ಮಾಹಿತಿ

ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ | ಅಯೋಧ್ಯೆಯ ಕುರಿತು ಒಂದಿಷ್ಟು ಮಾಹಿತಿಗಳು…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೊದಲಿಗೆ…. ಅಯೋಧ್ಯೆ(Ayodya) ದೊಡ್ಡ ನಗರವೇನಲ್ಲ. ಫೈಜಾ಼ಬಾದ್(Faizabad) ಎಂಬ ನಗರದ(City) ಹೊರವಲಯದಲ್ಲಿ, ಕೇವಲ ಐದು ಕಿಮೀ ಸುತ್ತಳತೆಯಲ್ಲಿರೋ, ಒಂದೇ ದಿನದೊಳಗೆ ಬರಿಗಾಲಲ್ಲೇ ಇಡೀ ಊರನ್ನು ಅಳೆದು ಮುಗಿಸಬಹುದಾದಂತಹ ಪುಟ್ಟ ಊರು ಇದು. ಹಾಗಾಗಿ ತೀರಾ ಐಷಾರಾಮಿ ಸೌಲಭ್ಯಗಳ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ….

Advertisement

ನೋಡುವ ಸ್ಥಳಗಳು : ಅಯೋಧ್ಯೆಯಲ್ಲಿ ಮೊದಲ ದರ್ಶನ ಹನುಮಂತನಿಗೇ ಅನ್ನೋ ನಂಬಿಕೆಯಿರೋ ಕಾರಣ, ಮೊದಲು… ಹನುಮಾನ್ ಗಢಿ ಮಂದಿರ ತಲುಪಿ ದರ್ಶನ ಮುಗಿಸಿ. ಇಲ್ಲಿಂದ ಹೊರ ಬಂದು ರಾಜಪಥ ಮಾರ್ಗದಲ್ಲಿ ಎಡಕ್ಕೆ ಚಲಿಸಿದಲ್ಲಿ ನೋಡಬೇಕಿರೋ ಅಷ್ಟೂ ಜಾಗಗಳೂ ಇದೇ ಹಾದಿಯಲ್ಲಿ ಸಿಗುತ್ತವೆ. ಹಾಗಾಗಿ ಗೈಡುಗಳ ಅವಶ್ಯಕತೆಯೂ ಇಲ್ಲ…

2. ರಾಜದ್ವಾರ ಮಂದಿರ ( ಹನುಮಾನ್ ಮಂದಿರದ ಎದುರಲ್ಲೇ ಇದೆ).

3. ಭರತ ಮಿಲಾಪ್ ಮಂದಿರ. ( 50mtr ಅಂತರ).

4. ದಶರಥ ಮಹಲ್ ( 200mtr ಅಂತರ).

Advertisement

5. ರಾಮಜನ್ಮಭೂಮಿ ಶ್ರೀರಾಮ ಮಂದಿರ ( 500mtr ದೂರದಲ್ಲಿದೆ).

6. ಅರಬಿಂದೋ‌ ಆಶ್ರಮ. (ಶ್ರೀರಾಮಮಂದಿರದ Exit ಗೇಟ್ ಬಳಿ ).

7. ಸುಗ್ರೀವ ಕಿಲಾ ಮಂದಿರ. ( ಶ್ರೀರಾಮಮಂದಿರದ ಪ್ರವೇಶ ದ್ವಾರದಿಂದ 400mtr).

8. ಕನಕಭವನ (ಸೀತೆಗೆ ಕೈಕೇಯಿ ಉಡುಗೊರೆಯಾಗಿ ನೀಡಿದ ಮಹಲು. ದಶರಥ ಮಹಲಿನಿಂದ 200mtr ).

9. ಚೋಟಿ‌ ದೇವ್‌ಕಾಲಿ ದೇವಸ್ಥಾನ.(900mtr from ಹನುಮಾನ್ ಗಢಿ).

Advertisement

10. ರಾಮ್ ಕೀ ಪೈಡಿ, ಸರಯೂ ಘಾಟ್… (ಹನುಮಾನ್ ಮಂದಿರದಿಂದ 2km).

