Advertisement
MIRROR FOCUS

#Arecanut | ಅಡಿಕೆ ಬೆಳೆ ವಿಸ್ತರಣೆಯ ಚರ್ಚೆಯ ನಡುವೆ ಸಿಹಿ ಸುದ್ದಿ | ಪಾನ್ ಮಸಾಲಾ ಮಾರುಕಟ್ಟೆಯಲ್ಲಿ ಪ್ರಗತಿ | ಶೇ.5 ರಷ್ಟು ಏರಿಕೆ ನಿರೀಕ್ಷೆಯಲ್ಲಿ ಪಾನ್‌ ಮಾರುಕಟ್ಟೆ |

Share

 ಅಡಿಕೆ ಬೆಳೆ ವಿಸ್ತರಣೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಕೇವಲ ತಿಂದು ಉಗುಳಲು ಬಳಕೆಯಾಗುವ ಅಡಿಕೆಯ ಪರ್ಯಾಯ ಬಳಕೆ ತೀರಾ ಕಡಿಮೆಯಾಗಿದೆ. ಅಡಿಕೆ ತಿನ್ನಲು ಗುಣಮಟ್ಟದ ಅಡಿಕೆಯನ್ನು ಹೆಚ್ಚಾಗಿ ಅಪೇಕ್ಷೆ ಪಡುತ್ತಾರೆ. ಆದರೆ ಇದೀಗ ಸರ್ವೆ ಪ್ರಕಾರ ಶೇ.5 ರಷ್ಟು ಬೇಡಿಕೆ ಹೆಚ್ಚಲಿದೆ. ಅದರಲ್ಲೂ ಪಾನ್‌ಮಸಾಲಾ ಮಾರುಕಟ್ಟೆಯು ಮುಂದಿನ 10 ವರ್ಷಗಳಲ್ಲಿ ಶೇ.5 ರಷ್ಟು ಏರಿಕೆ ಕಾಣಲಿದೆ.

ಗ್ಲೋಬಲ್ ಇಂಡಿಯಾ ಪಾನ್ ಮಸಾಲಾ ಮಾರುಕಟ್ಟೆಯನ್ನು 2022 ರಲ್ಲಿ USD 412,143 ಕೋಟಿ  ಎಂದು ಅಂದಾಜಿಸಲಾಗಿದೆ. ಈಗ ಅದು ಮತ್ತಷ್ಟು ಬೆಳೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಮತ್ತಷ್ಟು ಏರಿಕೆಯ ನಿರೀಕ್ಷೆಯಿದೆ. 2023 ಮತ್ತು 2032 ರ ನಡುವೆ ಸರಿಸುಮಾರು 5% ನಷ್ಟು ಬೇಡಿಕೆ ಹೆಚ್ಚಲಿದೆ.

ಪಾನ್ ಮಸಾಲವನ್ನು ಸಾಮಾನ್ಯವಾಗಿ ಊಟದ ನಂತರದ ಜೀರ್ಣಕಾರಿ ಕ್ರಿಯೆ ಹೆಚ್ಚಿಸಲು ಬಳಕೆ ಮಾಡುತ್ತಾರೆ. ಬಾಯಿಯ ಸುಗಂಧಕ್ಕಾಗಿ ಅಥವಾ  ರೀಫ್ರೆಶ್‌ ಗಾಗಿ ಬಳಕೆ ಮಾಡುತ್ತಾರೆ. ಇದರಲ್ಲಿ ಇತರ ವಸ್ತುಗಳು ಇದ್ದರೂ ಅಡಿಕೆ ಹುಡಿಯೇ ಪ್ರಧಾನ ವಸ್ತು.ಪಾನ್ ಮಸಾಲಾದಲ್ಲಿ ಸಾಮಾನ್ಯವಾಗಿ ಅಡಿಕೆ, ಏಲಕ್ಕಿ, ಸುಣ್ಣ,  ವಿವಿಧ ಸುವಾಸನೆಯ ಹುಡಿಗಳು ಒಳಗೊಂಡಿರುತ್ತವೆ.  ಕಂಡುಬರುತ್ತವೆ.

