Advertisement
MIRROR FOCUS

ದೇಶದಾದ್ಯಂತ ಕಾಳುಮೆಣಸಿಗೆ ಬಂಗಾರದ ಬೆಲೆ |

Share

ವರ್ಷವಿಡೀ ತಾವು ಬೆಳೆದ ಬೆಲೆ(Rate) ಕೈಗೆ ಬರಲು ರೈತರು(Farmer) ಇನ್ನಿಲ್ಲದ ಕಷ್ಟ ಪಡುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಫಸಲು(Crop) ಕೈಗೆ ಬಂದಾಗ ಅದಕ್ಕೆ ತಕ್ಕ ರೇಟು ಸಿಗುತ್ತದೆ. ಈ ಬಾರಿ ಮೆಣಸಿನ ಕಾಳು ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ದಿನದಿಂದ ದಿನಕ್ಕೆ ದೇಶಿಯ ಮಾರುಕಟ್ಟೆಯಲ್ಲಿ(Market) ಕರಿ ಮೆಣಸಿನ (Black Pepper) ಬೆಲೆ(Price) ಗಗನಕ್ಕೇರುತ್ತಿದೆ. ಭಾರತದೆಲ್ಲೆಡೆ ಕಾಳುಮೆಣಸಿನ ದರ ಗಗನಕ್ಕೆ ಜಿಗಿದಿದೆ. ಚಿಕ್ಕಮಗಳೂರು(Chikkamagaluru) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಂತೂ ಧಾರಣೆಯು ಕ್ವಿಂಟಾಲ್‌ಗೆ 88,000 ರೂಪಾಯಿ ಆಗಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಲೆನಾಡ ಚಿಕ್ಕಮಗಳೂರು ಭಾಗಕ್ಕೆ ಶಿರಸಿ ಹಾಗೂ ಸುತ್ತಮುತ್ತಲಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

Advertisement
Advertisement

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಘ್ನೇಶ್ ಭಟ್ ಹೊಸ್ತೋಟ ಅವರು ತಮ್ಮ ಅಡಿಕೆ ತೋಟದಲ್ಲಿ ಕಳೆದ 15 ವರ್ಷದಿಂದ ಕಾಳುಮೆಣಸಿನ ಕೃಷಿ ಮಾಡುತ್ತಿದ್ದಾರೆ. ಖ್ಯಾತ ಕೃಷಿ ತಜ್ಞ ವಿಎಂ ಹೆಗಡೆಯವರ ಸಲಹೆಯೊಂದಿಗೆ ಕೃಷಿ ಮಾಡುತ್ತಿರುವ ಇವರು ಬಾರೆಯ ಹೊಸ್ತೋಟದಲ್ಲಿ ತಮ್ಮ‌ ಮನೆ ಬಳಿ ಉಪಬೆಳೆಯಾಗಿ ಕಾಳುಮೆಣಸನ್ನು ಬೆಳೆದಿದ್ದಾರೆ.