11. ಗುಪ್ತಾರ್ ಘಾಟ್ (ಅಯೋಧ್ಯೆಯಿಂದ 10km ದೂರದಲ್ಲಿ ಸರಯೂ ನದಿ ದಂಡೆಯಲ್ಲಿರೋ ಈ ಘಾಟಿನಲ್ಲಿಯೇ ಜಲಸಮಾಧಿಯಾಗುವ ಮೂಲಕ ಶ್ರೀರಾಮ ತನ್ನ ಅವತಾರವನ್ನು ಮುಗಿಸಿದ್ದು ).

12. ಬಡಿ‌ ದೇವ್‌ಕಾಲಿ ಮಂದಿರ, ಅಯೋಧ್ಯೆಯ ಕುಲದೇವತೆ. ( ಹನುಮಾನ್ ಗಢಿಯಿಂದ 5km ).

ಕೆಲವೊಂದು ಗಮನಿಸಬೇಕಾದ ಅಂಶಗಳು: ಬಹುತೇಕ ಜನರೆಲ್ಲಾ ಬೆಳಗ್ಗಿನ ಸಮಯದಲ್ಲಿ ದರ್ಶನ ಮುಗಿಸಿ ಊರುಗಳಿಗೆ ತೆರಳೋದ್ರಿಂದಾಗಿ, ಅಯೋಧ್ಯೆಯಲ್ಲಿಯೇ ತಂಗುವುದಾದಲ್ಲಿ ಸಂಜೆಯ ನಂತರದ ದರ್ಶನದ ಆಯ್ಕೆ ಮಾಡಿಕೊಳ್ಳೋದು ಉತ್ತಮ. ಜನಸಂದಣಿ ಕಡಿಮೆಯಿರುತ್ತದೆ… ಸಾಮಾನ್ಯವಾಗಿ ಶ್ರೀರಾಮನ ದರ್ಶನಕ್ಕೆ ಕನಿಷ್ಟ ಎರಡು ಗಂಟೆಗಳು ತೆಗೆದುಕೊಳ್ಳುತ್ತದೆ. ತುಂಬಾ ಬಿಗಿ ಭದ್ರತೆಯಿರೋ ಕಾರಣ, ಮೊಬೈಲ್, ಇಯರ್ ಫೋನ್, ಚಾರ್ಜರ್ ಕೇಬಲ್, ಸ್ಮಾರ್ಟ್ ವಾಚ್, ಪವರ್‌ಬ್ಯಾಂಕ್, ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಗುಗಳು…. ಇತ್ಯಾದಿಗಳನ್ನು ಶ್ರೀರಾಮ ಮಂದಿರದೊಳಗೆ ಬಿಡುವುದಿಲ್ಲ. ಹಾಗಾಗಿ ಇವ್ಯಾವುದೂ ಜೊತೆಗೆ ಕೊಂಡೊಯ್ಯಬೇಡಿ. ಅಲ್ಲಿ ಲಾಕರ್‌ಗಳ ಸೌಲಭ್ಯವಿದ್ದರೂ ಇದಕ್ಕಾಗಿಯೇ ಗಂಟೆಗಟ್ಟಲೆ ಕಾಯಬೇಕಿಲ್ಲಿ. ಪ್ರಸಾದಗಳು ನಮ್ಮಲ್ಲೆಲ್ಲಾ ಸಿಗುವಂತೆ ದೇವಸ್ಥಾನದ ಒಳಗೆಲ್ಲಾ ಕೌಂಟರ್‌ಗಳಲ್ಲಿ ಸಿಗೋದಿಲ್ಲ. ಹೊರಗಡೆಯಿರೋ ಅಂಗಡಿಗಳಲ್ಲಿ ಲಾಡು ಇತ್ಯಾದಿ ಖರೀದಿಸಿ ಕೊಂಡೊಯ್ದಲ್ಲಿ ಅದನ್ನು ದೇವರಿಗೆ ಸಮರ್ಪಿಸಿ ನಿಮಗೇ ವಾಪಸ್ ಕೊಡುತ್ತಾರೆ. ಹೀಗೆ ಖರೀದಿಸುವಾಗ ಪಾದರಕ್ಷೆಗಳನ್ನೆಲ್ಲಾ ಆ ಅಂಗಡಿಗಳಲ್ಲೇ ಬಿಟ್ಟು, ಬರಿಗಾಲಲ್ಲೇ ಅಷ್ಟೂ ದರ್ಶನ ಮುಗಿಸಿ ಬಂದು ಧರಿಸೋದು ಉತ್ತಮ. ದಶರಥಮಹಲ್ ಹಾಗೂ ಕನಕಭವನ ಮಧ್ಯಾಹ್ನ 12ರಿಂದ 4pm ವರೆಗೂ ಮುಚ್ಚಿರುತ್ತವೆ. ಸರಯೂ ಘಾಟಿನಲ್ಲಿ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸರಯೂ ಆರತಿ, ಇದು ಮುಗಿಯುತ್ತಿದ್ದಂತೆಯೇ ಎದುರಲ್ಲಿರೋ ರಾಮ್ ಕೀ ಪೈಡಿಯಲ್ಲಿ ಕಾರ್ಯಕ್ರಮಗಳಿರುತ್ತವೆ. ಹನುಮಾನ್ ಗಢಿ/ಶ್ರೀರಾಮ ಮಂದಿರದಿಂದ ಸರಯೂ ಘಾಟಿಗೆ ತೆರಳಲು ಶೇರಿಂಗ್ ಆಟೋಗಳು ಲಭ್ಯವಿದೆ.

