ಇತ್ತೀಚಿಗೆ ಎರಡು ವಿಭಿನ್ನ ವೀಡಿಯೋ ಚಿತ್ರಿಕೆಯನ್ನ ಮಾಧ್ಯಮದಲ್ಲಿ ನೋಡಿದೆ. ಒಂದು ಗೋಸಾಗಾಣಿಕೆಯನ್ನ(Cow transporting) ಪೆಟ್ರೋಲ್ ಟ್ಯಾಂಕರ್(Petrol tanker) ನಲ್ಲಿ ಮಾಡುವ ವೀಡಿಯೋ ಮತ್ತೊಂದು ಜೈನ ದಿಗಂಬರ ಸ್ವಾಮೀಜಿಗಳು ತಮ್ಮ ಮಂತ್ರಶಕ್ತಿಯ ಮೂಲಕ ಸ್ಮೃತಿ ತಪ್ಪಿದ ಹಸುವನ್ನು ಎಬ್ಬಿಸುವ ಚಿತ್ರಿಕೆ…
ಜೈನ ಸ್ವಾಮೀಜಿ ಗಳ ಮಂತ್ರ ಶಕ್ತಿಯ ಪವಾಡ ವಿನಾಶದ ಪ್ರಪಾತದ ಆಳಕ್ಕೆ ಕುಸಿದು ಬಿದ್ದ ನಮ್ಮ ದೇಸಿ ತಳಿಯ ಹಸುಗಳನ್ನು ಮೇಲೆತ್ತಿ ನಮ್ಮ ದೇಸಿ ಹಸುಗಳು ಸ್ವಾಭಿಮಾನದಿಂದ ಬಾಳುವಂತಾಗಬೇಕಿದೆ…!! ಹಸುಗಳನ್ನು ಅತ್ಯಂತ ಅಮಾನುಷವಾಗಿ ಯಾವುದೋ ಜಡ ವಸ್ತುವಿನಂತೆ ಟ್ಯಾಂಕರ್ ಲಾರಿಗಳಲ್ಲಿ ತುಂಬಿಕೊಂಡು ಹೋಗುವ ಪ್ರಯೋಗಶೀಲತೆ, ಹೊಸ ಆಲೋಚನೆ ನಮ್ಮ ದೇಸಿ ಹಸುಗಳ ಸಲಹಿ ಸಾಕಲು ಬೇಕಿದೆ.
ನಮ್ಮ ದೇಸಿ ತಳಿಯ ಹಸುಗಳ ಗವ್ಯೋತ್ಪನ್ನಗಳಿಗೆ ಗೌರವಯುತ ಬೆಲೆ ತರುವ ಸಾಮಾಜಿಕ ಮತ್ತು ಸರ್ಕಾರದ ಕಾಳಜಿ ಏರ್ಪಡಲಿ… ಈ ಜೀವಂತ ಪ್ರಾಣಿಗಳನ್ನು ಮೂಟೆಯಂತೆ ಸಾಗಾಣಿಕೆ ಮಾಡುವ ಕ್ರೌರ್ಯ ನಿಲ್ಲಲಿ… ಗೋವುಳಿಯುವ ವಿಚಾರದಲ್ಲಿ ಜೈನ ಮುನಿವರ್ಯರ ಮಂತ್ರ ಶಕ್ತಿಯ ಪವಾಡ ಆಗಿ ದೇಸಿ ಗೋವುಗಳು ಸ್ವಾಭಿಮಾನದಿಂದ ಬೀಗಿ ಬಾಳಲೆಂದು ಬಯಸೋಣ..
29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…
ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…
ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…
ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…
2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…