ಅಡಿಕೆ ವಹಿವಾಟಿನಲ್ಲಿ ವಂಚನೆ | ಮುಂಬೈ ಉದ್ಯಮಿಗೆ 30 ಲಕ್ಷ ಪಂಗನಾಮ

August 8, 2025
7:49 AM

ಅಡಿಕೆ ವಹಿವಾಟಿನಲ್ಲಿ ಈಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಾತ್ರವಲ್ಲ ಖರೀದಿ-ಮಾರಾಟ ಎರಡೂ ಕಡೆಗಳಲ್ಲಿ ವಂಚನೆ ನಡೆಯುತ್ತಿದೆ.ಇದೀಗ ಅಡಿಕೆ ವ್ಯಾಪಾರದ ಮದ್ಯವರ್ತಿಗೂ 30 ಲಕ್ಷ ರೂಪಾಯಿ ವಂಚಿಸಿದ ಘಟನೆಯೊಂದು ಮುಂಬೈಯಲ್ಲಿ ನಡೆದಿದೆ.

ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಅಡಿಕೆ ಪೂರೈಸುವುದಾಗಿ ನಂಬಿಸಿ , ಉತ್ತಮ ಲಾಭ ಗಳಿಸುವ ಆಮಿಷವೊಡ್ಡಿ ಮುಂಬೈಯ ಅಂಧೇರಿಯ ಉದ್ಯಮಿಯೊಬ್ಬರಿಗೆ ಮೂವರು ವ್ಯಕ್ತಿಗಳು 30 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಆರ್ ಗುಪ್ತಾ, ಮನೋಜ್ ಪಟೇಲ್ ಮತ್ತು ಮಹೇಂದ್ರ ಶಾ ಆರೋಪಿಗಳು. ಪ್ರಕಾಶ್ ಶುಕ್ಲಾ ವಂಚನೆಗೊಳಗಾದವರು.

ಅಡಿಕೆ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ ಆಮಿಷವೊಡ್ಡಿ ಹಾಗೂ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅಡಿಕೆ ಮಾಡಿ ಭಾರಿ ಲಾಭದ ಭರವಸೆ ನೀಡಿ  30 ಲಕ್ಷ ವಂಚಿಸಿದ್ದಾರೆ. ಸೊಮಾಲಿಯಾದ ವ್ಯಾಪಾರಿಯೊಂದಿಗೆ  1.3 ಕೋಟಿ ಮೌಲ್ಯದ 52 ಟನ್ ಅಡಿಕೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದಕ್ಕಾಗಿ  30 ಲಕ್ಷ ನಗದು ಮುಂಗಡ ಹಣ ನೀಡುವಂತೆ  ಆರೋಪಿಗಳು ಹೇಳಿದ್ದರು. ಅದಕ್ಕೂ ಮೊದಲು ನಂಬಿಕೆ ಬರುವಂತೆ ನಟಿಸಿದ್ದರು, ವಿವಿಧ ಬಾರಿ ಸಭೆ ಸೇರಿ ಮಾತುಕತೆ ನಡೆಸಿದ್ದರು.  ಹಣ ಪಾವತಿಯಾದ ಬಳಿಕ ಆರೋಪಿಗಳು ಯಾವುದೇ ಕರೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎಂದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತೀ ಸಭೆಯಲ್ಲಿ ಆರೋಪಿಗಳು 52 ಟನ್ ಅಡಿಕೆಯನ್ನು ಪ್ರತಿ ಕಿಲೋಗ್ರಾಂಗೆ 250 ರೂ.ಗೆ ಬರುವುದಾಗು ಹೇಳಿದ್ದರು. ಅಂದರೆ 1.30 ಕೋಟಿ ರೂ. ಮೌಲ್ಯದ್ದಾಗಿದೆ. ಆದರೆ 30 ಲಕ್ಷ ರೂ. ಮುಂಗಡ ನಗದು ನೀಡುವಂತೆ ಹೇಳಿದ್ದರು. ಉಳಿದ ಮೊತ್ತವನ್ನು ಚೆಕ್ ಅಥವಾ ಆರ್‌ಟಿಜಿಎಸ್ ಮೂಲಕ ಅಡಿಕೆ ತಲುಪಿದ ನಂತರ ಪಾವತಿಸಬಹುದು ಎಂದು ಭರವಸೆ ನೀಡಿದ್ದರು.ಇದೀಗ ಪ್ರಕರಣ ದಾಖಲಾಗಿದೆ.

Source: Indian Express

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ
September 11, 2026
4:00 PM
by: ಸಾಯಿಶೇಖರ್ ಕರಿಕಳ
ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು
September 11, 2026
10:42 AM
by: ದ ರೂರಲ್ ಮಿರರ್.ಕಾಂ
ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror