Advertisement
ಸುದ್ದಿಗಳು

ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!

Share

ಅಡಿಕೆ ಕೇವಲ ಒಂದು ವಾಣಿಜ್ಯ ಬೆಳೆಯಲ್ಲ; ಅದು ಏಷ್ಯಾದಾದ್ಯಂತ ಕೋಟ್ಯಂತರ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನದ ಅವಿಭಾಜ್ಯ ಅಂಗ. ಆದರೆ, ಅಡಿಕೆಯ ವಿಪರೀತ ಗಡಸುತನವು ಸಂಸ್ಕರಣಾ ಸಮಯದಲ್ಲಿ ಮತ್ತು ಅದರ ಸೇವನೆಯ ವೇಳೆ ಬಾಯಿಯ ಆರೋಗ್ಯದ ಮೇಲೆ ಸವಾಲುಗಳನ್ನು ಒಡ್ಡುತ್ತಲೇ ಬಂದಿದೆ. ಈ ಸಮಸ್ಯೆಗೆ ಈಗ ಚೀನಾದ ವಿಜ್ಞಾನಿಗಳು ಆಧುನಿಕ ಎಲೆಕ್ಟ್ರಾನ್ ಬೀಮ್ ವಿಕಿರಣ (Electron Beam Irradiation – EBI) ತಂತ್ರಜ್ಞಾನದ ಮೂಲಕ ವೈಜ್ಞಾನಿಕ ಪರಿಹಾರ ಕಂಡುಕೊಂಡಿದ್ದಾರೆ.

ಸಂಶೋಧನೆಯ ಹಿನ್ನೆಲೆ : ಚೀನಾದ ಹೈನಾನ್ ಪ್ರಾಂತ್ಯದಲ್ಲಿರುವ ಪ್ರತಿಷ್ಠಿತ ಚೈನೀಸ್ ಅಕಾಡೆಮಿ ಆಫ್ ಟ್ರಾಪಿಕಲ್ ಅಗ್ರಿಕಲ್ಚರಲ್ ಸೈನ್ಸಸ್ (CATAS) ಸಂಸ್ಥೆಯ ವಿಜ್ಞಾನಿಗಳು ಈ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಅಡಿಕೆಯ ಸೂಕ್ಷ್ಮರಚನೆ ಮತ್ತು ಅದರ ಒಳಗಿರುವ ರಾಸಾಯನಿಕಗಳ ಮೇಲೆ ವಿಕಿರಣದ ಪ್ರಭಾವ ಹೇಗಾಗುತ್ತದೆ ಎಂಬ ಬಗ್ಗೆ ನಡೆಸಿದ ಈ ಅಧ್ಯಯನವು ಇತ್ತೀಚೆಗೆ ಅಂತರಾಷ್ಟ್ರೀಯ ವಿಜ್ಞಾನ ಪತ್ರಿಕೆ ‘ಜರ್ನಲ್ ಆಫ್ ದಿ ಸೈನ್ಸ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್’ (2024-25) ನಲ್ಲಿ ಪ್ರಕಟವಾಗಿದೆ.

ಸಂಶೋಧನೆಯ ಪ್ರಮುಖ ಶೋಧನೆಗಳು:

