Advertisement
ಸುದ್ದಿಗಳು

ಪದೇ ಪದೇ ಭೂಮಿ ಕಂಪನ | ಮತ್ತೆ ಆತಂಕಕ್ಕೆ ಒಳಗಾಗುವ ಜನ | ಕಲ್ಮಕಾರು-ಸಂಪಾಜೆ ಪ್ರದೇಶದಲ್ಲಿ ಮತ್ತೆ ಆತಂಕ | ಭೂಮಿ ಕಂಪನದ ಕಾರಣ ಇದುವರೆಗೂ ನಿಗೂಢ…! |

Share

ವಾರದ ಹಿಂದೆ ದ ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು, ಸಂಪಾಜೆ ಪ್ರದೇಶದಲ್ಲಿ ಭೂಕುಸಿತ, ಪ್ರವಾಹ, ಭಾರೀ ಮಳೆಯ ಸದ್ದಿನ ಬಳಿಕ ಇದೀಗ ಮತ್ತೆ ಭೂಕಂಪನದ ಸುದ್ದಿ ಕೇಳಿದೆ. ಭಾನುವಾರ ಸಂಜೆ ಕಲ್ಮಕಾರು, ಸಂಪಾಜೆ, ದೊಡ್ಡತೋಟ, ಮರ್ಕಂಜ, ಗುತ್ತಿಗಾರು, ದೇವಚಳ್ಳ ಸೇರಿದಂತೆ ವಿವಿದೆಡೆ ಭೂಮಿ ಕಂಪಿಸಿದ ಅನುಭವವಾಗಿದೆ, ಅದರ ಜೊತೆಗೆ ಗುಡುಗು ಮಾದರಿಯ ಸದ್ದು ಕೂಡಾ ಜನರಿಗೆ ಕೇಳಿದೆ. ಹೀಗಾಗಿ ಮತ್ತೆ ಆತಂಕಕ್ಕೆ ಕಾರಣವಾಗಿದೆ. 

ಎರಡು ವಾರದ ಹಿಂದೆ ಭಾರೀ ಪ್ರವಾಹದಿಂದ ಕಲ್ಮಕಾರು, ಸಂಪಾಜೆ ಪ್ರದೇಶದ ಜನರನ್ನು ಅಕ್ಷರಶ: ಆತಂಕಕ್ಕೆ ತಳ್ಳಿತ್ತು ಭಾರೀ ಮಳೆ, ಜಲಸ್ಫೋಟ, ಮೇಘಸ್ಫೋಟ. ಅದಕ್ಕೂ ಎರಡು ವಾರದ ಹಿಂದೆ ಇದೇ ಪ್ರದೇಶದಲ್ಲಿ ಸತತವಾಗಿ ಭೂಕಂಪನದ ಮಾದರಿಯ ಸದ್ದುಗಳು ಕೇಳಿತ್ತು, ಭೂಮಿ ನಡುಗಿದ ಅನುಭವವಾಗಿತ್ತು. ಇದೆರಡೂ ಘಟನೆಗಳ ನಂತರ ಜನರು ಆತಂಕ್ಕೆ ಒಳಗಾಗಿದ್ದರು. ಇದೀಗ ಮತ್ತೆ ಭೂಮಿ ಕಂಪಿಸಿದ ಅನುಭವವಾದಂತೆಯೇ ಮತ್ತೆ ಆತಂಕ ಶುರುವಾಗಿದೆ. ನಿಜಕ್ಕೂ ಈ ಕಂಪನಕ್ಕೆ ಕಾರಣವೇನು ? ಎಂಬುದೇ ನಿಗೂಢ , ಯಕ್ಷ ಪ್ರಶ್ನೆ.

