ಸುಳ್ಯ ತಾಲೂಕಿನ ವಿವಿದೆಡೆ ಜೂ.30 ತಡರಾತ್ರಿ ಭೂಕಂಪನದ ಬಳಿಕ ಇದೀಗ ಮತ್ತೆ 10.45 ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಜನತೆ ಹೇಳಿದ್ದಾರೆ. ಸುಳ್ಯ ತಾಲೂಕಿನ ಉಬರಡ್ಕ, ಚೆಂಬು, ಗೂನಡ್ಕದಲ್ಲಿ ಭೂಮಿ ಕಂಪನದ ಅನುಭವವಾಗಿದೆ ಎಂದು ಜನರು ಹೇಳಿದ್ದಾರೆ. ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮತ್ತೆ ಮತ್ತೆ ಭೂಕಂಪನಕ್ಕೆ ಕಾರಣ ಏನು ಹಾಗೂ ಏಕೆ ಕಂಪನವಾಗುತ್ತಿದೆ. ಇದುವರೆಗೆ ಒಟ್ಟು 5 ನೇ ಬಾರಿ ಭೂಮಿ ಕಂಪನವಾಗಿದೆ. ಇದು ಏಕೆ ಎಂಬುದು ಈಗ ಜನರ ಪ್ರಶ್ನೆಯಾಗಿದೆ.
ಜೂ.30 ತಡರಾತ್ರಿ 1.15 ಕ್ಕೆ ಭೂಕಂಪನದ ತೀವ್ರತೆ 2.5 ಮ್ಯಾಗ್ನಿಟ್ಯೂಡ್ ಇತ್ತು ಎಂದು ಕೇಂದ್ರ ಸರ್ಕಾರದ ಭೂಗರ್ಭ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಇಲಾಖೆಯ ಚೆಂಬು ಪ್ರದೇಶದಲ್ಲಿ ಭೂಕಂಪನವನ್ನು ತಿಳಿಯುವ ಸಾಧನವನ್ನು ಇರಿಸಿದೆ. ಕಳೆದ 24 ಗಂಟೆಯಲ್ಲಿ 32 ಬಾರಿ ಲಘುಪ್ರಮಾಣದಲ್ಲಿ ಭೂಮಿ ಕಂಪಿಸಿದೆಯೇ ಎನ್ನುವ ಪ್ರಶ್ನೆ ಇದೆ. ಆದರೆ 2 ಬಾರಿ ಮಾತ್ರಾ ಅನುಭವವಾಗಿದೆಯೇ ? ಈ ಬಗ್ಗೆ ಅಧಿಕೃತವಾಗಿ ಇಲಾಖೆಗಳು ಸ್ಪಷ್ಟಪಡಿಸಬೇಕಿದೆ. ಸಂಪಾಜೆ, ಚೆಂಬು ಸೇರಿದಂತೆ ಆಸುಪಾಸಿನ ಪ್ರದೇಶದ ಈ ಕಂಪನಗಳು ಜನರನ್ನು ಆತಂಕಕ್ಕೀಡು ಮಾಡಿದೆ.
ಗೋಮಯವನ್ನು ಶುದ್ಧ ಇಂಧನ ಹಾಗೂ ಸಾವಯವ ಗೊಬ್ಬರವಾಗಿ ಬಳಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉತ್ತರ…
ಬ್ರೆಜಿಲ್ನಲ್ಲಿ ಮಳೆಯಿಂದ ಕಾಫಿ ಕೊಯ್ಲು ವಿಳಂಬವಾಗಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ…
ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…
ಪವರ್ ಸ್ಪ್ರೇಯರ್ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್ನ ಪರಿಣಾಮಗಳ ಬಗ್ಗೆ ಪ್ರಶ್ನೆ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…
ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಫಡ್ನವೀಸ್ಗೆ ಅಡಿಕೆ…