ಜಗತ್ತಿನಲ್ಲಿ ನೀರಿನ ಸಂಕಷ್ಟ ಯಾಕೆ ಮೌನದಲ್ಲಿದೆ?

February 8, 2026
5:50 AM
Global Risks Report 2026 ವರದಿ ಹವಾಮಾನ, ಸಂಘರ್ಷ ಮತ್ತು ಆರ್ಥಿಕ ಅಸ್ಥಿರತೆಯನ್ನು ಜಾಗತಿಕ ಅಪಾಯಗಳಾಗಿ ಗುರುತಿಸಿದರೂ, ನೀರು ಮತ್ತು ಪರಿಸರ ಸಂಕಷ್ಟಗಳತ್ತ ರಾಜಕೀಯ ಹಾಗೂ ನೀತಿ ನಿರ್ಧಾರಕರು ಅಗತ್ಯ ಮಟ್ಟದ ಗಮನ ಹರಿಸುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ.

ನೀರು ಮತ್ತು ಪರಿಸರ ಸಮಸ್ಯೆಗಳು ನಾಳೆಯಲ್ಲ, ಮುಂದಿನ ಜಾಗತಿಕ ಸಂಕಷ್ಟಗಳಿಗೆ ಕಾರಣವಾಗಲಿವೆ ಎಂದು World Economic Forum ಬಿಡುಗಡೆ ಮಾಡಿದ Global Risks Report 2026 ಎಚ್ಚರಿಸಿದೆ.  ಜಗತ್ತಿನ ಮುಂದಿನ ದಶಕದ ಅಪಾಯಗಳ ಸ್ಪಷ್ಟ ಸೂಚನೆಯನ್ನು ಇದು ಒದಗಿಸುತ್ತದೆ. ಆದರೆ ಈ ವರದಿಯಲ್ಲಿ ಕಾಣಿಸುವ ಅತಿದೊಡ್ಡ ವೈರುಧ್ಯವೇನೆಂದರೆ, ಜಲ ಮತ್ತು ಪರಿಸರ ಸಂಕಷ್ಟಗಳು ಅತಿದೊಡ್ಡ ದೀರ್ಘಕಾಲೀನ ಅಪಾಯಗಳಾಗಿದ್ದರೂ, ತಕ್ಷಣದ ರಾಜಕೀಯ ಚರ್ಚೆಗಳಲ್ಲಿ ಅವು ಹಿನ್ನಲೆಯಾಗಿಯೇ  ಉಳಿದಿವೆ.

ವರದಿ ಪ್ರಕಾರ, ಜಗತ್ತು ಈಗ “Age of Competition” ಎಂಬ ಹೊಸ ಹಂತಕ್ಕೆ ಪ್ರವೇಶಿಸಿದೆ. ಭೌಗೋಳಿಕ ಸಂಘರ್ಷಗಳು, ವ್ಯಾಪಾರ ಯುದ್ಧಗಳು ಮತ್ತು ಆರ್ಥಿಕ ಅಸ್ಥಿರತೆಗಳು ರಾಷ್ಟ್ರಗಳ ತಕ್ಷಣದ ಆದ್ಯತೆಗಳಾಗಿವೆ. ಆದರೆ ಇದೇ ಸಂಘರ್ಷಗಳ ಹಿಂದೆ ನಿಂತಿರುವ ಮೂಲಭೂತ ಕಾರಣಗಳಲ್ಲಿ ಒಂದು — ಸಂಪನ್ಮೂಲಗಳ, ವಿಶೇಷವಾಗಿ ನೀರಿನ ಕೊರತೆ — ಇನ್ನೂ ಗಂಭೀರವಾಗಿ ಚರ್ಚೆಗೆ ಬಂದಿಲ್ಲ.

ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ ಆಹಾರ ಭದ್ರತೆ ಕುಸಿಯುತ್ತಿದೆ, ಗ್ರಾಮೀಣ ಜೀವನ ಅಸ್ಥಿರಗೊಳ್ಳುತ್ತಿದೆ ಮತ್ತು ವಲಸೆ ಹೆಚ್ಚುತ್ತಿದೆ. ಇದು ಕೇವಲ ಪರಿಸರ ಸಮಸ್ಯೆಯಲ್ಲ; ಇದು ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ಬೀಜ. Global Risks Report ಈ ಅಂಶವನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತದೆ, ಆದರೆ ತಕ್ಷಣದ ಅಪಾಯಗಳ ಪಟ್ಟಿಯಲ್ಲಿ ನೀರು ಮತ್ತೆ ಹಿಂದಕ್ಕೆ ಸರಿದಿದೆ.

