ದುಪ್ಪಟ್ಟು ದರ ಕೊಟ್ಟು ಖರೀದಿಸುವ ರಾಸುಗಳಿಗೆ ರೈತರು ತಪ್ಪದೇ ಜೀವ ವಿಮೆ ಮಾಡಿಸಬೇಕೆಂದು ಹಾಲು ಒಕ್ಕೂಟದ ನಿರ್ದೇಶಕ ಎನ್.ಹನುಮೇಶ್ ತಿಳಿಸಿದರು.
ಕೋಲಾರ –ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಶ್ರೀನಿವಾಸಪುರ ಶಿಬಿರ ಕಚೇರಿ ಅವರಿಂದ ಏರ್ಪಡಿಸಿದ್ದ ಸಹಕಾರ ಸಂಘಗಳಲ್ಲಿನ ನಿವೃತ್ತರಿಗೆ ಪ್ರೋತ್ಸಾಹಧನ ಮತ್ತು ಮೃತ ರಾಸುಗಳ ಪಾಲಕರಿಗೆ ಜೀವ ವಿಮಾ ಚೆಕ್ ವಿತರಿಸಿ ಮಾತನಾಡಿದರು. ಮಳೆಯಾಶ್ರಿತ ಕೃಷಿ ಬೆಳೆಗಳನ್ನು ನಂಬಿದರೆ ಜೀವನ ಮಾಡುವುದು ಕಷ್ಟಕರ. ನೀರಾವರಿ ಇಲ್ಲದೇ ಕಷ್ಟವಾಗುತ್ತಿರುವುದರಿಂದ ಹೈನೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು. ಪ್ರಗತಿ ಹೊಂದಿರುವ ಸಹಕಾರ ಸಂಘಗಳ ಹಾಲು ಡೇರಿಗಳಿಗೆ ಗುಣಮಟ್ಟದ ಹಾಲು ಹಾಕುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು. ಪ್ರತಿ ಹಸುಗಳಿಗೆ ವಿಮಾ ಸೌಲಭ್ಯ ಮಾಡಿಸಬೇಕು. ಒಂದು ವೇಳೆ ಅನಾರೋಗ್ಯದಿಂದ ಹಸುಗಳು ಮೃತಪಟ್ಟರೆ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತೀಯ…
ಹೊಲದಲ್ಲಿ ಇರುವ ಪೈರನ್ನು ಗರ್ಭವತಿ ಎಂದು ಕಲ್ಪಿಸಿಕೊಂಡು ಈ ವಿಶಿಷ್ಟ ಆಚರಣೆ ಭೂಮಿ…
ಐದು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ಅತಿಯಾದ ಮಳೆಯಿಂದ ಫಸಲು ನಾಶವಾಗಿದೆ ಎನ್ನುತ್ತಾರೆ ರೈತ…
ಭಾರತದಲ್ಲಿ ಮೊಬೈಲ್ ಸಂಪರ್ಕಗಳು 904 ಮಿಲಿಯನ್ನಿಂದ 1.16 ಬಿಲಿಯನ್ಗೆ ಏರಿದೆ, ಬ್ರಾಡ್ಬ್ಯಾಂಡ್ ಬಳಕೆದಾರರು…
ಹೋಬಳಿಗೊಂದು ವಸತಿ ಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. …
ಕೊಡಗು ಜಿಲ್ಲೆಯ ತಲಕಾವೇರಿ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 7.40 ಸುಮಾರಿಗೆ ಸರಿಯಾಗಿ ಕಾವೇರಿ…