ಶಿವಾನಂದ ಕಳವೆ(Shivananda Kalave), ಪತ್ರಕರ್ತ(Journalist), ಬರಹಗಾರ(Writer), ಕೃಷಿಕ(Agriculturist) ಅನ್ನುವುದಕ್ಕಿಂತಲೂ ಪರಿಸರವಾದಿ(Environmentalist) ಹೆಚ್ಚು ಸೂಕ್ತ. ಅನೇಕ ವರ್ಷಗಳಿಂದ ಪರಿಸರದ ಉಳಿವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸದಾ ಪ್ರಕೃತಿಯ ಮಡಿಲಲ್ಲೇ ತಮ್ಮ ಕಾಲವನ್ನು ಕಳೆಯುವವರು ಕಳವೆಯವರು. ಉತ್ತರ ಕನ್ನಡ ಜಿಲ್ಲೆಯ(Uttara kannada) ಯಲ್ಲಾಪುರ, ಶಿರಸಿ ಸೇರಿದಂತೆ ಅಲ್ಲಿನ ಅನೇಕ ತಾಲೂಕುಗಳಲ್ಲಿ ಪರಿಸರ ಉಳಿಸುವ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ(Social media) ಮೂಲಕ ಪರಸರದ ಬಗ್ಗೆಗಿನ ಅನೇಕ ಲೇಖನಗಳನ್ನು ಬರೆದು, ವಿಡೀಯೋಗಳನ್ನು ಮಾಡಿ ಪರಿಸರ ಉಳಿಸಲು ತಮ್ಮಿಂದ ಕೈಲಾಗುವ ಪ್ರಯತ್ನ ಮಾಡುತ್ತಾರೆ. ಈಗ ಒಂದೇ ಒಂದು ಅವರ ಫೇಸ್ಬುಕ್ ಪೋಸ್ಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಿ ಹೋಗಬಹುದಾಗಿದ್ದ 3500 ಮರಗಳ ಮಾರಣ ಹೋಮ ತಪ್ಪಿಸಿದೆ. ನಿಜವಾಗಿಯೂ ಒಂದು ಕುತೂಹಲ.
ಶಿವಾನಂದ ಕಳವೆಯವರಿಗೆ ಅವರ ಪರಿಚಯದವರೊಬ್ಬರು ಕೈಗಾ-ಬಾರೆ ರಸ್ತೆಯಲ್ಲಿ ಹಾಕಿದ್ದ ಒಂದು ಬೋರ್ಡ್ನ ಫೋಟೋ ಕಳಿಸಿದ್ದರು. ಬೋರ್ಡ್ ಪ್ರಕಾರ ಆ ವ್ಯಾಪ್ತಿಯಲ್ಲಿ 10.500 ಕಿಲೋಮೀಟರ್ನಷ್ಟು ರಸ್ತೆ ಅಗಲೀಕರಣಕ್ಕಾಗಿ ಮರ ಕಡಿಯುವ ಯೋಜನೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿತ್ತು. ಕಳಚೆ, ಬಾರೆ, ಮಲವಳ್ಳಿ ಸೇರಿದಂತೆ ಹಲವು ಹಳ್ಳಿಗಳು ಭೂಕುಸಿತಕ್ಕೆ ಒಳಪಡುವ ಪ್ರದೇಶಗಳು, ತುಂಬಾ ಸೂಕ್ಷ್ಮ ಪ್ರದೇಶವಾದ ಇಲ್ಲಿ ಮರ ಕಡಿಯುವುದು ಅವೈಜ್ಞಾನಿಕ. ಅಲ್ಲದೇ ಮಳೆಗಾಲದಲ್ಲಿ ಮರ ಕಡೆಯಲು ಸ್ವತಃ ಸರ್ಕಾರದ ನಿಯಮಗಳೇ ಅವಕಾಶ ಕೊಡುತ್ತಿರಲಿಲ್ಲ.
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…
ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 1ರಂದು ಪುತ್ತೂರಿನಲ್ಲಿ ನೇರ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…