Advertisement
MIRROR FOCUS

ಹವಾಮಾನ ವೈಪರೀತ್ಯ | ಪ್ರಕೃತಿಯ ಮೇಲಿರುವ ಎಲ್ಲಾ ಜೀವ ಜಂತುಗಳ ಮೇಲೆ ಹೊಡೆತ | ಬಿಸಿಲ ಬೇಗೆಗೆ ಪ್ರಾಣಿ-ಪಕ್ಷಿ-ಜಲಚರಗಳೂ ಸಂಕಷ್ಟ |

Share

ಈ ಬಾರಿಯ ಹವಾಮಾನ ವೈಪರೀತ್ಯ (Climate change) ಹಾಗೂ ಬರಗಾಲ(Drought) ಕೇವಲ ಮನುಷ್ಯರಿಗೆ ಮಾತ್ರವಲ್ಲ. ಪ್ರಕೃತಿಯಲ್ಲಿ(Nature) ಬದುಕುವ ಪ್ರತಿ ಪ್ರಾಣಿ- ಪಕ್ಷಿಗಳು(Animal-Birds), ಜಲಚರಗಳು(Aquatic), ಕ್ರೀಮಿ ಕೀಟಗಳಿಗೂ(Insects) ಕಾಡುತ್ತಿದೆ. ದಿನದಿಂದ ದಿನಕ್ಕೆ ಬಿಸಿಲ ಧಗೆ(Heat) ಏರುತ್ತಿದೆ. ತಾಪಮಾನ(Temperature) 40 ಡಿಗ್ರಿ ದಾಟುತ್ತಿದೆ. ಕರಾವಳಿಯ ಅನೇಕ ಭಾಗಗಳಲ್ಲಿ ಕೆಂಪಿರುವೆ ಬಿಸಿಲ ತಾಪ ತಾಳಲಾರದೆ ಸಾಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಈಗ ಬಿಸಿಲಿನ ತಾಪಮಾನ ಜಲಚರಕ್ಕೂ ಕಂಟಕವಾಗಿದೆ. ಅರಮನೆ ನಗರಿಯ(Palace city) ಕುಕ್ಕರಹಳ್ಳಿ ಕೆರೆಯಲ್ಲಿರುವ ಮೀನು(Fish) ಸಾಲು ಸಾಲಾಗಿ ಸಾವನ್ನಪ್ಪುತ್ತಿವೆ. ಸತ್ತು ನೀರಿನ ಮೇಲೆ ತೇಲಾಡುತ್ತಿರುವುದನ್ನು ಕಂಡು ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿಯೂ(Mysore) ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ಜಲಚರಗಳು ತತ್ತರಿಸುತ್ತಿವೆ. ಪ್ರತಿದಿನ ಹತ್ತಾರು ಮೀನುಗಳು ಸಾವನ್ನಪ್ಪುತ್ತಿದೆ. ಅವುಗಳ ಮೃತದೇಹಗಳು ಕೆರೆ ದಡಕ್ಕೆ ತೇಲಿಕೊಂಡು ಬರುತ್ತಿವೆ. ಕಳೆದ ಎರಡು ದಿನಗಳಿಂದ ಕುಕ್ಕರಹಳ್ಳಿಕೆರೆಯಲ್ಲಿ ಮೃತಪಡುತ್ತಿರುವ ಮೀನುಗಳ ಸಂಖ್ಯೆ ಹೆಚ್ಚಾಗುತ್ತಿದೆ.…….ಮುಂದೆ ಓದಿ…..

ಭಾನುವಾರ ಮುಂಜಾನೆ ಕುಕ್ಕರಹಳ್ಳಿಕೆರೆಗೆ ಬಂದ ವಾಯುವಿಹಾರಿಗಳಿಗೆ ಕೆರೆಯಲ್ಲಿ ಸತ್ತು ತೇಲುತ್ತಿರುವ ಮೀನುಗಳು ಕಂಡಿವೆ. ಅಲ್ಲದೆ, ಸತ್ತ ಮೀನುಗಳು ಕೊಳೆಯಲಾರಂಭಿಸಿದ್ದು, ಕೆರೆ ಪರಿಸರ ಹದಗೆಡುತ್ತಿದೆ ಎಂದು ʼಕನ್ನಡಪ್ರಭʼ ವರದಿ ಮಾಡಿದೆ. ಇನ್ನು ಮೃತ ಮೀನುಗಳನ್ನು ತೋಟಗಾರಿಕಾ ವಿಭಾಗದ ಸಿಬ್ಬಂದಿಗಳು ತೆರವುಗೊಳಸಿದ್ದಾರೆ. ಆದರೆ, ಈ ಬಾರಿಯ ರಣ ಬಿಸಿಲು ಜಲಚರಗಳ ಜೀವಕ್ಕೂ ಕಂಟಕವಾಗುತ್ತಿರುವುದು ಆತಂಕ ಮೂಡಿಸಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರತದ ಕೃಷಿ ರಫ್ತಿನಲ್ಲಿ ದೊಡ್ಡ ಬದಲಾವಣೆ – ಎಮ್ಮೆ ಮಾಂಸ ರಫ್ತು 5 ಬಿಲಿಯನ್ ಡಾಲರ್ ಗುರಿಯತ್ತ..!

ಭಾರತದ ಎಮ್ಮೆ ಮಾಂಸ ರಫ್ತು 2025-26ರಲ್ಲಿ 5.1 ಬಿಲಿಯನ್ ಡಾಲರ್ ತಲುಪಿದ್ದು, 2026-27ರಲ್ಲಿ…

3 hours ago

ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ

ಓಣಂ ಹಬ್ಬದ ಸಂದರ್ಭದ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಕೃಷಿ ಇಲಾಖೆ ನಡೆಸಿದ…

10 hours ago

ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನವೂ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು,…

12 hours ago

ಅಡಿಕೆ ತೋಟಗಳು ಹೆಚ್ಚುತ್ತಿವೆ… ಹಾಗಿದ್ದರೆ ಕರ್ನಾಟಕದಲ್ಲಿ ಇಳುವರಿ ಏಕೆ ಕುಸಿಯುತ್ತಿದೆ?

ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಶೇ.32.42ರಷ್ಟು ಹೆಚ್ಚಾದರೂ, ಉತ್ಪಾದನೆ…

13 hours ago

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ

ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…

1 day ago