ಮೀನುಗಾರಿಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ತೀರದ ಜನರ ಜೀವನೋಪಾಯ. ಮತ್ಸ್ಯೋದ್ಯಮ ವಿಶ್ವ ಮಟ್ಟದಲ್ಲಿ ಈ ಜಿಲ್ಲೆಗಳು ಗುರುತಿಸಿಕೊಳ್ಳುವಂತೆ ಮಾಡಿದೆ. ವರ್ಷದ 10 ತಿಂಗಳು ಮೀನುಗಾರರ ಜೀವನ ಮೀನುಗಾರಿಕೆಯಲ್ಲೇ ಕಳೆಯುತ್ತದೆ. ಈ ಬಾರಿ ಮೀನುಗಾರಿಕೆ ನಡೆದರೂ ನಿರೀಕ್ಷಿತ ಮಟ್ಟದಲ್ಲಿ ನಡೆದಿದೆ. ಮೀನುಗಾರರ ಬದುಕು ಸಾಗಿದೆ, ಆದರೆ ನಿರೀಕ್ಷಿತ ಆದಾಯ ಸಾಧ್ಯವಾಗಿಲ್ಲ.
ಈ ಬಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಆದರೆ, ಲಾಭಾಂಶ ಮಾತ್ರ ಕಡಿಮೆ ಆಗಿದೆ. 2022-23 ನೇ ಸಾಲಿನ ಋತುವಿನಲ್ಲಿ ಮಳೆ, ಚಂಡಮಾರುತದ ಎಫೆಕ್ಟ್ ಕಡಿಮೆ ಇದ್ದಿದ್ರಿಂದ ಈ ಸಾಲಿನ ಅಂತ್ಯದವರೆಗೂ (ಮೇ 31) ಮೀನುಗಾರಿಕೆ ನಡೆಸಲು ಸಾಧ್ಯವಾಗಿದೆ. ಆದರೆ, ತೀವ್ರ ಬೆಲೆ ಕುಸಿತ, ರಫ್ತು ಪ್ರಮಾಣ ಕಡಿಮೆ ಇದೆಲ್ಲವೂ ಮೀನುಗಾರರಿಗೆ ಹೆಚ್ಚಿನ ಲಾಭವನ್ನು ತಂದಿಲ್ಲ. ಆದರೆ ಸ್ಥಳೀಯ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಯಲ್ಲಿ ಮೀನುಗಳು ಸಿಗುವಂತಾಗಿತ್ತು.
ಹೇಗಿತ್ತು ಈ ಋತುವಿನ ಮೀನುಗಾರಿಕೆ? : ಈ ವರ್ಷ ಅಧಿಕ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಈ ಋತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,33,537 ಮೆಟ್ರಿಕ್ ಟನ್ನಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ 2,12,081 ಮೆಟ್ರಿಕ್ ಟನ್ ಮೀನುಗಾರಿಕೆ ನಡೆದಿದೆ. ಹಿಂದಿನ ವರುಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮೀನುಗಾರಿಕೆ ನಡೆದಿದೆ. ಒಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022-23 ನೇ ಸಾಲಿನ ಋತುವಿನಲ್ಲಿ 5,45,618 ಮೆಟ್ರಿಕ್ ಟನ್ ಮೀನುಗಾರಿಕೆ ನಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಿರ ಹತ್ತಿರ ಮೂರು ಪಟ್ಟಿನಷ್ಟು ಮೀನುಗಾರಿಕೆ ಅಧಿಕವಾಗಿದೆ.
ಕೈಗೂಡದ ನಿರೀಕ್ಷೆ : ಈ ಬಾರಿ ನಿರೀಕ್ಷೆಯಂತೆ ಫಿಶ್ ಮಿಲ್ಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಮಾತಿದೆ. ಉಳ್ಳಾಲದ ಒಂದೇ ಭಾಗದಲ್ಲಿರುವ 13 ಫಿಶ್ ಮಿಲ್ಗಳು ವರ್ಷವಿಡೀ ಬಂದ್ ಆಗಿತ್ತು. ಜೊತೆಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡಾ ತಲೆದೋರಿದ್ದರಿಂದ ಮೀನು ರಫ್ತಿನ ಮೇಲೆ ಹೊಡೆತ ಬಿದ್ದಿದೆ. ಮೀನುಗಾರಿಕೆ ಹೆಚ್ಚಿದ್ದರೂ, ಲಾಭಾಂಶ ಮಾತ್ರ ಶೇಕಡಾ 30-40 ರಷ್ಟು ಕುಸಿದಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…