ಇತ್ತೀಚಿಗೆ ಎರಡು ವಿಭಿನ್ನ ವೀಡಿಯೋ ಚಿತ್ರಿಕೆಯನ್ನ ಮಾಧ್ಯಮದಲ್ಲಿ ನೋಡಿದೆ. ಒಂದು ಗೋಸಾಗಾಣಿಕೆಯನ್ನ(Cow transporting) ಪೆಟ್ರೋಲ್ ಟ್ಯಾಂಕರ್(Petrol tanker) ನಲ್ಲಿ ಮಾಡುವ ವೀಡಿಯೋ ಮತ್ತೊಂದು ಜೈನ ದಿಗಂಬರ ಸ್ವಾಮೀಜಿಗಳು ತಮ್ಮ ಮಂತ್ರಶಕ್ತಿಯ ಮೂಲಕ ಸ್ಮೃತಿ ತಪ್ಪಿದ ಹಸುವನ್ನು ಎಬ್ಬಿಸುವ ಚಿತ್ರಿಕೆ…
ಜೈನ ಸ್ವಾಮೀಜಿ ಗಳ ಮಂತ್ರ ಶಕ್ತಿಯ ಪವಾಡ ವಿನಾಶದ ಪ್ರಪಾತದ ಆಳಕ್ಕೆ ಕುಸಿದು ಬಿದ್ದ ನಮ್ಮ ದೇಸಿ ತಳಿಯ ಹಸುಗಳನ್ನು ಮೇಲೆತ್ತಿ ನಮ್ಮ ದೇಸಿ ಹಸುಗಳು ಸ್ವಾಭಿಮಾನದಿಂದ ಬಾಳುವಂತಾಗಬೇಕಿದೆ…!! ಹಸುಗಳನ್ನು ಅತ್ಯಂತ ಅಮಾನುಷವಾಗಿ ಯಾವುದೋ ಜಡ ವಸ್ತುವಿನಂತೆ ಟ್ಯಾಂಕರ್ ಲಾರಿಗಳಲ್ಲಿ ತುಂಬಿಕೊಂಡು ಹೋಗುವ ಪ್ರಯೋಗಶೀಲತೆ, ಹೊಸ ಆಲೋಚನೆ ನಮ್ಮ ದೇಸಿ ಹಸುಗಳ ಸಲಹಿ ಸಾಕಲು ಬೇಕಿದೆ.
ನಮ್ಮ ದೇಸಿ ತಳಿಯ ಹಸುಗಳ ಗವ್ಯೋತ್ಪನ್ನಗಳಿಗೆ ಗೌರವಯುತ ಬೆಲೆ ತರುವ ಸಾಮಾಜಿಕ ಮತ್ತು ಸರ್ಕಾರದ ಕಾಳಜಿ ಏರ್ಪಡಲಿ… ಈ ಜೀವಂತ ಪ್ರಾಣಿಗಳನ್ನು ಮೂಟೆಯಂತೆ ಸಾಗಾಣಿಕೆ ಮಾಡುವ ಕ್ರೌರ್ಯ ನಿಲ್ಲಲಿ… ಗೋವುಳಿಯುವ ವಿಚಾರದಲ್ಲಿ ಜೈನ ಮುನಿವರ್ಯರ ಮಂತ್ರ ಶಕ್ತಿಯ ಪವಾಡ ಆಗಿ ದೇಸಿ ಗೋವುಗಳು ಸ್ವಾಭಿಮಾನದಿಂದ ಬೀಗಿ ಬಾಳಲೆಂದು ಬಯಸೋಣ..
ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್ಶಿಪ್–2026ಕ್ಕೆ…
ಮ್ಯಾನ್ಮಾರ್ನಿಂದ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 10 ಟನ್ ವಿದೇಶಿ ಅಡಿಕೆಯನ್ನು ಅಸ್ಸಾಂನ ರಂಗಿಯಾ…
ಆಗಸ್ಟ್ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ಇದ್ದು,…
ಸಿರಿಧಾನ್ಯಗಳ ಬೇಡಿಕೆ ಹೆಚ್ಚಿದರೂ, ರೈತರಿಗೆ ಅದರ ಸಂಪೂರ್ಣ ಆರ್ಥಿಕ ಲಾಭ ಇನ್ನೂ ತಲುಪಿಲ್ಲ…
ಚಂಡಮಾರುತದ ಗಾಳಿಗೆ ಮುರಿಯದೆ ಬಾಗಿಕೊಂಡು ಉಳಿಯುವ ಮೊಹಿತ್ನಗರ ಅಡಿಕೆ ತಳಿಗೆ ಒಡಿಶಾ ಸೇರಿದಂತೆ…
ಭಾರೀ ಮಳೆಯ ಹಿನ್ನೆಲೆಯಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕುಗಳ ಶಾಲಾ-ಕಾಲೇಜುಗಳಿಗೆ…