Advertisement
ಪ್ರಮುಖ

ತಮಿಳುನಾಡು ಅಡಿಕೆ | ಬೆಲೆ ಕುಸಿತದಿಂದ ತಮಿಳುನಾಡು ಅಡಿಕೆ ಬೆಳೆಗಾರರಿಗೆ ಸಮಸ್ಯೆ | ನೇರ ಖರೀದಿ ಕೇಂದ್ರ ತೆರೆಯಲು ಬೆಳೆಗಾರರ ಒತ್ತಾಯ |

Share

ಅಡಿಕೆ ಬೆಳೆ ವಿಸ್ತರಣೆಯ ನಂತರ ಇದೀಗ ತಮಿಳುನಾಡಿನಲ್ಲಿ ಅಡಿಕೆ ಬೆಲೆಯ ಸಮಸ್ಯೆ ಶುರುವಾಗಿದೆ. ಸದ್ಯ ಹಸಿ ಅಡಿಕೆ ಕೆಜಿಗೆ 42 – 47 ರೂ.ಗಳಿಗೆ ಮತ್ತು ಒಣ ಅಡಿಕೆ(ಸೀಳಿದ ಅಡಿಕೆ) ಕೆಜಿಗೆ 52 – 57 ರೂ.ಗಳಿಗೆ ಮಾರಾಟವಾಗುತ್ತಿದೆ. ಹೀಗಾಗಿ ಅಡಿಕೆ ಬೆಳೆಗಾರರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಕೊಯಮತ್ತೂರು ಜಿಲ್ಲೆಯಲ್ಲಿ ಅಡಿಕೆ ನೇರ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಬೆಳೆಗಾರರು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.……… ಮುಂದೆ ಓದಿ…….

Advertisement
Advertisement
Advertisement
Advertisement

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯನ್ನು ಈಗ ಬೆಳೆಯಲಾಗುತ್ತಿದೆ. ಕೆಲವು ಸಮಯಗಳಿಂದ ಬೆಳೆ ವಿಸ್ತರಣೆ ವ್ಯಾಪಕವಾಗಿತ್ತು.  ತಮಿಳುನಾಡಿನ ಮೆಟ್ಟುಪಾಳಯಂ, ಅಣ್ಣೂರು, ಪೆರೂರ್ ಮತ್ತು ಪೊಲ್ಲಾಚಿ ಪ್ರದೇಶಗಳಲ್ಲಿ 15,000 ಎಕರೆಗಳಿಗೂ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಅಲ್ಲಿ ಒಬ್ಬ ರೈತ ಅಡಿಕೆ ತೋಟಕ್ಕೆ ಎಕರೆಗೆ 4.5 ಲಕ್ಷ ರೂ.ಗಳವರೆಗೆ ಖರ್ಚು ಮಾಡುತ್ತಾನೆ. ಹೀಗೆ ನಾಟಿ ಮಾಡಿದ ತೋಟಗಳಲ್ಲಿ ಈಗ ಫಸಲು ಆರಂಭವಾಗಿದೆ. ಮೋಹಿತ್ ನಗರ್ ಮತ್ತು ಸುಮಂಗಳ ತಳಿಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಸದ್ಯ ಪ್ರತೀ ಮರಕ್ಕೆ 5 ಕೆಜಿ ಅಡಿಕೆ ಬೆಳೆಯಲಾಗುತ್ತಿದೆ ಎಂದು ರೈತರು ಹೇಳುತ್ತಾರೆ. ಪ್ರಸ್ತುತ, ಹಸಿ ಅಡಿಕೆ ಕೆಜಿಗೆ 42 – 47 ರೂ.ಗಳಿಗೆ ಮತ್ತು ಸೀಳಿದ ಅಡಿಕೆ ಕೆಜಿಗೆ 52 – 57 ರೂ.ಗಳಿಗೆ ಮಾರಾಟವಾಗುತ್ತಿದೆ. ಕರ್ನಾಟಕ ಮತ್ತು ಕೇರಳ ಪ್ರಮುಖ ಮಾರುಕಟ್ಟೆಗಳಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ, ಅಡಿಕೆ ಕೆಜಿಗೆ 58 ರೂ.ಗೆ ಮಾರಾಟವಾಗಿತ್ತುಎಂದು ಹೇಳುತ್ತಾರೆ ಅಡಿಕೆ ಬೆಳೆಗಾರರು.

Advertisement

ಕಳೆದ 5 ವರ್ಷಗಳಲ್ಲಿ ಅಡಿಕೆ ಕೃಷಿ ಶೇ. 50 ರಷ್ಟು ಹೆಚ್ಚಾಗಿದೆ.ಉತ್ತಮ ಧಾರಣೆಯೂ ಇತ್ತು. ಈ ಬಾರಿ ಧಾರಣೆ ಕುಸಿತವಾಗಿದೆ. ಮದ್ಯವರ್ತಿಗಳ ಹಸ್ತಕ್ಷೇಪವೇ ಇದಕ್ಕೆ ಕಾರಣ ಎನ್ನುತ್ತಾರೆ ರೈತರು.

 

Advertisement

In Tamil Nadu, arecanut growers are facing significant challenges due to a drastic decline in prices. This downturn has severely impacted their livelihoods, as arecanut cultivation is a crucial source of income for many farmers in the region. These issues have compounded financial pressures on growers, many of whom are already grappling with rising production costs and unfavorable weather conditions. As a result, farmers are calling for government intervention and support to stabilize prices and provide relief to the struggling agricultural community.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯ ಸಂಶೋಧನೆಗೆ ಆಯುರ್ವೇದ ಕಾಲೇಜು ಸ್ಥಾಪನೆಗೆ ಒತ್ತಾಯ

ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಯಾದರೆ ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ…

10 hours ago

ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಅವಧಿ ವಿಸ್ತರಣೆ

ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಖರೀದಿಯ ಕಾಲಮಿತಿ ಹೆಚ್ಚಿಸುವಂತೆ   ಕೇಂದ್ರ ಕೃಷಿ ಸಚಿವರಲ್ಲಿ…

11 hours ago

ದಾವಣಗೆರೆ | ಅಂತರ್ಜಲ ಬಳಕೆಗೆ ನಿರಾಪೇಕ್ಷಣಾ ಪತ್ರ ಕಡ್ಡಾಯ

ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಕಡ್ಡಾಯವಾಗಿ…

11 hours ago

ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದಲ್ಲಿ ಅನುಷ್ಠಾನ ಸಾಧ್ಯವಿಲ್ಲ : ಡಾ.ಪುರುಷೋತ್ತಮ ಬಿಳಿಮಲೆ

ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದರೆ, ಆದೇಶಗಳಿಂದ ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು…

19 hours ago

ಸೀತೆ ಪುನೀತೆ | ಅಪೂರ್ಣ ರಾಮಾಯಣ

ರಾಮನು ಸೀತೆಯನ್ನು ಪರಿತ್ಯಜಿಸಿದ್ದು ಸರಿಯೆ? ಅರಣ್ಯದಲ್ಲಿ ಸೀತೆ ಏನಾದಳು? ಅವಳ ಮನಸ್ಸಿಗೆ ಎಂತಹ…

20 hours ago

ಮಾವಿನ ನಂತರ  ಬಾಳೆಯು ಪ್ರಮುಖ ಹಣ್ಣಿನ ಬೆಳೆ

ಬಾಳೆಯು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಭಾರತ ದೇಶವು…

2 days ago