ವಸತಿ ವ್ಯವಸ್ಥೆ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಿಂದ ಕೂಗಳತೆ ದೂರದಲ್ಲೇ, ಪೇಜಾವರ ಮಠದ ಮಾಧವಾಶ್ರಮ, ಬಿರ್ಲಾ ಧರ್ಮಶಾಲಾ, ರಾಮ್ ಸಿಂಧೂ ಧರ್ಮಶಾಲಾ, ಜಾನಕಿಮಹಲ್ ಧರ್ಮಶಾಲಾ ಸೇರಿದಂತೆ ನೂರಕ್ಕೂ ಹೆಚ್ಚು ಧರ್ಮಶಾಲೆಗಳಿದ್ದು ಉಚಿತ ಅಥವಾ ಅತೀ ಕಡಿಮೆ ಬೆಲೆಯಲ್ಲಿ ಇಲ್ಲೆಲ್ಲಾ ಉಳಿದುಕೊಳ್ಳೋ ವ್ಯವಸ್ಥೆಯಿದೆ. ಜೊತೆಗೇ ಇಲ್ಲೆಲ್ಲಾ AC / Non Ac ರೂಮುಗಳೂ ಲಭ್ಯವಿದ್ದು, Yatradham.orgನಲ್ಲಿ ಆನ್ ಲೈನ್ ಬುಕಿಂಗ್ ಕೂಡಾ ಸಾಧ್ಯವಿದೆ.. ಒಂದಿಷ್ಟು ಉತ್ತಮ ದರ್ಜೆಯ ಹೋಟೆಲ್‌ಗಳ ನಿರೀಕ್ಷೆಯಿದ್ದಲ್ಲಿ ಆನ್‌ಲೈನ್‌ನಲ್ಲಿ ಮುಂಗಡ ಬುಕಿಂಗ್ ಮಾಡದೆ ಹೋಗಬೇಡಿ. ಇದಲ್ಲದೆ ಈಗ ಹೊಸದಾಗಿ ನಗರದ ಹೊರವಲಯಗಳಲ್ಲಿ ಟೆಂಟ್ ಸಿಟಿಗಳೂ ನಿರ್ಮಾಣವಾಗಿದ್ದು ಇಲ್ಲಿಯೂ ಉಳಿಯಬಹುದಾಗಿದೆ….

Advertisement
ಬರಹ :
ಸುಧೀರ್ ಸಾಗರ್.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..

ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…

7 hours ago

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…

10 hours ago

ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ  ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…

10 hours ago

ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

18 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

20 hours ago