Advertisement
ಅನುಕ್ರಮ

ಸವಿರುಚಿ | ಆರೋಗ್ಯ ವರ್ಧಕ ಹಣ್ಣುಗಳ ಸಲಾಡ್….

Share
ನಮ್ಮ  ಊರಲ್ಲಿ   ಯಾವುದೇ ವಿಶೇಷ ಸಂದರ್ಭದಲ್ಲಿ  ಮಕ್ಕಳು ಅಪ್ಪ ಅಮ್ಮನಲ್ಲಿ ಡಿಮಾಂಡ್ ಮಾಡಿ ತಿನ್ನುತ್ತಿದ್ದುದು ಗಡ್ ಬಡ್ ಐಸ್ ಕ್ರೀಂ. ಹಣ್ಣುಗಳು ಹಾಗೂ ಐಸ್ ಕ್ರೀಂ ಗಳ  ಅಚ್ಚುಕಟ್ಟಾದ ಮಿಶ್ರಣ ಗಡ್ ಬಡ್.  ಯಾವ ಹೋಟೆಲ್ ಗಳಿಗೆ ಹೋದರು ಮೆನು ಇಡೀ ಓದಿ ಕೊನೆಯಲ್ಲಿ ಕೇಳುವುದು ಇದೇ ಗಡ್ ಬಡ್. ಎಂತ ಮಕ್ಕಳೊ ಏನೋ ಒಳ್ಳೆಯ ಹೋಟೆಲ್ , ಇಲ್ಲಿನ ಬನ್ಸ್ ರುಚಿ, ಮಸಾಲಾ ದೋಸೆ ಸೂಪರ್, ಹಾಗಿದ್ದೂ ಮತ್ತದೇ  ಗಡ್ ಬಡ್.  ಪ್ರತಿ ಹೋಟೆಲ್ ನ ಗಡ್ ಬಡ್ ಬೇರೆ ಬೇರೆಯೇ. ರುಚಿಯಲ್ಲಿ , ಬಣ್ಣದಲ್ಲಿ ಹಣ್ಣು , ಒಣ್ ಹಣ್ಣುಗಳ  ಮಿಶ್ರಣ, ಬಳಸುವ ಐಸ್ ಕ್ರೀಂ ಗಳು  ವಿಭಿನ್ನ ರೀತಿಯಲ್ಲಿರುತ್ತವೆ. ಆದರೆ ಅವುಗಳೆಲ್ಲವೂ  ಗಡ್ ಬಡ್ ಐಸ್ ಕ್ರೀಂ  ಎನ್ನುವುದರಲ್ಲಿ ಸಂಶಯವಿಲ್ಲ.
ನಮ್ಮ ಕರಾವಳಿ ಪ್ರದೇಶದಲ್ಲಿನ ವಾತಾವರಣ ಯಾರನ್ನಾದರೂ ಐಸ್ ಕ್ರೀಂ ಸೇವಿಸಲು ಪ್ರೇರೇಪಿಸುತ್ತದೆ.  ಅಲ್ಲದೇ ಒಂದು ಕಪ್ ತಿಂದರೆ ಇನ್ನೊಂದು ಬೇಕೆನಿಸುವಷ್ಟು ಇಷ್ಟವಾಗಿ ಬಿಡುವಂತಹುದೇ ಆಗಿದೆ ಈ ಐಸ್ ಕ್ರೀಂ .  ಹಾಗಾಗಿ ಇಲ್ಲಿ  ನಿತ್ಯವೂ ಹೊಸ ಹೊಸ  ರುಚಿಯ  , ನವೀನ ಬಣ್ಣ, ಪರಿಮಳಗಳ ಐಸ್ ಕ್ರೀಂ ಗಳ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುತ್ತವೆ.
ಸದ್ಯ ಕೊರೋನಾ ಸಮಯದಲ್ಲಿ ತಣ್ಣಗೆ ಏನೂ ತಿನ್ನಬೇಡಿ, ಕುಡಿಯ ಬೇಡಿ ಅಂತ ಎಲ್ಲೆಡೆಯೂ ಕೇಳಿ ಬರುತ್ತಿರುವ ಮಾತು. ಆದರೆ ಏನು ಮಾಡೋಣ, ಮನೆಯಲ್ಲಿ ಮಕ್ಕಳು ಒಂದೇ ಸಮನೆ ಪ್ರುಟ್ ಸಲಾಡ್ ಬೇಕು,  ಬೇಕು ಎಂದು ಬೊಬ್ಬೆ ಹೊಡೆಯುವಾಗ ,  ಮನೆಯಲ್ಲೇ ಇದ್ದ ಹಣ್ಣುಗಳಿಂದಲೇ ವಿಶೇಷವಾಗಿ  ಮಿಶ್ರ ಹಣ್ಣುಗಳ ಸಲಾಡ್ ಮಾಡಿ ಕೊಟ್ಟಾಯಿತು.  ಮಾವಿನ ಹಣ್ಣಿನ ಹೋಳುಗಳು, ಅನನಾಸಿನ ಸಣ್ಣ ಸಣ್ಣ ತುಂಡುಗಳು, ಪಪ್ಪಾಯ, ಒಣದ್ರಾಕ್ಷಿ, ಜೇನು ಬಳಸಿ ಮಾಡಿದ ಫ್ರುಟ್ ಸಲಾಡ್ ಬಹಳ ಇಷ್ಟವಾಗಿ ಇನ್ನೊಮ್ಮೆ ಮಾಡ ಬೇಕೆಂಬ ಬೇಡಿಕೆ ಬಂದಲ್ಲಿಗೆ  ನಮ್ಮ ಮನೆ  ಪಾಕ ಯಶಸ್ವಿಯಾಯಿತು . ನೀವು ಮಾಡಿ ನೋಡಿ!!!!
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 03-06-2026 | ಕರಾವಳಿಯಲ್ಲಿ ಮುಂಗಾರು ಚುರುಕು – ಜೂನ್ 8 ರಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜೂನ್…

12 hours ago

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ – ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…

19 hours ago

ಮಿಜೋರಾಂನಲ್ಲಿ ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ | ₹24 ಕೋಟಿ ಮೌಲ್ಯದ ಅಡಿಕೆ ವಶ, 468 ಪ್ರಕರಣ ದಾಖಲು, 292 ಮಂದಿ ಬಂಧನ

ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…

19 hours ago

ಮಳೆ ಆರಂಭವಾಗುತ್ತಿದ್ದಂತೆಯೇ ಗಿಡಗಳ ನಾಟಿಗೆ ಸಿದ್ಧತೆ – ಅಡಿಕೆ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ…!

ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…

1 day ago

ಕೇಂದ್ರ ಸರ್ಕಾರದ ಸೌಲಭ್ಯಗಳಿಗೆ ‘ಕೇಂದ್ರ ರೈತ ಐಡಿ’ ಕಡ್ಡಾಯ – ಮಂಗಳೂರು ತಾಲೂಕಿನ 14,520 ರೈತರು ಇನ್ನೂ ನೋಂದಣಿ ಬಾಕಿ

ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…

1 day ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

2 days ago