  1. ರಚನಾತ್ಮಕ ಬದಲಾವಣೆ ಮತ್ತು ಮೃದುತ್ವ : ಅಡಿಕೆಯ ನಾರಿನಲ್ಲಿರುವ ಲಿಗ್ನಿನ್, ಸೆಲ್ಯುಲೋಸ್ ಮತ್ತು ಹೆಮಿಸೆಲ್ಯುಲೋಸ್ ಎಂಬ ಗಟ್ಟಿಯಾದ ಅಂಶಗಳೇ ಅದರ ಕಾಠಿಣ್ಯಕ್ಕೆ ಕಾರಣ. ವಿಜ್ಞಾನಿಗಳ ತಂಡವು ಅಡಿಕೆಗೆ ವಿವಿಧ ಪ್ರಮಾಣದ ಎಲೆಕ್ಟ್ರಾನ್ ಕಿರಣಗಳನ್ನು ಹರಿಸಿದಾಗ, 6 ರಿಂದ 9 kGy (ಕಿಲೋ ಗ್ರೇ) ಪ್ರಮಾಣದ ವಿಕಿರಣವು ಅಡಿಕೆಯ ನಾರಿನ ರಚನೆಯನ್ನು ಸಡಿಲಗೊಳಿಸಿ ಅದನ್ನು ಗಮನಾರ್ಹವಾಗಿ ಮೃದುಗೊಳಿಸುವುದನ್ನು ಪತ್ತೆಹಚ್ಚಿದೆ. ಇದರಿಂದ ಅಡಿಕೆಯ ಚೂಯಿನೆಸ್ (Chewiness) ಮತ್ತು ಗಡಸುತನ ಗರಿಷ್ಠ ಮಟ್ಟದಲ್ಲಿ ಕಡಿಮೆಯಾಗುತ್ತದೆ.
  2. ಜೈವಿಕ ಸಕ್ರಿಯ ಅಂಶಗಳ ಸಂರಕ್ಷಣೆ : ಸಾಮಾನ್ಯವಾಗಿ ಉಷ್ಣತೆ ಅಥವಾ ರಾಸಾಯನಿಕ ಸಂಸ್ಕರಣೆಯ ವೇಳೆ ಅಡಿಕೆಯಲ್ಲಿರುವ ಔಷಧೀಯ ಗುಣಗಳು ನಾಶವಾಗುತ್ತವೆ. ಆದರೆ, ಈ ‘ಕೋಲ್ಡ್ ಪ್ರೊಸೆಸಿಂಗ್’ ವಿಧಾನದಲ್ಲಿ  ಆಲ್ಕಲಾಯ್ಡ್‌ಗಳು ಮತ್ತು ಪಾಲಿಫೆನಾಲ್‌ಗಳು ಅಡಿಕೆಯಲ್ಲಿರುವ ನೈಸರ್ಗಿಕ ಆಲ್ಕಲಾಯ್ಡ್‌ಗಳು ಮತ್ತು ಆಂಟಿ-ಆಕ್ಸಿಡೆಂಟ್‌ ಗುಣವುಳ್ಳ ಫ್ಲೇವನಾಯ್ಡ್‌ಗಳ ಪ್ರಮಾಣವು ವಿಕಿರಣದ ನಂತರವೂ ಸ್ಥಿರವಾಗಿರುವುದು ಕಂಡುಬಂದಿದೆ. ಪೌಷ್ಟಿಕಾಂಶ ವೃದ್ಧಿ: ಕೆಲವು ಹಂತಗಳಲ್ಲಿ ಈ ಜೈವಿಕ ಅಂಶಗಳ ಲಭ್ಯತೆಯು ಹೆಚ್ಚಾಗಿರುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ.
  3. ಸಂಸ್ಕರಣಾ ದಕ್ಷತೆ (Physicochemical Properties) : ವಿಕಿರಣಕ್ಕೆ ಒಳಗಾದ ಅಡಿಕೆಯ ಸೂಕ್ಷ್ಮರಚನೆಯು ಬದಲಾಗುವುದರಿಂದ, ಅದು ನೀರು ಮತ್ತು ಎಣ್ಣೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು (Water/Oil Holding Capacity) ಹೆಚ್ಚಿಸಿಕೊಳ್ಳುತ್ತದೆ. ಇದು ಅಡಿಕೆಗೆ ನೈಸರ್ಗಿಕ ಸುವಾಸನೆಗಳನ್ನು ಸೇರಿಸುವ ಅಥವಾ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಅತ್ಯಂತ ಸಹಕಾರಿಯಾಗಿದೆ.

