ಮಳೆರಾಯ ಆಗಮನದೊಂದಿಗೆ ಸೊಳ್ಳೆ ಕಾಟನೂ ಶುರು | ಕೃಷಿ ಕೆಲಸ ಮಾಡೋರಿಗೆ ಒಂದಿಷ್ಟು ಸೊಳ್ಳೆ ಕಾಟಕ್ಕೆ ಪರಿಹಾರ |

June 4, 2024
10:25 AM
ಕೃಷಿ ಭೂಮಿಯಲ್ಲಿ ಮಳೆಗಾಲ ಸೊಳ್ಳೆಗಳನ್ನು ತಡೆಯಲು ಪರಿಣಾಮಕಾರಿ ತಂತ್ರಗಳು ಬೇಕಾಗಿದೆ . ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸರಳವಾದ ಆದರೆ ಪರಿಣಾಮಕಾರಿ ತಂತ್ರಗಳು ಬೇಕಾಗಿದೆ. ಈ ಬಗ್ಗೆ ಕೃಷಿಕ ಶ್ಯಾಮ ಸುಂದರ ಭಟ್‌ ಅವರು ನೀಡಿರುವ ಮಾಹಿತಿ ಇಲ್ಲಿದೆ....

ಮಳೆಗಾಲ(Rainy season) ಆರಂಭದಲ್ಲಿ ಕೃಷಿ(Agricultural) ಕೆಲಸ ಮಾಡುವವರಿಗೆ ಸೊಳ್ಳೆ(Mosquito) ಕಾಟ ವಿಪರೀತ. ಪಕ್ಕದಲ್ಲಿ ರಬ್ಬರ್(Rubber) ಇದ್ದರಂತೂ ಹೇಳುವುದೇ ಬೇಡ. ಶ್ರೀಮಂತರು ಓಡೋಮಸ್ ಮುಲಾಮನ್ನು ಮೈ ತುಂಬಾ ಹಚ್ಚಿಕೊಳ್ಳುತ್ತಾರೆ. ಬಡವರಿಗೆ ಇದು ಕಷ್ಟ. ಸೊಳ್ಳೆ ಬಾರದ ಹಾಗೆ ಮಾಡಲು ಕೆಲವು ಸುಲಭ ವಿಧಾನ ಇದೆ.

  1. 100 ml ಸೆಕೆಂಡ್ ಕ್ಲಾಸ್ ತೆಂಗಿನ ಎಣ್ಣೆ(Coconut Oil) ಯನ್ನು ಒಂದು ಬಾಟಲಿಯಲ್ಲಿ ಹಾಕಿ ಅದಕ್ಕೆ 10-15 ml ಡೀಸೆಲ್ ಮಿಶ್ರ ಮಾಡಿ. ಅದನ್ನು ಚೆನ್ನಾಗಿ ಮಿಶ್ರ ಮಾಡಿ ಕೈಕಾಲಿಗೆ ಹಚ್ಚಿ( ಮುಖಕ್ಕೆ ಬೇಡ ).
  2. ಕೆಲವರಿಗೆ ಡೀಸೆಲ್ ಅಲರ್ಜಿ ಆಗುತ್ತದೆ. ಅಂತವರು ಡೀಸೆಲ್ ಬದಲು ಎರಡು ಮೂರು ಕರ್ಪೂರದ ಬಿಲ್ಲೇ ಹಾಕಿ. ಈ ಮಿಶ್ರಣವನ್ನು ಮುಖಕ್ಕೆ ಸಹಾ ಹಚ್ಚಬಹುದು. ತಿಂಡಿ ಕರಿದು ಆದ ಮೇಲೆ ಉಳಿದ ತೆಂಗಿನ ಎಣ್ಣೆಯನ್ನು ಸಹಾ ಬಳಸಬಹುದು.
  3. ಬೇವಿನ ಎಣ್ಣೆ ಹಚ್ಚಿಕೊಂಡು ತೋಡಕ್ಕೆ ಇಳಿದರು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು. ಆದರೆ ಬೇವಿನ ಎಣ್ಣೆಯ ವಾಸನೆ ತೊಳೆಯುವುದು ದೊಡ್ಡ ಕಿರಿಕಿರಿ.
  4. ಹಸಿ ಬೆಳ್ಳುಳ್ಳಿ ಮಿಸ್ರಿತ ತೆಂಗಿನ ಎಣ್ಣೆ ಲೇಪನ ಮಾಡಿದರೆ ಸೊಳ್ಳೆಗಳು ಹತ್ತಿರ ಬರುದಿಲ್ಲ.

ಕೆಲವರ ದೇಹದ ಪರಿಮಳಕ್ಕೆ ಸೊಳ್ಳೆಗಳು ಬರುವುದಿಲ್ಲ, ಕೆಲವರ ರಕ್ಷತದ ಮಾದರಿಗೆ ಸೊಳ್ಳೆಗಳು ಹತ್ತಿರ ಸುಳಿಯೋದಿಲ್ಲ. ಇನ್ನು ಕೆಲವರ ರಕ್ತಕ್ಕೆ ಸೊಳ್ಳೆಗಳು ಬಹುಬೇಗ ಹತ್ತಿರ ಬರುತ್ತವೆ. ಬೆಳಿಗ್ಗೆ ಹಚ್ಚಿದರೆ ಮಧ್ಯಾಹ್ನದವರೆಗೂ ಸೊಳ್ಳೆ ಕಡಿತ ಇರುವುದಿಲ್ಲ. ಮತ್ತೆ ಪುನಃ ಹಚ್ಚಬೇಕು. ಈ ಮದ್ದು ಹಳ್ಳಿಯಲ್ಲಿ ಸಾಮಾನ್ಯ ಎಲ್ಲರಿಗೂ ಗೊತ್ತಿರುತ್ತದೆ. ಗೊತ್ತಿಲ್ಲದವರಿಗೆ ಈ ಮಾಹಿತಿ.

ಬರಹ :
ಶಾಮ ಸುಂದರ ಭಟ್

Protecting Yourself from Mosquitoes in Agriculture: Simple Techniques for Rainy Season Safety

Protecting yourself from mosquitoes in agriculture during the rainy season is essential for maintaining health and productivity. Employing simple techniques such as wearing long-sleeved clothing, using mosquito repellent, and eliminating standing water around farming areas can significantly reduce mosquito bites and the risk of mosquito-borne diseases. Additionally, incorporating mosquito nets over work areas and ensuring proper drainage can further enhance safety and comfort while working in the fields.

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror