MIRROR FOCUS

ಕೀಟ ಜಗತ್ತಿನ ಅಗಾಧ ಅನಾವರಣ | ವಿಸ್ಮಯಕಾರಿ ಕೀಟ ಜಗತ್ತಿನಲ್ಲೊಂದು ಸುತ್ತು | ಕೀಟಗಳ ಪ್ರಯೋಜನ ಕುರಿತ ಕಾರ್ಯಗಾರ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮನುಷ್ಯ(Human being) ತಾನೇ ಶ್ರೇಷ್ಠ. ಎಲ್ಲವೂ ತನ್ನಿಂದಲೇ, ತನಗೆ ಬೇಕಂತೆ ಎಲ್ಲವೂ ನಡೆಯುತ್ತದೆ ಎಂದು ಭಾವಿಸುತ್ತಾನೆ. ಆದರೆ ಈ ಮನುಜ ಒಂದು ಕ್ರಿಮಿ ಕೀಟಗಳಿಗೂ ಸಮಾನವಲ್ಲ. ಪ್ರಕೃತಿ(Nature)ಯಲ್ಲಿ ಮಾನವ ಬಿಟ್ಟು ಉಳಿದೆಲ್ಲಾ ಪ್ರಾಣಿ, ಪಕ್ಷಿ, ಕೀಟಗಳು ಇದ್ರೆನೇ ಈ ಮಾನವ ಹಾರಾಟ ಚೀರಾಟ ಅನ್ನೋದನ್ನು ಅರ್ಥನೇ ಮಾಡಿಕೊಂಡಿಲ್ಲ. ಅವುಗಳು ಇಲ್ಲದಿದ್ರೆ ನಮ್ಮ ಬದುಕು ನಶ್ವರ. ವಾಸ್ತವದಲ್ಲಿ ನಮ್ಮ ಬದುಕು ಜೇನ್ನೊಣ, ಇರುವೆ, ಗೆದ್ದಲು, ಜೇಡ, ಚಿಟ್ಟೆ, ದುಂಬಿಗಳ ರೆಕ್ಕೆ ಬಡಿತದ ಋಣದಲ್ಲಿದೆ.

Advertisement
Advertisement

118 ಕೆ.ಜಿ. ಹಸಿ ಕಾಫಿ ಹಣ್ಣುಗಳಿಂದ 50 ಕೆ.ಜಿ. ಚೆರ್ರಿ ಸಿಗುತ್ತೆ. ಅದನ್ನ ಹಲ್ಲಿಂಗ್ ಮಾಡಿದ್ರೆ 27 ಕೆ.ಜಿ ಕಾಫಿ ಬೀಜ ಸಿಗುತ್ತೆ.
ಅದನ್ನ ಹುರಿದು ಪುಡಿ ಮಾಡಿದ್ರೆ 20 ಕೆ.ಜಿ. ಕಾಫಿಪುಡಿ ಸಿಗುತ್ತೆ. 1 ಕೆ.ಜಿ. ಹಸಿ ಹಣ್ಣು ಅಂದ್ರೆ ಸುಮಾರು 800 ಹಣ್ಣುಗಳು ಬೇಕು.
118 ಕೆ.ಜಿ. ಅಂದ್ರೆ 94400 ಹಣ್ಣುಗಳು ಅಷ್ಟು ಹಣ್ಣಾಗಲು ಕನಿಷ್ಟ 1 ಲಕ್ಷ ಹೂ ಅರಳಬೇಕು. ಅಂದರೆ ಅಷ್ಟು ಹೂಗಳನ್ನು ಜೇನುಗಳು ಮತ್ತು ಇನ್ನಿತರ ಕೀಟಗಳು ಪರಾಗಸ್ಪರ್ಶ ಮಾಡಬೇಕು. ಒಂದು ಕಪ್ ಕಾಫಿ ಮಾಡಲು 5 ಗ್ರಾಂ ಕಾಫಿ ಪುಡಿ ಬೇಕು.
20 ಕೆ. ಜಿ. ಕಾಫಿ ಪುಡಿಗೆ 1 ಲಕ್ಷ ಹೂ ಅರಳಬೇಕು. 1 ಕೆ.ಜಿ.ಪುಡಿಗೆ 5000 ಹೂ ಬೇಕು. ಅಂದರೆ ಒಂದು ಕಪ್‌ ಕಾಫಿಯಾಗಲು 250 ಹೂಗಳನ್ನು ಕೀಟಗಳು ಪರಾಗಸ್ಪರ್ಶ ಮಾಡಬೇಕು.