ಆರೋಗ್ಯ ಮತ್ತು ಉದ್ಯಮದ ಮೇಲೆ ಪ್ರಭಾವ :  ಅಡಿಕೆಯನ್ನು ಮೃದುಗೊಳಿಸುವುದರಿಂದ, ಗಟ್ಟಿಯಾದ ಅಡಿಕೆ ಅಗಿಯುವುದರಿಂದ ಉಂಟಾಗುವ ಹಲ್ಲು ಮತ್ತು ಬಾಯಿಯ ಸ್ನಾಯುಗಳ ಹಾನಿಯನ್ನು (Oral Submucous Fibrosis) ತಗ್ಗಿಸಬಹುದು ಎಂದು ವಿಜ್ಞಾನಿಗಳು ಆಶಿಸಿದ್ದಾರೆ. ಅಲ್ಲದೆ, ಇದು ಯಾವುದೇ ರಾಸಾಯನಿಕ ಮುಕ್ತ ವಿಧಾನವಾದ್ದರಿಂದ ಪರಿಸರ ಸ್ನೇಹಿ ಮತ್ತು ಗ್ರಾಹಕರಿಗೆ ಸುರಕ್ಷಿತವಾಗಿದೆ.

ಈ ಸಂಶೋಧನೆಯು ಭಾರತದಂತಹ ಅಡಿಕೆ ಬೆಳೆಯುವ ದೇಶಗಳ ಸಂಸ್ಕರಣಾ ಘಟಕಗಳಿಗೆ ಹೊಸ ದಾರಿಯನ್ನು ತೋರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುಣಮಟ್ಟದ ಮತ್ತು ಮೃದುವಾದ ಅಡಿಕೆಗೆ ಬೇಡಿಕೆ ಹೆಚ್ಚುತ್ತಿದ್ದು, ಚೀನಾ ವಿಜ್ಞಾನಿಗಳ ಈ ತಂತ್ರಜ್ಞಾನವು ಅಡಿಕೆ ಉದ್ಯಮದಲ್ಲಿ ಮೌಲ್ಯವರ್ಧನೆಯ ಕ್ರಾಂತಿಗೆ ನಾಂದಿ ಹಾಡಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಆರಂಭವಾಗುತ್ತಿದ್ದಂತೆಯೇ ಗಿಡಗಳ ನಾಟಿಗೆ ಸಿದ್ಧತೆ – ಅಡಿಕೆ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ…!

ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…

3 hours ago

ಕೇಂದ್ರ ಸರ್ಕಾರದ ಸೌಲಭ್ಯಗಳಿಗೆ ‘ಕೇಂದ್ರ ರೈತ ಐಡಿ’ ಕಡ್ಡಾಯ – ಮಂಗಳೂರು ತಾಲೂಕಿನ 14,520 ರೈತರು ಇನ್ನೂ ನೋಂದಣಿ ಬಾಕಿ

ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…

4 hours ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

13 hours ago

ಒಂದು ದಿನದ ತೀವ್ರ ಬಿಸಿಲು 3,400 ಹೆಚ್ಚುವರಿ ಸಾವುಗಳಿಗೆ ಕಾರಣ…? ಭಾರತದ ಬಗ್ಗೆ ಬೆಚ್ಚಿಬೀಳಿಸುವ ಅಧ್ಯಯನ

ಭಾರತದಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲು ಸುಮಾರು 3,400 ಹೆಚ್ಚುವರಿ ಸಾವುಗಳಿಗೆ…

17 hours ago

ಹವಾಮಾನ ಬಿಕ್ಕಟ್ಟಿನ ನಡುವೆಯೂ ಕೃಷಿ ಉಳಿಸುವ ದಾರಿ ಕಂಡುಕೊಂಡ ದಕ್ಷಿಣ ಏಷ್ಯಾ ದೇಶಗಳು – ಸ್ಥಳೀಯ ಆವಿಷ್ಕಾರಗಳಿಗೆ ಹೆಚ್ಚಿದ ಮಹತ್ವ

ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳು ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆ ಸವಾಲುಗಳನ್ನು…

17 hours ago

ಮುಂಗಾರು ಅಧಿಕೃತ ದಿನಾಂಕ ತಪ್ಪಿತು..! ಜೂನ್ ಮೊದಲ ವಾರದ ಬಳಿಕವೇ ಭಾರೀ ಮಳೆ ಸಾಧ್ಯತೆ ಎಂದ ಸ್ಕೈಮೆಟ್

ಈ ಬಾರಿ ಮುಂಗಾರು ತನ್ನ ಸಾಮಾನ್ಯ ಪ್ರವೇಶ ದಿನಾಂಕವನ್ನು ತಪ್ಪಿಸಿದೆ ಎಂದು ಸ್ಕೈಮೆಟ್…

1 day ago