ಕಳೆದ ಸುಮಾರು ಒಂದು ತಿಂಗಳಿನಿಂದ ಭೂಮಿ ಕಂಪನದ ಸುದ್ದಿ ಇದೆ. ಸಂಪಾಜೆ ಪ್ರದೇಶದಲ್ಲಿ 8 ಕ್ಕೂ ಅಧಿಕ ಬಾರಿ ಭೂಮಿ ಕಂಪಿಸಿದೆ. ಅದಾದ ನಂತರ ಜನರೂ ಒತ್ತಾಯಿಸಿದರು. ಭೂಮಿ ಕಂಪನಕ್ಕೆ ಅಧ್ಯಯನಗಳು ನಡೆದವು. ಆದರೆ ಇದುವರೆಗೂ ಕಂಪನಕ್ಕೆ ಕಾರಣ ತಿಳಿದಿಲ್ಲ. ಕಂಪನವಾದ ಪ್ರದೇಶದಲ್ಲಿಯೇ ಭೂಕುಸಿತ, ಜಲಸ್ಫೋಟ, ಮೇಘಸ್ಫೋಟ ನಡೆಯಿತು. ಆದರೆ ಭೂಮಿ ಕಂಪನಕ್ಕೆ ಕಾರಣ ತಿಳಿದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿದರು, ಕೆಲವರು ಪರಿಸರ ನಾಶದಿಂದ ಭೂಮಿ ಕಂಪನ ಎಂದರೆ ಇನ್ನೂ ಕೆಲವರು ಕೊಳವೆಬಾವಿ ಕಾರಣ ಎಂದರು. ಇನ್ನೂ ಕೆಲವರು ಗಣಿಗಾರಿಕೆ, ರೆಸಾರ್ಟ್‌ ಗಳು ಕಾರಣ ಎಂದೂ ಹೇಳಿದರು. ಅವರವರ ವಿಶ್ಲೇಷಣೆಗೆ ತಕ್ಕಂತೆ ಕಾರಣಗಳನ್ನು ಹೇಳಿದರು. ವೈಜ್ಞಾನಿಕವಾಗಿ ಕಲ್ಮಕಾರು, ಸಂಪಾಜೆ ಪ್ರದೇಶವೇ ಕೇಂದ್ರೀಕರಿಸಿ ನಡೆಯುತ್ತಿರುವ ಭೂಕಂಪನಕ್ಕೆ , ಭಾರೀ ಮಳೆಗೆ ನಿಖರ ಕಾರಣ  ತಿಳಿದಿಲ್ಲ. ವಿಜ್ಞಾನಿಗಳು, ತಜ್ಞರು ಭೇಟಿ ನೀಡಿದರೂ ಅಧಿಕೃತ ಕಾರಣ ಇನ್ನೂ ಹೊರಬಂದಿಲ್ಲ. 2018 ರಲ್ಲೂ ಇದೇ ಮಾದರಿ ಆಗಿತ್ತು. ಸಂಪಾಜೆ ಪ್ರದೇಶದಲ್ಲಿ ಭೂಕುಸಿತವಾದ ಬಳಿಕ ತಜ್ಞರ ಅಧ್ಯಯನ ವರದಿಯಲ್ಲಿ ನಿಖರವಾದ ಕಾರಣಿವನ್ನೂ ತಿಳಿಸಿಲ್ಲ. ಈ ವರ್ಷವೂ ಅದೇ ಮಾದರಿಯ ಘಟನೆಗಳು ನಡೆದಿವೆ. ಸಂಬಂಧಿತರು ಈ ಬಗ್ಗೆ ಜಾಗೃತಿ ಮೂಡಿಸುವುದು  ಹಾಗೂ ಕಂಪನಕ್ಕೆ ಸೂಕ್ತ ಕಾರಣ ಪತ್ತೆ ಮಾಡಬೇಕಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ

ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…

22 minutes ago

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

1 day ago

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್‌, ಟಿಎಸ್‌ಎಸ್‌, ತುಮ್ಕೋಸ್‌, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…

1 day ago

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…

1 day ago

ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ

ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…

1 day ago

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!

ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…

2 days ago