ಸುಳ್ಯ ತಾಲೂಕು ಹಾಗೂ ಕೊಡುಗು-ಸಂಪಾಜೆಯಲ್ಲಿ ಗುರುವಾರ ತಡರಾತ್ರಿ ಸುಮಾರು 1.15 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಸುಳ್ಯ ತಾಲೂಕಿನ ವಿವಿದೆಡೆ ಭೂಮಿ ಕಂಪನದ ಅನುಭವ ಹಲವರಿಗೆ ಆಗಿದೆ. ಚೆಂಬು, ಸಂಪಾಜೆಯಲ್ಲೂ ಈ ಅನುಭವವಾಗಿದ್ದು ಎರಡು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ಹಲವರು ಹೇಳಿದ್ದಾರೆ. ಭೂಕಂಪನದ ನಂತರ ಪಶ್ಚಾತ್ ಕಂಪನ ಇರುತ್ತದೆ. ಆದರೆ ಈಗ ಜನರು ಭಯಗೊಳ್ಳುವಂತಾಗಿದೆ.
ಜೂ.25 ರಂದು ಮೊದಲ ಬಾರಿಗೆ ಬೆಳಗ್ಗೆ 9.10-9.15 ಸುಮಾರಿಗೆ ಭೂಮಿ ಕಂಪಿಸಿತ್ತು, ಆ ಸಮಯದಲ್ಲಿ 2.3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಅದಾದ ನಂತರ ಜೂ.28 ರಂದು ಎರಡನೇ ಬಾರಿ ಬೆಳಗ್ಗೆ ಭೂಮಿ ಕಂಪಿಸಿದಾಗ 3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಸಂಜೆ 1.8 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಅದಾದ ಬಳಿಕ ಸಂಪಾಜೆ ಪ್ರದೇಶದಲ್ಲಿಯೇ ರಿಕ್ಟರ್ ಮಾಪಕ ಇಡಲಾಗಿದೆ. ಇದೀಗ ಜೂ.30 ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪನವಾಗಿದೆ. ಭೂಕಂಪನದ ನಂತರ ಪಶ್ಚಾತ್ ಕಂಪನ ಇರುತ್ತದೆ. ಆದರೆ ಈಗ ಜನರು ಭಯಗೊಳ್ಳುವಂತಾಗಿದೆ.
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…