ಹೊಸದೊಂದು ವಂಚನಾ ಜಾಲ | ಫಾಸ್ಟ್ ಟ್ಯಾಗ್ ಮೂಲಕ 80 ಲಕ್ಷ ಹಣ ಲಪಟಾಯಿಸಿ ವಂಚನೆ | ವಂಚನಾ ಜಾಲ ಬೇಧಿಸಿದ ಪೋಲಿಸರು |

October 14, 2022
3:15 PM

ಕ್ರೆಡಿಟ್‌ ಕಾರ್ಡ್‌ (Credit Card) ಸೇವೆಗಳನ್ನು ಸಕ್ರಿಯಗೊಳಿಸುವ ಹೆಸರಿನಲ್ಲಿ ಫಾಸ್ಟ್‌ ಟ್ಯಾಗ್ (Fast Tag)  ಮೂಲಕ ಹಣ ಲಪಟಾಯಿಸಿ ವಂಚಿಸುತ್ತಿದ್ದ ವಂಚಕರ ತಂಡವನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್‌ ಬಂಧಿಸಿದೆ.‌ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ಅವರಲ್ಲಿದ್ದ ಐಷಾರಾಮಿ ವಾಹನಗಳು, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳು, ಕಾರ್ಡ್‌ ಸ್ವೈಪ್‌ ಯಂತ್ರ, ಸಿಮ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಈ ಆರೋಪಿಗಳು 80 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾರೆ.

ವಂಚನಾ ಜಾಲದ ಒಬ್ಬ ಸದಸ್ಯ ಬ್ಯಾಂಕ್ ಅಧಿಕಾರಿಯಂತೆ ಕಾರ್ಯನಿರ್ವಹಿಸುವ ಮೂಲಕ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇತರ ಸೇವೆಗಳನ್ನು ಸಕ್ರಿಯಗೊಳಿಸುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದರು. ಇನ್ನೊಬ್ಬ ಗ್ರಾಹಕರು ನೀಡಿದ  ಬ್ಯಾಂಕ್ ವಿವರಗಳನ್ನು ಬಳಸಿಕೊಂಡು ಫಾಸ್ಟ್‌ಟ್ಯಾಗ್ ವ್ಯಾಲೆಟ್ ಅನ್ನು ರಚಿಸಿ ಆ ಮೂಲಕ ಹಣ ವಂಚನೆ ಮಾಡುತ್ತಿದ್ದರು. ಆರಂಭದಲ್ಲಿ  ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಹೆಚ್ಚು ಮಾಡುವುದು  ಸೇರಿದಂತೆ ಇತರ ವಿಚಾರಗಳ ಬಗ್ಗೆ ಕರೆ ಮಾಡುತ್ತಾ ಮಾಹಿತಿ ಪಡೆಯುತ್ತಿದ್ದರು.

ವಂಚನೆ ಹೇಗೆ ? : ವಂಚನಾ ಜಾಲದ ಸದಸ್ಯರೊಬ್ಬರು ಹೊಸ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕರೆ ಮಾಡುತ್ತಾರೆ ಮತ್ತು ಬ್ಯಾಂಕ್ ಅಧಿಕಾರಿಯಂತೆ ನಟಿಸುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆಯುತ್ತಾರೆ. ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದ  ನಂತರ, ವಂಚನಾ ಜಾಲದ ಇತರ ಸದಸ್ಯರು  ಫಾಸ್ಟ್‌ಟ್ಯಾಗ್ ವ್ಯಾಲೆಟ್ ಅನ್ನು ರಚಿಸುತ್ತಾರೆ. ಸ್ಕ್ಯಾಮರ್‌ಗಳು ಕದ್ದ ಮಾಹಿತಿಯನ್ನು ಬಳಸಿಕೊಂಡು ಫಾಸ್ಟ್‌ಟ್ಯಾಗ್ ವ್ಯಾಲೆಟ್‌ಗೆ ಹಣವನ್ನು ಜಮೆ ಮಾಡುತ್ತಾರೆ ಮತ್ತು ನಂತರ ಇ-ವ್ಯಾಲೆಟ್‌ನಿಂದ ಹಣವನ್ನು ಹೊರತೆಗೆಯುತ್ತಿದ್ದರು. ಈ ವಂಚನಾ ಜಾಲವನ್ನು ಬೇಧಿಸಲು ಪೊಲೀಸರಿಗೂ ಕಷ್ಟವಾಗಿತ್ತು. ಅತ್ಯಂತ ತಾಂತ್ರಿಕವಾಗಿ ಈ ಜಾಲವನ್ನು ವಂಚಕರು ರಚಿಸಿದ್ದರು.

ಹೆಚ್ಚಿನ ಫಾಸ್ಟ್‌ಟ್ಯಾಗ್ ಲಿಂಕ್ ಮಾಡಿದ ಇ-ವ್ಯಾಲೆಟ್‌ಗಳು ಸ್ವಯಂಚಾಲಿತ ರೀಚಾರ್ಜ್ ವ್ಯವಸ್ಥೆ ಇರುವುದರಿಂದ  ಸ್ಕ್ಯಾಮರ್‌ಗಳು  ಜನರನ್ನು ಸುಲಭವಾಗಿ ವಂಚಿಸಿದ್ದರು.

ಇದೀಗ ಹೊಸ ಮಾದರಿಯ ವಂಚನಾ ಜಾಲಗಳು ಕೂಡಾ ಬೆಳಕಿಗೆ ಬರುತ್ತಿದೆ. ಹೀಗಾಗಿ  ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಇ-ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್ ಅನ್ನು ಬಳಸುತ್ತಿದ್ದರೆ, ನೀವು ಆಗಾಗ ಪರಿಶೀಲನೆ ಮಾಡುತ್ತಿರಬೇಕು. ವ್ಯತ್ಯಾಸಗಳು ಕಂಡುಬಂದರೆ ತಕ್ಷಣವೇ ಸಂಬಂಧಿತ ಇಲಾಖೆ ಹಾಗೂ ಬ್ಯಾಂಕ್‌ ಸಂಪರ್ಕ ಮಾಡಬೇಕು. ಫಾಸ್ಟ್‌ ಟ್ಯಾಗ್‌ ನಂತರ ಸ್ವಯಂ ಚಾಲಿತ (Auto debit-auto credit )  ವ್ಯವಸ್ಥೆಗಳನ್ನು ಮಾಡಿದ್ದರೆ ಆಗಾಗ ಪರಿಶೀಲನೆ ಅತೀ ಅಗತ್ಯ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ
August 5, 2026
10:30 AM
by: ದ ರೂರಲ್ ಮಿರರ್.ಕಾಂ
ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ
August 5, 2026
9:09 AM
by: ದ ರೂರಲ್ ಮಿರರ್.ಕಾಂ
ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ
August 5, 2026
8:41 AM
by: ದ ರೂರಲ್ ಮಿರರ್.ಕಾಂ
ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ
August 4, 2026
11:23 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror