ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಅಶೋಕ ಮಾಸಾಳ ಅವರು ಜಮೀನಿನಲ್ಲಿ ಯುವ ತಂತ್ರಜ್ಞಾನದ ಸಹಾಯದಿಂದ 1083 ತಳಿಯ 2200 ಬದನೆಕಾಯಿ ಸಸಿಗಳನ್ನು ನೆಟ್ಟು ಉತ್ತಮ ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೊಟ್ಟಿಲು ಮಾದರಿಯ ಸರಿಯಾದ ಅಂತರ ಹಾಗೂ ನೀರಾವರಿ ಕ್ರಮದೊಂದಿಗೆ ಸಸಿಗಳಿಗೆ ಪೋಷಕಾಂಶ ಸಮರ್ಪಕವಾಗಿ ತಲುಪುವಂತೆ ಮಾಡಿದ್ದಾರೆ. ಮಾತ್ರವಲ್ಲ, ಅವರು ರೂ 12,000 ಮೌಲ್ಯದ ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ ಗಳು ಮತ್ತು ರೂ 9,000 ಮೌಲ್ಯದ ಡ್ರಿಪ್ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇದರಿಂದ ನೀರಿನ ಉಳಿತಾಯವಾಗಿದ್ದು, ಹುಲ್ಲು ಬೆಳೆಯುವುದನ್ನು ತಡೆದು, ಬೆಳೆ ಆರೋಗ್ಯಕರವಾಗಿ ಬೆಳೆಯುವುದಕ್ಕೂ ಸಹಾಯವಾಗಿದೆ.
ಅಶೋಕ ಮಾಸಾಳರು ಬದನೆಕಾಯಿ ಬೆಳೆಗಳಿಗೆ ಯಾವುದೇ ರೋಗಗಳು ಬರದಂತೆ ಗಮನವಹಿಸಿ 7 ದಿನಗಳ ಅಂತರದಲ್ಲಿ ಪೋಷಕ ದ್ರವ್ಯಗಳ ಸಿಂಪಡಣೆ ಹಾಗೂ 3 ದಿನಗಳ ಅಂತರದಲ್ಲಿ ಹಾನಿಕಾರಕ ಕೀಟ ನಿರ್ವಹಿಸುತ್ತಾರೆ. ಇವರಿಗೆ ಈ ಕೃಷಿಯಿಂದ ಒಟ್ಟು ಉತ್ಪಾದನೆ 18 ರಿಂದ 20 ಟನ್ ಆಗಿದ್ದು, ಪ್ರತಿ ಕಿಲೋಗೆ ರೂ 40 ರಿಂದ ರೂ 50 ದರ ಸಿಕ್ಕಿದೆ. ಹೀಗಾಗಿ ಕೇವಲ ಒಂದು ಎಕರೆ ಬದನೆ ತೋಟದಿಂದಲೇ 6 ಲಕ್ಷದ ವರೆಗೂ ಆದಾಯ ಪಡೆದಿದ್ದಾರೆ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…