ಆಡು ಬಡವರ ಹಸು. ಆಡು ಸಾಕಾಣಿಕೆ ಸಣ್ಣ ರೈತರ ಜೀವನೋಪಾಯಕ್ಕೆ ಸೂಕ್ತವಾದ ಉದ್ದಿಮೆ, ಹಸುವನ್ನು ಕೊಳ್ಳಲಾಗದ ಒಬ್ಬ ಬಡ ರೈತನ ಪಾಲಿಗೆ ಆಡು ಕಾಮಧೇನು. ಆಡಿನ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದೆ.
ದನ, ಎಮ್ಮೆ , ಆಡು ಇವುಗಳೆಲ್ಲ ನಮ್ಮ ಆರೋಗ್ಯಕ್ಕೆ ಅಪಾರವಾದ ಕೊಡುಗೆ ನೀಡುವ ಪ್ರಾಣಿಗಳು. ಆದರಲ್ಲೂ ಆಡಿನ ಹಾಲು ತುಂಬಾ ಪೌಷ್ಠಿಕತೆ ಉಳ್ಳದ್ದು. ಇದು ಒಂದು ಸಮತೋಲನ ಆಹಾರದ ಮೂಲ ಕೂಡ ಹೌದು. ತಾಯಿ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳು ಆಡಿನ ಹಾಲಿನಲ್ಲಿರುತ್ತೆ. ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.
ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ, ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.
ಪೌಷ್ಟಿಕತೆ:
ಆಡಿನ ಹಾಲು ಹೆಚ್ಚು ಪೌಷ್ಟಿಕತೆಯಿಂದ ಕೂಡಿದ್ದು ಎಲ್ಲ ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಖನಿಜಗಳು ಸರಿ ಸುಮಾರು ಆಕಳ ಹಾಲಿನಲ್ಲಿರುವ ಪ್ರಮಾಣದಷ್ಟೇ ಇರುತ್ತದೆ.
ಆಡಿನ ಹಾಲಿನಲ್ಲಿರುವ ಪೋಶಕಾಂಶಗಳು (100 ಎಂ. ಎಲ್.)
ಪೋಶಕಾಂಶಗಳು ಪ್ರಮಾಣ
ಸಸಾರಜನಕ 3.3 ಗ್ರಾಂ
ಕೊಬ್ಬು 4.5 ಗ್ರಾಂ
ಖನಿಜಾಂಶ 0.8 ಗ್ರಾಂ
ಕಾರ್ಬೋಹೈಡ್ರೇಟ್ 4.6 ಗ್ರಾಂ
ಶಕ್ತಿ 72 ಕಿ. ಕ್ಯಾಲೋರಿ
ಕ್ಯಾಲ್ಸಿಯಂ 170 ಮಿ. ಗ್ರಾಂ
ಫಾಸ್ಪರಸ್ 120 ಮಿ. ಗ್ರಾಂ
ಕಬ್ಬಿಣ 0.3 ಮಿ. ಗ್ರಾಂ
ಬೀಟಾ ಕೆರೋಟಿನ್ 55 ಗ್ರಾಂ
ವಿಟಾಮಿನ್ ಸಿ 1 ಮಿ. ಗ್ರಾಂ
ಸೋಡಿಯಂ 11 ಮಿ. ಗ್ರಾಂ
ಪೋಟ್ಯಾಶಿಯಂ 110 ಮಿ. ಗ್ರಾಂ
ಹಾಲಿನಲ್ಲಿರುವ ಕೊಬ್ಬಿನ ಕಣಗಳು ಚಿಕ್ಕದಾಗಿದ್ದು ಹಾಲಿನಲ್ಲಿ ಸಮನಾಗಿ ಬೆರೆತ ಕಾರಣ ಇತರ ಹಾಲಿನ ಹಾಗೆ ಈ ಹಾಲು ಕೆನೆ ಕಟ್ಟುವುದಿಲ್ಲ, ಆದರೆ ಆಡಿನ ಹಾಲಿನಿಂದ ಖೋವಾ, ಪನೀರ್, ತುಪ್ಪ, ಚೀಸ್ ಇತ್ಯಾದಿ ಪದಾರ್ಥಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲದೇ ಅವುಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಚಿಕ್ಕ ಮಕ್ಕಳಿಗೆ ಆಡಿನ ಹಾಲನ್ನು ತಾಯಿ ಹಾಲಿಗೆ ಪರ್ಯಾಯವಾಗಿ ಬಳಸಬಹುದು.
ಈ ಹಾಲು ಜೀರ್ಣಶಕ್ತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ವಾಂತಿ ಭೇದಿ, ಉಸಿರಾಟದ ತೊಂದರೆಗಳಂತಹ ಆರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆ ಮಾಡುವುದರ ಜೊತೆಗೆ ಹೃದಯ ರೊಗ, ಮೂರ್ಛೆರೋಗ, ಪಿತ್ತಕೋಶದ ಹರಳು ಮತ್ತು ಇತರೆ ರೋಗಗಳ ಪ್ರಮಾಣ ಕಡಿಮೆ ಮಾಡುತ್ತದೆ. ಆಡಿನ ಹಾಲಿನ ದಿನನಿತ್ಯದ ಬಳಕೆಯಿಂದ ದೇಹದ ತೂಕ ಹೆಚ್ಚುತ್ತದೆ.
ಅಸ್ಥಿಪಂಜರದಲ್ಲಿ ಖನಿಜಾಂಶಗಳ ಶೇಖರಣೆ, ರಕ್ತದ ಹಿಮೋಗ್ಲೋಬಿನ್ ಅಂಶ ಕೂಡ ಹೆಚ್ಚಾಗುತ್ತದೆ. ಆಡಿನ ಹಾಲು ಪೌಷ್ಠಿಕಾಂಶಗಳಲ್ಲಿ ತಾಯಿಯ ಎದೆ ಹಾಲಿಗೆ ತುಂಬ ಹತ್ತಿರವಾಗಿದೆ.
ಸುಳ್ಯದ ವಳಲಂಬೆಯಲ್ಲಿ ಏಪ್ರಿಲ್ 19ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಿಂದ…
ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…
ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…
ಈ ವರ್ಷ ಬೇಸಿಗೆ ಬಿತ್ತನೆ 64 ಲಕ್ಷ ಹೆಕ್ಟೇರ್ ದಾಟಿದ್ದು, ಕಳೆದ ವರ್ಷಕ್ಕಿಂತ…
ಮುಂದಿನ ಐದು ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ…
ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಏಪ್ರಿಲ್ 18ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ.…