ಅನುಕ್ರಮ

#ನಮ್ಮೊಳಗಿನಗಾಂಧಿ | ಗಾಂಧಿ ಎಂದರೆ ಅದು ವ್ಯಕ್ತಿಯಲ್ಲ … ಅದೊಂದು ಚಿಂತನೆ | ನಮ್ಮೊಳಗಿನ ಗಾಂಧಿ ಈಗ ಎದ್ದು ಬರಲು ಸಮಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗಾಂಧಿ ಜಯಂತಿ. ಇದು ವ್ಯಕ್ತಿಯ ಆರಾಧನೆಯಲ್ಲ, ಇದೊಂದು ಚಿಂತನೆಯ ಆರಾಧನೆ. ಈ ಚಿಂತನೆ ಸಾರ್ವಕಾಲಿಕ ಸತ್ಯ.

Advertisement
Advertisement

ಈ ದೇಶದಲ್ಲಿ  ಮಹಾನ್‌ ರಾಷ್ಟ್ರಪುರುಷ ಹುಟ್ಟಿದ್ದು ಮಾತ್ರವಲ್ಲ ಇಡೀ ಜಗತ್ತಿಗೆ ಸತ್ಯ, ಧರ್ಮ, ನ್ಯಾಯದ ಸಂದೇಶವನ್ನು ಸಾರಿ ರಾಷ್ಟ್ರಪಿತ ಎನಿಸಿಕೊಂಡ ಮಹಾನ್‌ ಚೇತನ. ಹೀಗಾಗಿಯೇ ಭಾರತ ಸರ್ವಶ್ರೇಷ್ಟ ಎನಿಸಿಕೊಳ್ಳಲು ಇಂತಹ ಚಿಂತನೆಗಳೂ ಒಂದು ಕಾರಣ. ಇಂದು ಉಳಿದಿರುವುದು  ಹಾಗೂ ಮುಂದೆ ಉಳಿಯುವುದು ಕೂಡಾ ಆ ಚಿಂತನೆ ಮಾತ್ರಾ. ವ್ಯಕ್ತಿ ಕೇಂದ್ರಿತವಾದ ಯಾವ ಆಚರಣೆಗಳೂ, ಯಾವ ದಿನಗಳು, ಯಾವ ಸಂಗತಿಗಳು ತಾತ್ಕಾಲಿಕ. ಈ ಚಿಂತನೆಯ ಆಚರಣೆಗಳು ಶಾಶ್ವತ. ಹೀಗಾಗಿಯೇ ಗಾಂಧೀಜಿ ಚಿಂತನೆ ಸಾರ್ವಕಾಲಿಕ ಸತ್ಯ. ಈ ಚಿಂತನೆ ಇಂದಿನ ದಿನ ಹೆಚ್ಚು ಪ್ರಸ್ತುತವಾಗಿದೆ.

ಸ್ವಚ್ಛತೆ, ಅಹಿಂಸೆ ಮೊದಲಾದವುಗಳು ಇಂದೂ ನೆನಪಾಗುತ್ತವೆ. ಗಾಂಧಿಯವರಿಗೆ, ಸತ್ಯ ಹಾಗೂ ಅಹಿಂಸೆಗಳು ಪರಂಪರೆಯಿಂದ ಬಂದ ವಿಷಯ ಆಗಿರಲಿಲ್ಲ, ಅದು ಆಚರಣೆಯ ದಾರಿಯಾಗಿತ್ತು. ಹಾಗಾಗಿಯೇ ಅದು ಈ ಮಣ್ಣಿನಲ್ಲೂ ನೆಲೆಯಾಯಿತು. ಈ ಮೌಲ್ಯಗಳ ಅನುಸರಣೆಯೇ ಅವರಿಗೆ ಒಂದು ನೆಲೆಯಲ್ಲಿ ಅಧ್ಯಾತ್ಮಿಕ ಸಾಧನೆ ಹಾಗೂ ಇನ್ನೊಂದು ನೆಲೆಯಲ್ಲಿ ರಾಜಕೀಯ ಕ್ರಿಯೆ ಆಗಿತ್ತು. ಗಾಂಧೀ ಚಿಂತನೆಗಳೆಲ್ಲವೂ ಹಾಗೆಯೇ. ಯಾವ ಕ್ಷೇತ್ರದಲ್ಲಿ ನೋಡಿದರೂ ಗಾಂಧಿ ಚಿಂತನೆ ಎದ್ದು ಕಾಣುತ್ತದೆ.

