Advertisement
MIRROR FOCUS

#Arecanut | ಅಡಿಕೆ ಬೆಳೆ ವಿಸ್ತರಣೆಯ ಚರ್ಚೆಯ ನಡುವೆ ಸಿಹಿ ಸುದ್ದಿ | ಪಾನ್ ಮಸಾಲಾ ಮಾರುಕಟ್ಟೆಯಲ್ಲಿ ಪ್ರಗತಿ | ಶೇ.5 ರಷ್ಟು ಏರಿಕೆ ನಿರೀಕ್ಷೆಯಲ್ಲಿ ಪಾನ್‌ ಮಾರುಕಟ್ಟೆ |

Share

 ಅಡಿಕೆ ಬೆಳೆ ವಿಸ್ತರಣೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಕೇವಲ ತಿಂದು ಉಗುಳಲು ಬಳಕೆಯಾಗುವ ಅಡಿಕೆಯ ಪರ್ಯಾಯ ಬಳಕೆ ತೀರಾ ಕಡಿಮೆಯಾಗಿದೆ. ಅಡಿಕೆ ತಿನ್ನಲು ಗುಣಮಟ್ಟದ ಅಡಿಕೆಯನ್ನು ಹೆಚ್ಚಾಗಿ ಅಪೇಕ್ಷೆ ಪಡುತ್ತಾರೆ. ಆದರೆ ಇದೀಗ ಸರ್ವೆ ಪ್ರಕಾರ ಶೇ.5 ರಷ್ಟು ಬೇಡಿಕೆ ಹೆಚ್ಚಲಿದೆ. ಅದರಲ್ಲೂ ಪಾನ್‌ಮಸಾಲಾ ಮಾರುಕಟ್ಟೆಯು ಮುಂದಿನ 10 ವರ್ಷಗಳಲ್ಲಿ ಶೇ.5 ರಷ್ಟು ಏರಿಕೆ ಕಾಣಲಿದೆ.

ಗ್ಲೋಬಲ್ ಇಂಡಿಯಾ ಪಾನ್ ಮಸಾಲಾ ಮಾರುಕಟ್ಟೆಯನ್ನು 2022 ರಲ್ಲಿ USD 412,143 ಕೋಟಿ  ಎಂದು ಅಂದಾಜಿಸಲಾಗಿದೆ. ಈಗ ಅದು ಮತ್ತಷ್ಟು ಬೆಳೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಮತ್ತಷ್ಟು ಏರಿಕೆಯ ನಿರೀಕ್ಷೆಯಿದೆ. 2023 ಮತ್ತು 2032 ರ ನಡುವೆ ಸರಿಸುಮಾರು 5% ನಷ್ಟು ಬೇಡಿಕೆ ಹೆಚ್ಚಲಿದೆ.

ಪಾನ್ ಮಸಾಲವನ್ನು ಸಾಮಾನ್ಯವಾಗಿ ಊಟದ ನಂತರದ ಜೀರ್ಣಕಾರಿ ಕ್ರಿಯೆ ಹೆಚ್ಚಿಸಲು ಬಳಕೆ ಮಾಡುತ್ತಾರೆ. ಬಾಯಿಯ ಸುಗಂಧಕ್ಕಾಗಿ ಅಥವಾ  ರೀಫ್ರೆಶ್‌ ಗಾಗಿ ಬಳಕೆ ಮಾಡುತ್ತಾರೆ. ಇದರಲ್ಲಿ ಇತರ ವಸ್ತುಗಳು ಇದ್ದರೂ ಅಡಿಕೆ ಹುಡಿಯೇ ಪ್ರಧಾನ ವಸ್ತು.ಪಾನ್ ಮಸಾಲಾದಲ್ಲಿ ಸಾಮಾನ್ಯವಾಗಿ ಅಡಿಕೆ, ಏಲಕ್ಕಿ, ಸುಣ್ಣ,  ವಿವಿಧ ಸುವಾಸನೆಯ ಹುಡಿಗಳು ಒಳಗೊಂಡಿರುತ್ತವೆ.  ಕಂಡುಬರುತ್ತವೆ.

ತಂಬಾಕು ಬಳಕೆ ಮಾಡುವವರು ಈಚೆಗೆ ಹೆಚ್ಚಾಗಿ ತಂಬಾಕಿನ ಬದಲಾಗಿ ಹಾನಿಕಾರಕವಲ್ಲದ ಅಡಿಕೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಅದಕ್ಕಾಗಿ ಅನೇಕರು ಪಾನ್‌ ಮಸಾಲಾ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದಲ್ಲಿನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಪಾನ್‌ ಮಸಾಲಾ ಬಳಕೆ ಮಾಡುತ್ತಾರೆ.