ಅತಿಯಾದ ಮಳೆ, ಬರ, ಭೂಗರ್ಭ ಜಲ ಕುಸಿತ, ಜೀವವೈವಿಧ್ಯ ನಾಶ — ಇವೆಲ್ಲವೂ 2036ರ ಅಪಾಯಗಳೆಂದು ವರದಿ ಹೇಳುತ್ತದೆ. ಆದರೆ ವಾಸ್ತವದಲ್ಲಿ, ಈ ಅಪಾಯಗಳು ಈಗಲೇ ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಆರಂಭವಾಗಿದೆ. ಬೇರೆ ಬೇರೆ ಕಡೆ ಬೇರೆ ಬೇರೆ ಮಾದರಿಯಲ್ಲಿ ಕಂಡುಬರುತ್ತಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ರೈತರ ಸಂಕಷ್ಟ, ಬೆಳೆ ನಷ್ಟ ಮತ್ತು ಆಹಾರ ಬೆಲೆ ಏರಿಕೆಇದೆಲ್ಲಾ ಪರಿಸರದ ಕಾರಣದಿಂದಲೇ ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Global Risks Report 2026 ನಮ್ಮ ಮುಂದೆ ಒಂದು ಪ್ರಶ್ನೆಯನ್ನು ಇಟ್ಟಿದೆ, ಆರ್ಥಿಕ ಬೆಳವಣಿಗೆ ಮತ್ತು ಭೌಗೋಳಿಕ ಶಕ್ತಿಯ ಪೈಪೋಟಿಯಲ್ಲಿ ನಾವು ನೀರು ಮತ್ತು ಪರಿಸರವನ್ನು ಕಡೆಗಣಿಸುತ್ತಿದ್ದೇವೇ?.  ನೀರಿನ ನಿರ್ವಹಣೆ, ಹವಾಮಾನ ಮತ್ತು ಪರಿಸರ ಪುನಶ್ಚೇತನಕ್ಕೆ ರಾಜಕೀಯ ಬದ್ಧತೆ ಇಲ್ಲದೆ ಹೋದರೆ, ಮುಂದಿನ ದಶಕದಲ್ಲಿ ಸಂಘರ್ಷಗಳು ಇನ್ನಷ್ಟು ಗಾಢವಾಗಲಿವೆ ಎಂಬ ಎಚ್ಚರಿಕೆಯನ್ನು ಈ ವರದಿ ನೀಡಿದೆ.

ಭಾರತದಂತಹ ಕೃಷಿ ಪ್ರಧಾನ ದೇಶಕ್ಕೆ ಈ ವರದಿ ಸ್ಪಷ್ಟ ಸಂದೇಶ ನೀಡುತ್ತದೆ. ನೀರು -ಆಹಾರ ಭದ್ರತೆ, ಆಹಾರ ಭದ್ರತೆ-ಸಾಮಾಜಿಕ ಸ್ಥಿರತೆ, ಸಾಮಾಜಿಕ ಸ್ಥಿರತೆ ಇಲ್ಲದೆ ಆರ್ಥಿಕ ಬೆಳವಣಿಗೆ ಅಸಾಧ್ಯ. ಹೀಗಾಗಿ ನೀತಿ ರೂಪಿಸುವವರು ಜಲ ಮತ್ತು ಪರಿಸರ ಸಮಸ್ಯೆಗಳನ್ನು ಪರಿಸರ ಸಚಿವಾಲಯದ ಕಡತಗಳಿಗೆ ಮಾತ್ರ ಸೀಮಿತಗೊಳಿಸದೇ, ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಯೋಜನೆಯ ಕೇಂದ್ರಬಿಂದುವಾಗಿಸಬೇಕಾಗಿದೆ.

ಇದನ್ನೂ ಓದಿ…

ಹಾಲಿನ ಹೆಸರಲ್ಲಿ ಕಲಬೆರಕೆ..? ಕೋಲಾರದಲ್ಲಿ ದಾಳಿ | 1,120 ಲೀಟರ್ ಹಾಲು ಜಪ್ತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!
September 1, 2026
10:37 PM
by: ದ ರೂರಲ್ ಮಿರರ್.ಕಾಂ
ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ
September 1, 2026
3:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?
September 1, 2026
3:10 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ
September 1, 2026
7:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror