ಶಿವಾನಂದ ಕಳವೆ(Shivananda Kalave), ಪತ್ರಕರ್ತ(Journalist), ಬರಹಗಾರ(Writer), ಕೃಷಿಕ(Agriculturist) ಅನ್ನುವುದಕ್ಕಿಂತಲೂ ಪರಿಸರವಾದಿ(Environmentalist) ಹೆಚ್ಚು ಸೂಕ್ತ. ಅನೇಕ ವರ್ಷಗಳಿಂದ ಪರಿಸರದ ಉಳಿವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸದಾ ಪ್ರಕೃತಿಯ ಮಡಿಲಲ್ಲೇ ತಮ್ಮ ಕಾಲವನ್ನು ಕಳೆಯುವವರು ಕಳವೆಯವರು. ಉತ್ತರ ಕನ್ನಡ ಜಿಲ್ಲೆಯ(Uttara kannada) ಯಲ್ಲಾಪುರ, ಶಿರಸಿ ಸೇರಿದಂತೆ ಅಲ್ಲಿನ ಅನೇಕ ತಾಲೂಕುಗಳಲ್ಲಿ ಪರಿಸರ ಉಳಿಸುವ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ(Social media) ಮೂಲಕ ಪರಸರದ ಬಗ್ಗೆಗಿನ ಅನೇಕ ಲೇಖನಗಳನ್ನು ಬರೆದು, ವಿಡೀಯೋಗಳನ್ನು ಮಾಡಿ ಪರಿಸರ ಉಳಿಸಲು ತಮ್ಮಿಂದ ಕೈಲಾಗುವ ಪ್ರಯತ್ನ ಮಾಡುತ್ತಾರೆ. ಈಗ ಒಂದೇ ಒಂದು ಅವರ ಫೇಸ್ಬುಕ್ ಪೋಸ್ಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಿ ಹೋಗಬಹುದಾಗಿದ್ದ 3500 ಮರಗಳ ಮಾರಣ ಹೋಮ ತಪ್ಪಿಸಿದೆ. ನಿಜವಾಗಿಯೂ ಒಂದು ಕುತೂಹಲ.
ಶಿವಾನಂದ ಕಳವೆಯವರಿಗೆ ಅವರ ಪರಿಚಯದವರೊಬ್ಬರು ಕೈಗಾ-ಬಾರೆ ರಸ್ತೆಯಲ್ಲಿ ಹಾಕಿದ್ದ ಒಂದು ಬೋರ್ಡ್ನ ಫೋಟೋ ಕಳಿಸಿದ್ದರು. ಬೋರ್ಡ್ ಪ್ರಕಾರ ಆ ವ್ಯಾಪ್ತಿಯಲ್ಲಿ 10.500 ಕಿಲೋಮೀಟರ್ನಷ್ಟು ರಸ್ತೆ ಅಗಲೀಕರಣಕ್ಕಾಗಿ ಮರ ಕಡಿಯುವ ಯೋಜನೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿತ್ತು. ಕಳಚೆ, ಬಾರೆ, ಮಲವಳ್ಳಿ ಸೇರಿದಂತೆ ಹಲವು ಹಳ್ಳಿಗಳು ಭೂಕುಸಿತಕ್ಕೆ ಒಳಪಡುವ ಪ್ರದೇಶಗಳು, ತುಂಬಾ ಸೂಕ್ಷ್ಮ ಪ್ರದೇಶವಾದ ಇಲ್ಲಿ ಮರ ಕಡಿಯುವುದು ಅವೈಜ್ಞಾನಿಕ. ಅಲ್ಲದೇ ಮಳೆಗಾಲದಲ್ಲಿ ಮರ ಕಡೆಯಲು ಸ್ವತಃ ಸರ್ಕಾರದ ನಿಯಮಗಳೇ ಅವಕಾಶ ಕೊಡುತ್ತಿರಲಿಲ್ಲ.
30.06.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಒನಕೆ(Onake) ಎಂದಾಕ್ಷಣಾ ನೆನಪಾಗುವುದು ಚಿತ್ರದುರ್ಗದ ಉಕ್ಕಿನ ಕೋಟೆಯ(Chitradurga Fort) 'ಒನಕೆ ಓಬವ್ವ"(Onake Obavva).…
ಪ್ರಕೃತಿಗೆ(Nature) ಬಹಳ ತ್ರಾಸದಾಯಕವಾದದ್ದು ಈಗ ಪ್ಲಾಸ್ಟಿಕ್ ನ(Plastic) ಹಾವಳಿ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್…
ಒಮ್ಮೊಮ್ಮೆ ನಾವು ಪ್ರಾಣಿ ಪಕ್ಷಿಗಳಿಗೆ(Animal-Birds) ತೋರಿಸುವ ಅತಿಯಾದ ಕಾಳಜಿ, ಪ್ರೀತಿ ಕೆಲವು ತೊಂದರೆಗಳಿಗೆ…
ಇಂದು ಎಲ್ಲರ ಚಿತ್ತ ಚುಟುಕ ಮಾದರಿಯ ಕ್ರಿಕೆಟ್ ವಿಶ್ವಕಪ್ ಫೈನಲ್ (T20 World…
ಇತ್ತೀಚೆಗೆ ರಾಜ್ಯದಲ್ಲಿ ನಂದಿನಿ ಹಾಲಿನ(Nandini Milk) ಬೆಲೆ ಜಾಸ್ತಿಯಾಗಿದ್ದು(Price hike) ಗ್ರಾಹಕರನ್ನು(Customer) ಕಂಗೆಡಿಸಿದೆ.…