ಹರ್ಯಾಣ ಸರಕಾರ ಯಮುನಾ ನದಿಗೆ ಉದ್ದಿಶ್ಯಪೂರ್ವಕವಾಗಿ ಅಮೋನಿಯಾ ಹೆಚ್ಚು ಬೆರೆಯುವಂತೆ ಮಾಡ್ತಾ ಇದೆ.ಹಾಗಾಗಿ ಆ ನೀರನ್ನು ಬಳಸಿದ ದೆಹಲಿಯ ಜನರಿಗೆ ಆರೋಗ್ಯ ಸಮಸ್ಯೆ ಬರಲಿದೆ ಅಂತ ಅರವಿಂದ ಕೇಜ್ರೀವಾಲರ ಆರೋಪ.
ಹಾಗೇನೂ ಆಗಿಲ್ಲ ಎಂಬುದರ ಪ್ರದರ್ಶನಕ್ಕಾಗಿ ಹರ್ಯಾಣದ ಮುಖ್ಯಮಂತ್ರಿಯವರು ಎರಡು ರಾಜ್ಯಗಳ ಗಡಿಯಲ್ಲಿ ಯಮುನಾ ನದಿಯ ನೀರು ಕುಡಿದು ತೋರಿಸಿದ ವಿಡಿಯೋ ಪ್ರದರ್ಶನಕ್ಕೆ.
ನೀರು ಕುಡಿದ ನಾಟಕ ಅವರು ಮಾಡಿದ್ದು ಅಂತ ಇವರ ಪ್ರತ್ಯಾರೋಪ. ಮಾಧ್ಯಮಗಳಲ್ಲಂತೂ ಇದರದ್ದೇ ಸುದ್ದಿ,ಚರ್ಚೆ,ವಾಗ್ವಾದ. ನನಗೆ ಅರ್ಥವಾಗದ್ದು ,ದೆಹಲಿ / ಹರ್ಯಾಣ ರಾಜ್ಯದ ಗಡಿಯಲ್ಲಿನ ನೀರಿನ ರಾಸಾಯನಿಕ ಪರೀಕ್ಷೆ ಯಾವುದೇ ಮಾಧ್ಯಮ ಯಾಕೆ ಮಾಡಿಲ್ಲ ಅಂತ.ಅದು ಮತ್ತು ಅದರ ಜೊತೆ ದೆಹಲಿ ರಾಜ್ಯದ ಇನ್ನೊಂದು ಬದಿಯಲ್ಲಿನ ನದಿ ನೀರನ್ನು ಅಮೋನಿಯಾ ರಾಸಾಯನಿಕದ ಪ್ರಮಾಣಕ್ಕಾಗಿ ಪರೀಕ್ಷೆ ಮಾಡಿಸಿದ್ದರೆ ಸಮಸ್ಯೆ ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತಿತ್ತಲ್ಲಾ ಅಂತ. ಅಂದ ಹಾಗೆ ದೆಹಲಿ ರಾಜ್ಯ ದಾಟಿದ ಬಳಿಕ ಯಮುನಾ ನದಿ ಯಾವ ರಾಜ್ಯದಲ್ಲಿ ಹರಿದು ಹೋಗುತ್ತಿದೆ? ಅಲ್ಲಿ ನದಿ ನೀರಿನ ಪರಿಸ್ಥಿತಿ ಹೇಗಿದೆ?
ಭಾರತದಾದ್ಯಂತ ಮುಂಗಾರು ಸಕ್ರಿಯವಾಗಿದೆ. ಈ ಬಾರಿ ಉತ್ತಮ ಮುಂಗಾರು ಮಳೆಯಾಗುತ್ತಿದೆ. ಸದ್ಯ ಸಾಮಾನ್ಯ…
ಬೆಳೆಗಳಿಗೆ ಔಷಧಿ ಸಿಂಪಡಣೆ ವೇಳೆ ಹೆಚ್ಚಿನ ದಕ್ಷತೆ ಹಾಗೂ ಪರಿಣಾಮಕಾರಿಯಾಗುವ ಉದ್ದೇಶದಿಂದ ವಿವಿಧ…
ಆರೋಗ್ಯವು ಜೀವನದ ಪ್ರಮುಖ ಅಂಗವಾಗಿದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನವು…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…
ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…