Advertisement
ಸುದ್ದಿಗಳು

ಲೆಕ್ಕ ತಪ್ಪಿದ ಅಂಕ | ಎಕನಾಮಿಕ್ಸ್ ಪರೀಕ್ಷೆಯಲ್ಲಿ 27 ಅಂಕ ಢಮಾರ್…!‌ |‌ ವಿದ್ಯಾರ್ಥಿನಿಯ ಆತಂಕಕ್ಕೆ ಯಾರು ಹೊಣೆ ? |

Share

ಇದೊಂದು ಲೆಕ್ಕ. 09+11+12+20+18+27 =70 ..! ಇನ್ನೊಮ್ಮೆ ಕೂಡಿಸಿ. ಸರಿಯಾಗದೇ ಇದ್ದರೆ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಕೇಳಬೇಕು. ಇಂತಹದ್ದೊಂದು ಎಡವಟ್ಟು ಲೆಕ್ಕ ಮಾಡಿರುವುದು  ಎಕನಾಮಿಕ್ಸ್‌ ಉಪನ್ಯಾಸಕರೊಬ್ಬರು.ಆದರೆ ಈ ಎಡವಟ್ಟು ವಿದ್ಯಾರ್ಥಿನಿಯೊಬ್ಬ ಭವಿಷ್ಯದ ಮೇಲೆ ಹೊಡೆತ ಬೀಳುತ್ತಿತ್ತು. ಆದರೆ ಏನೋ ಎಡವಟ್ಟಾಗಿದೆ ಎಂದು ವಿದ್ಯಾರ್ಥಿನಿಗೆ ಪಕ್ಕಾ ಗೊತ್ತಾದ ಕಾರಣ ಧೈರ್ಯದಿಂದ ಇದ್ದರು. ಈಗ ಉತ್ತರ ಸಿಕ್ಕಿತು. 27 ಅಂಕವನ್ನು ಕೂಡಿಸಲೇ ಇಲ್ಲ…!. ಹೀಗಾಗಿ ಈಗ ವಿದ್ಯಾರ್ಥಿನಿಯ ಅಂಕ 97.

Advertisement
Advertisement
Advertisement
Advertisement

ಹೌದು. ಈ ಎಡವಟ್ಟು ಆಗಿರುವುದು ಕುಕ್ಕೆ ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿಂದು ಭಾರ್ಗವಿ ಅವರಿಗೆ. ರಾಧಾಕೃಷ್ಣ ಭಟ್‌ ಅಡ್ಕ ಗುತ್ತಿಗಾರು ಇವರ ಪುತ್ರಿಯಾಗಿರುವ ಬಿಂದು ಭಾರ್ಗವಿ  ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಎಕನಾಮಿಕ್ಸ್‌ನಲ್ಲಿ  95 ರಿಂದ 97 ಅಂಕದ ನಿರೀಕ್ಷೆಯಲ್ಲಿದ್ದರು. ಆದರೆ ಫಲಿತಾಂಶ ಬಂದಾಗ ಕೇವಲ 70 ಅಂಕ. ವಿದ್ಯಾರ್ಥಿನಿಗೆ ಒಮ್ಮೆ ಆತಂಕವಾಗಿತ್ತು. ಇಷ್ಟೆಲ್ಲಾ ಬರೆದು ಹೀಗೇಕಾಯಿತು ಎಂದು.ಇದು ಎಕನಾಮಿಕ್ಸ್‌ ಬೇರೆ. ಲೆಕ್ಕಗಳು ಪಕ್ಕಾ ಇದ್ದರೆ ಅಂಕವೂ ಪಕ್ಕಾವೇ. ಹಾಗಾಗಿ ಎಲ್ಲವೂ ಬರೆದ ನಂತರವೂ ಹೀಗೇಕಾಯಿತು ಎಂದು ಆತಂಕಕ್ಕೆ ಒಳಗಾದಳು. ಆಗ ವಿದ್ಯಾರ್ಥಿನಿಯ ಮನೆಯವರು ಧೈರ್ಯ ತುಂಬಿ ಉತ್ತರ ಪತ್ರಿಕೆಯ ನಕಲು ತಂದಾಗ ಸತ್ಯ ತಿಳಿಯಿತು. 27 ಅಂಕವನ್ನು ಸೇರ್ಪಡೆ ಮಾಡಲೇಇಲ್ಲ..!. ಹೀಗಾಗಿ ವಿದ್ಯಾರ್ಥಿನಿಗೆ ಈಗ ಅಂಕ 97.

Advertisement

ಇಲಾಖೆಗಳು ಇಂತಹ ಎಡವಟ್ಟುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪರೀಕ್ಷೆ ಚೆನ್ನಾಗಿ ಬರೆದು ತಪ್ಪಾಗಿ ಅಂಕ ಕೂಡಿಸಿ ಫಲಿತಾಂಶ ಪ್ರಕಟವಾಗಿ ವಿದ್ಯಾರ್ಥಿಗಳು ಮಾನಸಿಕ ಆಘಾತಕ್ಕೆ ಒಳಗಾದರೆ ಯಾರು ಹೊಣೆ. ಹೀಗಾಗಿ ಇಂತಹ ಗಂಭೀರವಾದ ಎಡವಟ್ಟುಗಳು ಆಗದಂತೆ ಇಲಾಖೆಗಳು ಎಚ್ಚರ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಯಾವುದೇ ವಿದ್ಯಾರ್ಥಿಗಳಿಗೆ ಇದೊಂದು ಪಾಠ. ನಿರೀಕ್ಷೆಯಷ್ಟು ಅಂಕ ಬಾರದೇ ಇದ್ದಾಗ ಯಾವುದೇ ಆತಂಕಕ್ಕೆ ಒಳಗಾಗದೆ ಪರಿಶೀಲನೆ ನಡೆಸುವುದು  ಉತ್ತಮ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |

ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…

3 hours ago

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…

4 hours ago

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?

ತೀರಾ ಸಣ್ಣ ಮಟ್ಟಿನ‌ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?

5 hours ago

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

14 hours ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

14 hours ago

ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

14 hours ago