ನಮ್ಮ ಬದುಕು ನಾವು ಪಡೆದುಕೊಂಡಿರುವ ಶಿಕ್ಷಣದ ಮೇಲೆ, ಸಂಬಳದ ಮೇಲೆ, ಕೂಡಿಟ್ಟ ಆಸ್ತಿ ಮೇಲೆ ಅವಲಂಬಿತವಾಗಿದೆ ಎಂದೇ ಯೋಚಿಸುತ್ತೇವೆ. ವಾಸ್ತವದಲ್ಲಿ ಬದುಕು ಜೇನ್ನೊಣ, ಇರುವೆ, ಗೆದ್ದಲು, ಜೇಡ, ಚಿಟ್ಟೆ, ದುಂಬಿಗಳ ರೆಕ್ಕೆ ಬಡಿತದ ಋಣದಲ್ಲಿದೆ. ಇದು ಒಂದು ಚಿಕ್ಕ ಉದಾಹರಣೆ ಅಷ್ಟೇ. ಪ್ರತೀ ಸಸ್ಯದ ಬದುಕಿನಲಿ ಒಂದಲ್ಲ ಒಂದು ಕೀಟವಿದೆ. ಪ್ರತೀ ಜೀವಿಯ ಬದುಕಿಗೆ ಆಧಾರವಾಗಿ ಒಂದಲ್ಲ ನೂರಾರು ಸಸ್ಯಗಳಿವೆ. ಈ ಜಗತ್ತನ್ನು ನಡೆಸುತ್ತಿರುವುದು ಅಪೂರ್ವ ಸಾಮರ್ಥ್ಯದ, ಅನನ್ಯ ಲಕ್ಷಣದ ಅಜೇಯ ಕೀಟಗಳು.

ಆದ್ದರಿಂದ Don’t use Pesticides / Insecticide Germicide / Fungicide & weedicides Seriously. ಸಿಕ್ಕಷ್ಟು ಸಿಕ್ಕಲಿ ಏನೀಗ? ಎಲ್ಲವನ್ನೂ ನಾವೇ ಅನುಭವಿಸಬೇಕಿಲ್ಲ. ನಾವು ಇವತ್ತೇ ಸಾಯದಿಲ್ವಲ್ಲ. ಇನ್ನೂ ಹಲವು ದಿನ ಬದುಕಿರುತ್ತೇವಲ್ಲ. ಅವತ್ತಿಗೂ ಬೇಕಲ್ಲ. ನಮಗೇ ಅಲ್ಲದಿದ್ದರೂ ನಮ್ಮಂಥ ಕೋಟ್ಯಾಂತರ ಜೀವಿಗಳು ಈ ಭೂಮಿಯಲಿ ಬದುಕಬೇಕಲ್ಲ. ಇನ್ನೂ ನೂರಾರು ವರ್ಷ.

ಕೀಟ ಜಗತ್ತಿನ ಅಗಾಧ ಅನಾವರಣ(Insect worl) ಇದೇ ನವಂಬರ್ 1ರಿಂದ 3ರ ವರೆಗೆ ಹಾಸನದ ಗೋಮತಿ ಕಲ್ಯಾಣ ಮಂಟಪದಲಿ ನಡೆಯುತ್ತಿದೆ. ಬನ್ನಿ, ವಿಸ್ಮಯಕಾರಿ ಕೀಟ ಜಗತ್ತಿನಲ್ಲೊಂದು ಸುತ್ತು ಹಾಕಿ.

Advertisement

– ಧನಂಜಯ ಜೀವಾಳ ಮಾಹಿತಿ, 98451 81409

The grand unveiling of the insect world is going on from November 1st to 3rd at Hassan's Gomati Kalyana Mantapada. Come, take a tour of the amazing insect world.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19-05-2025 | ಮೇ 24 ರಿಂದ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗುವ ಲಕ್ಷಣ

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ಉತ್ತರ ಕೇರಳ ಕರಾವಳಿಯಲ್ಲಿ ವಾಯುಭಾರ…

10 minutes ago

ವಿಕಸಿತ ಕೃಷಿ ಸಂಕಲ್ಪ ಅಭಿಯಾನ | ರೈತರ ಬಳಿಗೆ ಕೃಷಿ ವಿಜ್ಞಾನಿಗಳು‌ | ಹೊಸ ಯೋಜನೆ ರೈತರ ಬಳಿಗೆ |

ರಾಷ್ಟ್ರೀಯ ಜನ ಜಾಗೃತಿ ಅಭಿಯಾನದಲ್ಲಿ 1,500 ರಿಂದ 2000 ತಂಡಗಳ ಮೂಲಕ ದೇಶದ…

2 hours ago

ಈ ರಾಶಿಯವರಿಗೆ ಬುಧ ಮತ್ತು ಸೂರ್ಯನಿಂದ ರಾಜಯೋಗ ಪ್ರಾರಂಭವಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಹವಾಮಾನ ವರದಿ | 18-05-2025 | ಮೇ.19 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸೂಚನೆ | ನಿರೀಕ್ಷೆಗೂ ಮುನ್ನವೇ ಮುಂಗಾರು ನಿರೀಕ್ಷೆ |

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಆಗಮನ ನಿರೀಕ್ಷೆಗಿಂತಲೂ ಮೊದಲೇ ಆಗಲಿದೆ.  ಜೊತೆಗೆ…

21 hours ago

ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ | ಈ ವರ್ಷ ಅದೃಷ್ಟವೋ ಅದೃಷ್ಟ!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago

ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ

ಅಡಿಕೆ ಹಾಳೆ ತಟ್ಟೆಯ ನಿಷೇಧವು ಅಡಿಕೆ ಕೃಷಿಗೆ ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಸತತ…

1 day ago