ತಂಬಾಕು ಬಳಕೆ ಮಾಡುವವರು ಈಚೆಗೆ ಹೆಚ್ಚಾಗಿ ತಂಬಾಕಿನ ಬದಲಾಗಿ ಹಾನಿಕಾರಕವಲ್ಲದ ಅಡಿಕೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಅದಕ್ಕಾಗಿ ಅನೇಕರು ಪಾನ್‌ ಮಸಾಲಾ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದಲ್ಲಿನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಪಾನ್‌ ಮಸಾಲಾ ಬಳಕೆ ಮಾಡುತ್ತಾರೆ.

ಮಾರುಕಟ್ಟೆ ಸರ್ವೆ ಪ್ರಕಾರ, ಪಾನ್ ಮಸಾಲಾ ಮಾರುಕಟ್ಟೆಯು ಮುಂದಿನ 10 ವರ್ಷಗಳಲ್ಲಿ ಸುಮಾರು 5% ರಷ್ಟು ಹೆಚ್ಚು ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪಾನ್ ಮಸಾಲಾ ಮಾರುಕಟ್ಟೆಯ ಗಾತ್ರವು 2023 ರಲ್ಲಿ USD 4‌,12,143  ಕೋಟಿಗಳಷ್ಟು ಮೌಲ್ಯದ್ದಾಗಿದ್ದರೆ ಮತ್ತು 2032 ರ ವೇಳೆಗೆ USD 6,12,801 ಕೋಟಿಗೆ ತಲುಪುವ ನಿರೀಕ್ಷೆಯಿದೆ.

ಪಾನ್‌ಮಸಾಲಾ ಹೆಚ್ಚಾಗಿ  ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳು ಸೇರಿದಂತೆ ಭಾರತದ ಉತ್ತರ ಪ್ರದೇಶವು ಪಾನ್ ಮಸಾಲಾ ಮಾರುಕಟ್ಟೆಯಲ್ಲಿ ಹೆಚ್ಚಿನ  ಪಾಲನ್ನು ಹೊಂದಿದೆ.  ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳು  ಪಾನ್ ಮಸಾಲಾ ಮಾರುಕಟ್ಟೆಗೆ ಕೊಡುಗೆ ನೀಡುತ್ತವೆ.  ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ  ರಾಜ್ಯಗಳು  ಕಡಿಮೆ ಪಾನ್ ಮಸಾಲಾ ಬಳಕೆಯನ್ನು ಹೊಂದಿವೆ. ಇಲ್ಲಿ ಹಸಿ ಅಡಿಕೆ ಅಥವಾ ಒಣ ಅಡಿಕೆ ಬಳಕೆ ಹೆಚ್ಚಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಒಡಿಶಾದಂತಹ ಪೂರ್ವ ರಾಜ್ಯಗಳು ಪಾನ್ ಮಸಾಲಾವನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸುತ್ತವೆ.ಅಸ್ಸಾಂ, ಮಣಿಪುರ ಮತ್ತು ಮೇಘಾಲಯದಂತಹ ರಾಜ್ಯಗಳನ್ನು ಒಳಗೊಂಡಿರುವ ಈಶಾನ್ಯ ಭಾರತದಲ್ಲಿ ಪಾನ್ ಮಸಾಲಾ ಮಾರುಕಟ್ಟೆ ಬೆಳೆದಿಲ್ಲ.ಹೆಚ್ಚಾಗಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆಯನ್ನು ಪಾನ್‌ ಜೊತೆ ಸೇರಿಸಿ ಸವಿಯುತ್ತಾರೆ.

ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಪಾನ್‌ ಮಸಾಲಾ ಉದ್ಯಮವು ಶೇ.5 ರಷ್ಟು ಮಾತ್ರವೇ ವಿಸ್ತರಣೆಯಾಗುತ್ತದೆ. ಆದರೆ, ಈ ನಡುವೆ ಅಡಿಕೆ ಬೆಳೆ ವಿಸ್ತರಣೆಯಾದದ್ದು ಹಾಗೂ ಅದರ ಇಳುವರಿ ಆರಂಭವಾಗುವ ವೇಳೆ ಈಗಿನ ಮಾರುಕಟ್ಟೆಗಿಂತ ಶೇ.25 ರಷ್ಟು ಹೆಚ್ಚುವರಿಯಾಗಿ ಮಾರುಕಟ್ಟೆಯಲ್ಲಿ ಕಾಣಿಸಬಹುದು. ಸದ್ಯ ಅಡಿಕೆಗೆ ಬೇಡಿಕೆ ಇದೆ. ಮುಂದಿನ 10 ವರ್ಷಗಳಲ್ಲಿ ತಿಂದು ಉಗಿಯುವ ಅಡಿಕೆಯ ಮಾರುಕಟ್ಟೆ ಸ್ಥಿತಿಯ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತೀಯ ಮಾವಿನ ಹಣ್ಣಿಗೆ ನೇಪಾಳ ನಿಷೇಧವಿಲ್ಲ – ಸುಳ್ಳು ವರದಿಗಳಿಗೆ ಭಾರತ-ನೇಪಾಳ ಸರ್ಕಾರಗಳ ಸ್ಪಷ್ಟನೆ

ಭಾರತೀಯ ಮಾವಿನ ಹಣ್ಣಿನ ಆಮದಿಗೆ ನೇಪಾಳ ಯಾವುದೇ ನಿಷೇಧ ಹೇರಿಲ್ಲ ಎಂದು ಭಾರತ…

3 hours ago

ಮುಂದಿನ 5 ದಿನ ರಾಜ್ಯಾದ್ಯಂತ ಭಾರೀ ಮಳೆ ಎಚ್ಚರಿಕೆ- ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ

ರಾಜ್ಯದ ಹಲವೆಡೆ ಮುಂದಿನ ಐದು ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ…

6 hours ago

ಸುಲಭವಾಗಿ ಮಾಡಿ ರುಚಿಕರ ಹಲಸಿನ ಕಾಯಿ ಚಟ್ನಿ – ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್!

ಹಲಸಿನ ಕಾಯಿ, ಕಾಯಿತುರಿ ಹಾಗೂ ಜೀರಿಗೆ ಬಳಸಿ ತಯಾರಿಸುವ ಈ ಚಟ್ನಿ ಬಿಸಿ…

6 hours ago

ಅಡಿಕೆ ಕೃಷಿ ಲಾಭದಾಯಕವೇ..? – ಮೂರು ವರ್ಷದಲ್ಲಿ ಕೆಜಿಗೆ ₹34.53 ವೆಚ್ಚ ಏರಿಕೆ – ನ್ಯಾಯಸಮ್ಮತ ಬೆಲೆಗಾಗಿ ರೈತರ ಒತ್ತಾಯ

2023ರಿಂದ 2026ರವರೆಗೆ ಅಡಿಕೆ ಉತ್ಪಾದನಾ ವೆಚ್ಚ ಸುಮಾರು 27% ಏರಿಕೆಯಾಗಿದೆ. ಈ ಲೆಕ್ಕಾಚಾರದ…

15 hours ago

ಎಲ್ ನೀನೋ, ಲಾ ನೀನಾ ಮತ್ತು ಮಳೆ ಅನಿಶ್ಚಿತತೆ – ಮುಂದಿನ ಪೀಳಿಗೆಗಾಗಿ ಮಳೆನೀರು ಉಳಿಸುವುದು ಈಗಲೇ ಅನಿವಾರ್ಯ..!

ಎಲ್ ನೀನೋ ಮತ್ತು ಲಾ ನೀನಾ ಪ್ರಭಾವದಿಂದ ಮಳೆಯ ಮಾದರಿಯಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ.…

16 hours ago

ರಸ್ತೆ ಬದಿ ತ್ಯಾಜ್ಯ ಎಸೆದರೆ ಎಚ್ಚರ – ದಂಡ ಖಚಿತ | ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ₹5,000 ದಂಡ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದ ಸುಳ್ಯ ನಿವಾಸಿಗೆ ₹5,000…

16 hours ago