ತಾಂತ್ರಿಕತೆ ಮುಂದುವರಿದರೂ ಸಮಸ್ಯೆ ಮುಗಿಯದು…! | ಇಲ್ಲಿ ವಿದ್ಯುತ್‌ ಕೈಕೊಟ್ಟದ್ದು ಹೇಗೆ..?

March 2, 2024
8:44 PM
ಎಲ್ಲಾ ಪ್ರಯತ್ನಗಳ ನಡುವೆಯೂ ವಿದ್ಯುತ್‌ ಕೈಕೊಟ್ಟರೆ, ತಾಂತ್ರಿಕತೆಯೂ ಕೈಕೊಟ್ಟರೆ ತಾಳ್ಮೆಯೇ ಪರಿಹಾರ. ಈಗ ಗ್ರಾಮೀಣ ಭಾಗದಲ್ಲಿ ಕಂಡುಬಂದಿರುವ ಸಮಸ್ಯೆ ಅಂತಹದ್ದು.

ತಾಂತ್ರಿಕತೆ ಎಷ್ಟೇ ಮುಂದುವರಿದರೂ ಕೆಲವು ಸಮಸ್ಯೆಗಳಿಗೆ ಪರಿಹಾರ ಇಲ್ಲ. ಕಳೆದ ಎರಡು ದಿನಗಳಿಂದ ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ವಿದ್ಯುತ್‌ ಸರಬರಾಜು ಸಮಸ್ಯೆ. ಕಾರಣ ಭೂಮಿ ಒಳಗಿನ ಕೇಬಲ್‌ ಸಮಸ್ಯೆ.

Advertisement
Advertisement

ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ಕಳೆದ ಎರಡು ದಿನಗಳಿಂದ ವಿದ್ಯುತ್‌ ಸರಬರಾಜಿನಲ್ಲಿ ಸಮಸ್ಯೆ. ಹೀಗಾಗಿ ಅನೇಕ ಕಡೆಯ ವಿದ್ಯುತ್‌ ಬಳಕೆದಾರರಿಗೆ ಸಮಸ್ಯೆ. ಹಾಗೆಂದು ಇಲಾಖೆಯ ಸಿಬಂದಿಗಳು, ಅಧಿಕಾರಿಗಳು ಮೌನವಾಗಿ ಕುಳಿತಿಲ್ಲ. ಇಡೀ ದಿನ ಕೆಲಸ ಮಾಡುತ್ತಲೇ ಇದ್ದಾರೆ. ಗ್ರಾಹಕರು, ಕೃಷಿಕರಿಗೆ ಎರಡೂ ದಿನಗಳಿಂದ ಅಧಿಕಾರಿಗಳಿಗೆ, ಮೆಸ್ಕಾಂ ಸಿಬಂದಿಗಳನ್ನು ಪ್ರಶ್ನಿಸುವುದೇ ಕೆಲಸ, ಕರೆಂಟಿಲ್ಲ ಏಕೆ..?. ಕಾರಣ , ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಕೇಬಲ್‌ ಸಮಸ್ಯೆ.(ಯು ಜಿ ಕೇಬಲ್)‌

Advertisement

ಭೂಮಿಯೊಳಗೆ ಕೇಬಲ್‌ ಅಳವಡಿಕೆ ಮಾಡುವ ವೇಳೆ ಎರಡೆರಡು ಕೇಬಲ್‌ ಅಳವಡಿಕೆ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಯಾವ ಸಮಸ್ಯೆಯೂ ಇಲ್ಲದೆ ಗ್ರಾಹಕರಿಗೆ ನಿಶ್ಚಿಂತೆಯಿಂದ ವಿದ್ಯುತ್‌ ಸರಬರಾಜಾಗಿತ್ತು. ಇದೀಗ ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಒಂದು ಕೇಬಲ್‌ ಸಮಸ್ಯೆಯಾಗಿ ಇನ್ನೊಂದು ಕೇಬಲ್‌ ಮೂಲಕ ವಿದ್ಯುತ್‌ ನೀಡಿದಾಗಲೂ ಸಮಸ್ಯೆ..!. ಇದನ್ನು ದುರಸ್ತಿ ಮಾಡಲು ಇನ್ನೊಂದು ತಂಡ ಆಗಮಿಸಬೇಕು ಹಾಗೂ ಭೂಮಿಯೊಳಗಿನಿಂದ ಕೇಬಲ್‌ ತೆಗೆದು ದುರಸ್ತಿ ಮಾಡಬೇಕು. ಹೀಗಾಗಿ ಸಮಸ್ಯೆಯಾಗಿದೆ. ಅಧಿಕಾರಿಗಳು, ಸಿಬಂದಿಗಳು ನಿರಂತರ ಕೆಲಸದಲ್ಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕೈಕೊಟ್ಟರೆ ಕೃಷಿಕರು, ಗ್ರಾಮೀಣ ಭಾಗದ ಹಲವು ಕಡೆ ಸಮಸ್ಯೆ. ಕುಡಿಯುವ ನೀರು, ಸಣ್ಣ ಪುಟ್ಟ ಇಂಡಸ್ಟ್ರೀಗಳು, ಕೃಷಿಕರು ಸೇರಿದಂತೆ ಉದ್ಯಮಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈಗಲೂ ಅದೇ ಸಮಸ್ಯೆ ಕಾಡಿದೆ. ತಾಂತ್ರಿಕವಾಗಿ ಎಷ್ಟೇ ಮುಂದಿವರಿದರೂ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸ್ವಲ್ಪ ವಿಳಂಬವೇ ಆಗಿದೆ. ಇದಕ್ಕೆ ಕಾರಣರು ಯಾರೂ ಅಲ್ಲ, ಪ್ರಕೃತಿಯೇ ಕಾರಣ. ಹೀಗಾಗಿ ಗ್ರಾಹಕರು ಸಮಾಧಾನ ಪಟ್ಟುಕೊಳ್ಳುವುದು, ತಾಳ್ಮೆ ಕಳೆದುಕೊಳ್ಳದಿರುವುದೇ ಪರಿಹಾರ..!.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ
April 29, 2024
11:12 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? | ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ | ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ |
April 29, 2024
3:30 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror