ಪರಿಸರವಾದಿ ಶಿವಾನಂದ ಕಳವೆಯವರ ಕಾಳಜಿ | ಅವರ ಫೇಸ್‌ಬುಕ್‌ನ ಒಂದು ಪೋಸ್ಟ್‌ನಿಂದಾಗಿ ತಪ್ಪಿತು 3500 ಮರಗಳ ಮಾರಣ ಹೋಮ..!

June 28, 2024
3:03 PM

ಶಿವಾನಂದ ಕಳವೆ(Shivananda Kalave), ಪತ್ರಕರ್ತ(Journalist), ಬರಹಗಾರ(Writer), ಕೃಷಿಕ(Agriculturist) ಅನ್ನುವುದಕ್ಕಿಂತಲೂ ಪರಿಸರವಾದಿ(Environmentalist) ಹೆಚ್ಚು ಸೂಕ್ತ. ಅನೇಕ ವರ್ಷಗಳಿಂದ ಪರಿಸರದ ಉಳಿವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸದಾ ಪ್ರಕೃತಿಯ ಮಡಿಲಲ್ಲೇ ತಮ್ಮ ಕಾಲವನ್ನು ಕಳೆಯುವವರು ಕಳವೆಯವರು. ಉತ್ತರ ಕನ್ನಡ ಜಿಲ್ಲೆಯ(Uttara kannada) ಯಲ್ಲಾಪುರ, ಶಿರಸಿ ಸೇರಿದಂತೆ ಅಲ್ಲಿನ ಅನೇಕ ತಾಲೂಕುಗಳಲ್ಲಿ ಪರಿಸರ ಉಳಿಸುವ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ(Social media) ಮೂಲಕ ಪರಸರದ ಬಗ್ಗೆಗಿನ ಅನೇಕ ಲೇಖನಗಳನ್ನು ಬರೆದು, ವಿಡೀಯೋಗಳನ್ನು ಮಾಡಿ ಪರಿಸರ ಉಳಿಸಲು ತಮ್ಮಿಂದ ಕೈಲಾಗುವ ಪ್ರಯತ್ನ ಮಾಡುತ್ತಾರೆ. ಈಗ ಒಂದೇ ಒಂದು ಅವರ ಫೇಸ್‌ಬುಕ್ ಪೋಸ್ಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಿ ಹೋಗಬಹುದಾಗಿದ್ದ 3500 ಮರಗಳ ಮಾರಣ ಹೋಮ‌ ತಪ್ಪಿಸಿದೆ. ನಿಜವಾಗಿಯೂ ಒಂದು ಕುತೂಹಲ. 

ಶಿವಾನಂದ ಕಳವೆಯವರಿಗೆ ಅವರ ಪರಿಚಯದವರೊಬ್ಬರು ಕೈಗಾ-ಬಾರೆ ರಸ್ತೆಯಲ್ಲಿ ಹಾಕಿದ್ದ ಒಂದು ಬೋರ್ಡ್‌ನ ಫೋಟೋ ಕಳಿಸಿದ್ದರು. ಬೋರ್ಡ್‌ ಪ್ರಕಾರ ಆ ವ್ಯಾಪ್ತಿಯಲ್ಲಿ 10.500 ಕಿಲೋಮೀಟರ್‌ನಷ್ಟು ರಸ್ತೆ ಅಗಲೀಕರಣಕ್ಕಾಗಿ ಮರ ಕಡಿಯುವ ಯೋಜನೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿತ್ತು. ಕಳಚೆ, ಬಾರೆ, ಮಲವಳ್ಳಿ ಸೇರಿದಂತೆ ಹಲವು ಹಳ್ಳಿಗಳು ಭೂಕುಸಿತಕ್ಕೆ ಒಳಪಡುವ ಪ್ರದೇಶಗಳು, ತುಂಬಾ ಸೂಕ್ಷ್ಮ ಪ್ರದೇಶವಾದ ಇಲ್ಲಿ ಮರ ಕಡಿಯುವುದು ಅವೈಜ್ಞಾನಿಕ. ಅಲ್ಲದೇ ಮಳೆಗಾಲದಲ್ಲಿ ಮರ ಕಡೆಯಲು ಸ್ವತಃ ಸರ್ಕಾರದ ನಿಯಮಗಳೇ ಅವಕಾಶ ಕೊಡುತ್ತಿರಲಿಲ್ಲ.

 

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್
July 20, 2026
10:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror