Advertisement
ಅನುಕ್ರಮ

#ನಮ್ಮೊಳಗಿನಗಾಂಧಿ | ಗಾಂಧಿ ಎಂದರೆ ಅದು ವ್ಯಕ್ತಿಯಲ್ಲ … ಅದೊಂದು ಚಿಂತನೆ | ನಮ್ಮೊಳಗಿನ ಗಾಂಧಿ ಈಗ ಎದ್ದು ಬರಲು ಸಮಯ |

Share

ಗಾಂಧಿ ಜಯಂತಿ. ಇದು ವ್ಯಕ್ತಿಯ ಆರಾಧನೆಯಲ್ಲ, ಇದೊಂದು ಚಿಂತನೆಯ ಆರಾಧನೆ. ಈ ಚಿಂತನೆ ಸಾರ್ವಕಾಲಿಕ ಸತ್ಯ.

ಈ ದೇಶದಲ್ಲಿ  ಮಹಾನ್‌ ರಾಷ್ಟ್ರಪುರುಷ ಹುಟ್ಟಿದ್ದು ಮಾತ್ರವಲ್ಲ ಇಡೀ ಜಗತ್ತಿಗೆ ಸತ್ಯ, ಧರ್ಮ, ನ್ಯಾಯದ ಸಂದೇಶವನ್ನು ಸಾರಿ ರಾಷ್ಟ್ರಪಿತ ಎನಿಸಿಕೊಂಡ ಮಹಾನ್‌ ಚೇತನ. ಹೀಗಾಗಿಯೇ ಭಾರತ ಸರ್ವಶ್ರೇಷ್ಟ ಎನಿಸಿಕೊಳ್ಳಲು ಇಂತಹ ಚಿಂತನೆಗಳೂ ಒಂದು ಕಾರಣ. ಇಂದು ಉಳಿದಿರುವುದು  ಹಾಗೂ ಮುಂದೆ ಉಳಿಯುವುದು ಕೂಡಾ ಆ ಚಿಂತನೆ ಮಾತ್ರಾ. ವ್ಯಕ್ತಿ ಕೇಂದ್ರಿತವಾದ ಯಾವ ಆಚರಣೆಗಳೂ, ಯಾವ ದಿನಗಳು, ಯಾವ ಸಂಗತಿಗಳು ತಾತ್ಕಾಲಿಕ. ಈ ಚಿಂತನೆಯ ಆಚರಣೆಗಳು ಶಾಶ್ವತ. ಹೀಗಾಗಿಯೇ ಗಾಂಧೀಜಿ ಚಿಂತನೆ ಸಾರ್ವಕಾಲಿಕ ಸತ್ಯ. ಈ ಚಿಂತನೆ ಇಂದಿನ ದಿನ ಹೆಚ್ಚು ಪ್ರಸ್ತುತವಾಗಿದೆ.

ಸ್ವಚ್ಛತೆ, ಅಹಿಂಸೆ ಮೊದಲಾದವುಗಳು ಇಂದೂ ನೆನಪಾಗುತ್ತವೆ. ಗಾಂಧಿಯವರಿಗೆ, ಸತ್ಯ ಹಾಗೂ ಅಹಿಂಸೆಗಳು ಪರಂಪರೆಯಿಂದ ಬಂದ ವಿಷಯ ಆಗಿರಲಿಲ್ಲ, ಅದು ಆಚರಣೆಯ ದಾರಿಯಾಗಿತ್ತು. ಹಾಗಾಗಿಯೇ ಅದು ಈ ಮಣ್ಣಿನಲ್ಲೂ ನೆಲೆಯಾಯಿತು. ಈ ಮೌಲ್ಯಗಳ ಅನುಸರಣೆಯೇ ಅವರಿಗೆ ಒಂದು ನೆಲೆಯಲ್ಲಿ ಅಧ್ಯಾತ್ಮಿಕ ಸಾಧನೆ ಹಾಗೂ ಇನ್ನೊಂದು ನೆಲೆಯಲ್ಲಿ ರಾಜಕೀಯ ಕ್ರಿಯೆ ಆಗಿತ್ತು. ಗಾಂಧೀ ಚಿಂತನೆಗಳೆಲ್ಲವೂ ಹಾಗೆಯೇ. ಯಾವ ಕ್ಷೇತ್ರದಲ್ಲಿ ನೋಡಿದರೂ ಗಾಂಧಿ ಚಿಂತನೆ ಎದ್ದು ಕಾಣುತ್ತದೆ.

ಗಾಂಧಿವಾದವನ್ನು ಹೀಗೇ ಸುಮ್ಮನೆ ಮಾತನಾಡುವುದರಲ್ಲಿ ಅರ್ಥವಿಲ್ಲ, ಅದು ಆಚರಣೆಯ ಮೂಲಕ ಜಾರಿಯಾಗಬೇಕು. ಗಾಂಧೀ ಚಿಂತನೆಯನ್ನು ಹೆಚ್ಚು ತಿಳಿಯುವ ಮೂಲಕ ಇನ್ನಷ್ಟು ಹತ್ತಿರವಾಗಬೇಕು. ಏಕೆಂದರೆ ಪ್ರಸ್ತುತ ಕಾಲಘಟ್ಟದ ಅಶಾಂತಿಯ ವಾತಾವರಣದಲ್ಲಿ ಪ್ರತೀ ವ್ಯಕ್ತಿಗೂ ಈ ಚಿಂತನೆಯ ಅವಶ್ಯಕತೆ ಇದೆ. ಸ್ವಾವಲಂಬನೆಯ ಹಾದಿ ಬೇಕಾಗಿದೆ, ಸಾತ್ವಿಕ ಹೋರಾಟದ ದಾರಿ ಅಗತ್ಯವಿದೆ. ಸ್ವಾಭಿಮಾನದ ಕಿಚ್ಚು ಬೇಕಾಗಿದೆ. ಹೀಗಾಗಿ ಕ್ಷುಲ್ಲಕ ರಾಜಕೀಯ ಬದಿಗಿಟ್ಟು ಪ್ರೀತಿ, ಶಾಂತಿ, ಅಹಿಂಸೆ, ಸತ್ಯಗಳೆಡೆಗಿನ ನಮ್ಮ ಬದ್ಧತೆಯ ಬದುಕು ಗಟ್ಟಿಯಾಗಬೇಕು, ಅನುದಿನವೂ ನಮ್ಮ ಸಣ್ಣ ಸಣ್ಣ ಕ್ರಿಯೆಗಳಲ್ಲೂ ಈ ಚಿಂತನೆಗಳು ಪ್ರತಿಫಲಿಸಬೇಕು. ಗಾಂಧೀಜಿ ಸಾರ್ವಕಾಲಿಕ ಹಾಗೂ ಪ್ರತಿದಿನವೂ ಸತ್ಯವಾಗಿರಬೇಕು.

ಗಾಂಧಿ ಮೌಲ್ಯಗಳ ನಡುವಿನ ಮೌನ
ಈ ನೆಲೆಯಲ್ಲಿ ಸಾಹಿತಿ, ಚಿಂತಕ  ಅರವಿಂದ ಚೊಕ್ಕಾಡಿ ಅವರ ಗಾಂಧಿ ಮೌಲ್ಯಗಳ ನಡುವಿನ ಮೌನ ಪುಸ್ತಕದಿಂದ ಆಯ್ದ ಭಾಗಗಳನ್ನು ಪ್ರತಿದಿನವೂ ನಾವು ಪ್ರಕಟಿಸುತ್ತೇವೆ. ಗಾಂಧೀ ಚಿಂತನೆಯನ್ನು ಮುಂದಿನ ಪೀಳಿಗೆಗೆ “ಕನೆಕ್ಟ್”‌ ಮಾಡುವ ಅರವಿಂದ ಚೊಕ್ಕಾಡಿ ಅವರ ಚಿಂತನೆ ಅಗತ್ಯವಾಗಿ ಸಾಕಾರ ಆಗಬೇಕಾಗಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

1 hour ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

6 hours ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

11 hours ago

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

23 hours ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

1 day ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

1 day ago