ಗಾಂಧಿವಾದವನ್ನು ಹೀಗೇ ಸುಮ್ಮನೆ ಮಾತನಾಡುವುದರಲ್ಲಿ ಅರ್ಥವಿಲ್ಲ, ಅದು ಆಚರಣೆಯ ಮೂಲಕ ಜಾರಿಯಾಗಬೇಕು. ಗಾಂಧೀ ಚಿಂತನೆಯನ್ನು ಹೆಚ್ಚು ತಿಳಿಯುವ ಮೂಲಕ ಇನ್ನಷ್ಟು ಹತ್ತಿರವಾಗಬೇಕು. ಏಕೆಂದರೆ ಪ್ರಸ್ತುತ ಕಾಲಘಟ್ಟದ ಅಶಾಂತಿಯ ವಾತಾವರಣದಲ್ಲಿ ಪ್ರತೀ ವ್ಯಕ್ತಿಗೂ ಈ ಚಿಂತನೆಯ ಅವಶ್ಯಕತೆ ಇದೆ. ಸ್ವಾವಲಂಬನೆಯ ಹಾದಿ ಬೇಕಾಗಿದೆ, ಸಾತ್ವಿಕ ಹೋರಾಟದ ದಾರಿ ಅಗತ್ಯವಿದೆ. ಸ್ವಾಭಿಮಾನದ ಕಿಚ್ಚು ಬೇಕಾಗಿದೆ. ಹೀಗಾಗಿ ಕ್ಷುಲ್ಲಕ ರಾಜಕೀಯ ಬದಿಗಿಟ್ಟು ಪ್ರೀತಿ, ಶಾಂತಿ, ಅಹಿಂಸೆ, ಸತ್ಯಗಳೆಡೆಗಿನ ನಮ್ಮ ಬದ್ಧತೆಯ ಬದುಕು ಗಟ್ಟಿಯಾಗಬೇಕು, ಅನುದಿನವೂ ನಮ್ಮ ಸಣ್ಣ ಸಣ್ಣ ಕ್ರಿಯೆಗಳಲ್ಲೂ ಈ ಚಿಂತನೆಗಳು ಪ್ರತಿಫಲಿಸಬೇಕು. ಗಾಂಧೀಜಿ ಸಾರ್ವಕಾಲಿಕ ಹಾಗೂ ಪ್ರತಿದಿನವೂ ಸತ್ಯವಾಗಿರಬೇಕು.

ಗಾಂಧಿ ಮೌಲ್ಯಗಳ ನಡುವಿನ ಮೌನ
ಈ ನೆಲೆಯಲ್ಲಿ ಸಾಹಿತಿ, ಚಿಂತಕ  ಅರವಿಂದ ಚೊಕ್ಕಾಡಿ ಅವರ ಗಾಂಧಿ ಮೌಲ್ಯಗಳ ನಡುವಿನ ಮೌನ ಪುಸ್ತಕದಿಂದ ಆಯ್ದ ಭಾಗಗಳನ್ನು ಪ್ರತಿದಿನವೂ ನಾವು ಪ್ರಕಟಿಸುತ್ತೇವೆ. ಗಾಂಧೀ ಚಿಂತನೆಯನ್ನು ಮುಂದಿನ ಪೀಳಿಗೆಗೆ “ಕನೆಕ್ಟ್”‌ ಮಾಡುವ ಅರವಿಂದ ಚೊಕ್ಕಾಡಿ ಅವರ ಚಿಂತನೆ ಅಗತ್ಯವಾಗಿ ಸಾಕಾರ ಆಗಬೇಕಾಗಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವಿಶ್ವ ಪರಿಸರ ದಿನಾಚರಣೆ | ಪ್ರಧಾನಿ ನರೇಂದ್ರ ಮೋದಿ ಭಾಗಿ  | 700 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅರಣ್ಯೀಕರಣ ಯೋಜನೆಗೆ ಚಾಲನೆ |

ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿಯ ಭಗವಾನ್…

4 hours ago

ವಿಶ್ವ ಪರಿಸರ ದಿನ | ರಾಜ್ಯದೆಲ್ಲೆಡೆ ಪ್ಲಾಸ್ಟಿಕ್ ಮುಕ್ತ ಅಭಿಯಾನ

ವಿಶ್ವ ಪರಿಸರ ದಿನ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…

4 hours ago

ರಾಷ್ಟ್ರಪತಿಗಳೇ ಟೀಕಿಸಿದ ಮೇಲೆ….?

ನಮ್ಮ ದೇಶದ ನ್ಯಾಯವಾದಿಗಳ ವಲಯದಲ್ಲಿಯೇ ವರ್ಮಾರಿಗೆ ವರ್ಗಾವಣೆ ಶಿಕ್ಷೆ ಮಾತ್ರ ನೀಡಿದ್ದು ಸಮಾಧಾನಕರವೆನ್ನಿಸಿರಲಿಲ್ಲ.…

4 hours ago

ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ

"ತಾಯಿಯ ಹೆಸರಲ್ಲಿ ಒಂದು ಸಸಿ"-2.0 ಅಭಿಯಾನದಡಿ 10 ಕೋಟಿ ಗಿಡಗಳನ್ನು ನೆಡುವ ಗುರಿ…

18 hours ago

ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

18 hours ago

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

2 days ago