Advertisement

ವಿವಿಧ ತಳಿಯ ಕಾಳುಮೆಣಸು
8-10 ವಿಧದ ಕಾಳುಮೆಣಸು ಇವರಲ್ಲಿ ಇವೆ ಅದರಲ್ಲಿ ಪಣಿಯೂರು-1, ಪಣಿಯೂರು-2, ನೀಲಮುಂಡಿ, ಶ್ರೀಕರ, ಶುಭಕರ ಸೇರಿದಂತೆ ಹಲವು ವಿಧದ ಕಾಳುಮೆಣಸು ಇವರಲ್ಲಿವೆ, ಕೇವಲ 1000 ಬಳ್ಳಿಗಳನ್ನು ಹೊಂದಿರುವ ಇವರು ಪ್ರತೀ ವರ್ಷ ಬರೊಬ್ಬರಿ 2.5 ಟನ್ ನಷ್ಟು ಇಳುವರಿಯನ್ನು ಪಡೆಯುತ್ತಿದ್ದಾರೆ. ಜೂನ್ ತಿಂಗಳಲ್ಲಿ ಟ್ರೆಂಚಿಂಗ್ ಮಾಡಿ ಲೈಟೆಕ್ಸ್ ಹಾಕಿ ನಂತರ ಪ್ಲ್ಯಾಸ್ಟಿಕ್ ಹೊದಿಕೆ ಹಾಕಿಡುವ ಕಾರಣ ಭಾರೀ ಮಳೆಯಲ್ಲೂ ಭರ್ಜರಿ ಫಸಲು ದೊರಕುತ್ತಿದೆ. 6 ಲಕ್ಷ ಖರ್ಚಿಗೆ ಸದ್ಯದ ಮಟ್ಟಿಗೆ 15 ರಿಂದ 20 ಲಕ್ಷ ವಹಿವಾಟು ನಡೆಸುವ ನಿರೀಕ್ಷೆಯಲ್ಲಿದ್ದಾರೆ. ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ದೇಶದಲ್ಲಿ ಕಾಳುಮೆಣಸಿನ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೊಸ ಪೀಳಿಗೆಯ ಆಹಾರ ಖಾದ್ಯಗಳಲ್ಲಿ ಕಾಳುಮೆಣಸು ಪ್ರಮುಖ ಪಾತ್ರ ವಹಿಸಿದೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ಜನರ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು | ಕೇರಳ ಹೈಕೋರ್ಟ್‌ ಅಭಿಪ್ರಾಯ |

ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು ಪ್ರಮುಖವಾಗಿದ್ದರೂ, ನಾಗರಿಕರ ದೈನಂದಿನ ಜೀವನದ ಮೇಲೆ ಪ್ರತಿಕೂಲ…

7 hours ago

ಕರಾವಳಿ ಜಿಲ್ಲೆಗಳಲ್ಲಿ ಈ ವಾರ ಉತ್ತಮ ಮಳೆ ಹಾಗೂ ಗಾಳಿಯ ನಿರೀಕ್ಷೆ |

ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ

9 hours ago

ಪುತ್ತೂರಿನಲ್ಲಿ ತಾಳಮದ್ದಳೆ ಸಪ್ತಾಹ ಉದ್ಘಾಟನೆ | ಜು.7 ಸಮಾರೋಪ |

ಪುತ್ತೂರಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆಗೊಂಡಿದೆ.

9 hours ago

ಅಡಿಕೆ-ಕಾಳುಮೆಣಸು ಅಕ್ರಮ ಆಮದು ತಡೆಗೆ ಒತ್ತಾಯ | ಅಡಿಕೆ ಮೇಲಿನ ಜಿಎಸ್‌ಟಿ ಇಳಿಕೆಗೆ ಕೇಂದ್ರ ಹಣಕಾಸು ಸಚಿವರಿಗೆ ಕ್ಯಾಂಪ್ಕೋ ಅಧ್ಯಕ್ಷರಿಂದ ಮನವಿ

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ…

10 hours ago

ಹವಾಮಾನ ವರದಿ | 02.07.2024 | ರಾಜ್ಯದ ಕೆಲವೆಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ

03.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

18 hours ago

ಮಣ್ಣು ಅಂದರೆ ಮಣ್ಣು ಅಷ್ಟೊಂದು ಮಹತ್ವ ಏಕೆ? ಎಂಬ ಪ್ರಶ್ನೆ..?

ಜಗತ್ತಿನ ಎಲ್ಲ ಜೀವಿಗಳ(creature)ಆಸ್ತಿತ್ವಕ್ಕೆ ಕಾರಣವೇ ಮಣ್ಣು(Soil).  ಆದರೆ ಅತ್ಯಂತ ಹೆಚ್ಚು ಪೆಟ್ಟು ತಿನ್ನುವ…

18 hours ago