ಸುಳ್ಯ ತಾಲೂಕು ಹಾಗೂ ಕೊಡಗು-ಸಂಪಾಜೆಯಲ್ಲಿ ಗುರುವಾರ ತಡರಾತ್ರಿ ಸುಮಾರು 1.19 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಇದರ ತೀವ್ರತೆ 3.0 ಇತ್ತು ಎಂದು ಖಾಸಗಿ ಸಂಸ್ಥೆಯೊಂದು ಮಾಹಿತಿ ನೀಡಿದೆ.ಆದರೆ 1.8 ರಷ್ಟು ತೀವ್ರತೆ ದಾಖಲಾಗಿದೆ ಎಂದು KSNDM ಮಾಹಿತಿ ನೀಡಿದೆ.ಸಂಪಾಜೆ, ಕಲ್ಲುಗುಂಡಿ , ಚೆಂಬು ಪ್ರದೇಶ ಕೇಂದ್ರಿತವಾಗಿದೆ. ಭೂಮಿಯ 10 ಕಿಮೀ ತಳಭಾಗದಲ್ಲಿ ಕಂಪನವಾಗಿದೆ ಎಂದು ಅದು ವರದಿ ಮಾಡಿದೆ.1.15 ಸೆಕೆಂಡ್ ಕಾಲ ಭೂಮಿ ಕಂಪಿಸಿದೆ ಎಂದು ವರದಿ ಮಾಡಿದೆ.
ಜೂ.25 ರಂದು ಮೊದಲ ಬಾರಿಗೆ ಬೆಳಗ್ಗೆ 9.10-9.15 ಸುಮಾರಿಗೆ ಭೂಮಿ ಕಂಪಿಸಿತ್ತು, ಆ ಸಮಯದಲ್ಲಿ 2.3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಅದಾದ ನಂತರ ಜೂ.28 ರಂದು ಎರಡನೇ ಬಾರಿ ಬೆಳಗ್ಗೆ ಭೂಮಿ ಕಂಪಿಸಿದಾಗ 3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಸಂಜೆ 1.8 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಅದಾದ ಬಳಿಕ ಸಂಪಾಜೆ ಪ್ರದೇಶದಲ್ಲಿಯೇ ರಿಕ್ಟರ್ ಮಾಪಕ ಇಡಲಾಗಿದೆ. ಇದೀಗ ಜೂ.30 ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪನವಾಗಿದೆ. ಭೂಕಂಪನದ ನಂತರ ಪಶ್ಚಾತ್ ಕಂಪನ ಇರುತ್ತದೆ. ಆದರೆ ಈಗ ಜನರು ಭಯಗೊಳ್ಳುವಂತಾಗಿದೆ.
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…