ಮಾರುಕಟ್ಟೆ ಸರ್ವೆ ಪ್ರಕಾರ, ಪಾನ್ ಮಸಾಲಾ ಮಾರುಕಟ್ಟೆಯು ಮುಂದಿನ 10 ವರ್ಷಗಳಲ್ಲಿ ಸುಮಾರು 5% ರಷ್ಟು ಹೆಚ್ಚು ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪಾನ್ ಮಸಾಲಾ ಮಾರುಕಟ್ಟೆಯ ಗಾತ್ರವು 2023 ರಲ್ಲಿ USD 4‌,12,143  ಕೋಟಿಗಳಷ್ಟು ಮೌಲ್ಯದ್ದಾಗಿದ್ದರೆ ಮತ್ತು 2032 ರ ವೇಳೆಗೆ USD 6,12,801 ಕೋಟಿಗೆ ತಲುಪುವ ನಿರೀಕ್ಷೆಯಿದೆ.

ಪಾನ್‌ಮಸಾಲಾ ಹೆಚ್ಚಾಗಿ  ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳು ಸೇರಿದಂತೆ ಭಾರತದ ಉತ್ತರ ಪ್ರದೇಶವು ಪಾನ್ ಮಸಾಲಾ ಮಾರುಕಟ್ಟೆಯಲ್ಲಿ ಹೆಚ್ಚಿನ  ಪಾಲನ್ನು ಹೊಂದಿದೆ.  ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳು  ಪಾನ್ ಮಸಾಲಾ ಮಾರುಕಟ್ಟೆಗೆ ಕೊಡುಗೆ ನೀಡುತ್ತವೆ.  ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ  ರಾಜ್ಯಗಳು  ಕಡಿಮೆ ಪಾನ್ ಮಸಾಲಾ ಬಳಕೆಯನ್ನು ಹೊಂದಿವೆ. ಇಲ್ಲಿ ಹಸಿ ಅಡಿಕೆ ಅಥವಾ ಒಣ ಅಡಿಕೆ ಬಳಕೆ ಹೆಚ್ಚಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಒಡಿಶಾದಂತಹ ಪೂರ್ವ ರಾಜ್ಯಗಳು ಪಾನ್ ಮಸಾಲಾವನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸುತ್ತವೆ.ಅಸ್ಸಾಂ, ಮಣಿಪುರ ಮತ್ತು ಮೇಘಾಲಯದಂತಹ ರಾಜ್ಯಗಳನ್ನು ಒಳಗೊಂಡಿರುವ ಈಶಾನ್ಯ ಭಾರತದಲ್ಲಿ ಪಾನ್ ಮಸಾಲಾ ಮಾರುಕಟ್ಟೆ ಬೆಳೆದಿಲ್ಲ.ಹೆಚ್ಚಾಗಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆಯನ್ನು ಪಾನ್‌ ಜೊತೆ ಸೇರಿಸಿ ಸವಿಯುತ್ತಾರೆ.

ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಪಾನ್‌ ಮಸಾಲಾ ಉದ್ಯಮವು ಶೇ.5 ರಷ್ಟು ಮಾತ್ರವೇ ವಿಸ್ತರಣೆಯಾಗುತ್ತದೆ. ಆದರೆ, ಈ ನಡುವೆ ಅಡಿಕೆ ಬೆಳೆ ವಿಸ್ತರಣೆಯಾದದ್ದು ಹಾಗೂ ಅದರ ಇಳುವರಿ ಆರಂಭವಾಗುವ ವೇಳೆ ಈಗಿನ ಮಾರುಕಟ್ಟೆಗಿಂತ ಶೇ.25 ರಷ್ಟು ಹೆಚ್ಚುವರಿಯಾಗಿ ಮಾರುಕಟ್ಟೆಯಲ್ಲಿ ಕಾಣಿಸಬಹುದು. ಸದ್ಯ ಅಡಿಕೆಗೆ ಬೇಡಿಕೆ ಇದೆ. ಮುಂದಿನ 10 ವರ್ಷಗಳಲ್ಲಿ ತಿಂದು ಉಗಿಯುವ ಅಡಿಕೆಯ ಮಾರುಕಟ್ಟೆ ಸ್ಥಿತಿಯ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

7 hours ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

14 hours ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

14 hours ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

15 hours ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

1 day ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

1 day ago