು ಮಾಡಿದೆ.
ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…
ಧರ್ಮರಾಯ ಮಹಾ ಜ್ಞಾನಿ. ಯಮಧರ್ಮನ ರೂಪಿನಲ್ಲಿದ್ದ ಯಕ್ಷನ ಧರ್ಮಸೂಕ್ಷ್ಮದ ಪ್ರಶ್ನೆಗಳಿಗೆ ಧರ್ಮದ ನೆಲೆಯಲ್ಲಿ…
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…