ಕಪ್ಪುನುಸಿ ರೋಗಕ್ಕೆ ಕಂಗಾಲಾಗಿದ್ದ ಮೆಣಸಿನಕಾಯಿ ಬೆಳೆಗಾರರಿಗೆ ಸಿಹಿಸುದ್ದಿ | ರೋಗಬಾಧೆ ನಿವಾರಣೆಗೆ ಔಷಧಿ ಸಂಶೋಧಿಸಿದ ವಿಜ್ಞಾನಿಗಳು |

November 3, 2023
3:30 PM
ಮೆಣಸಿನಕಾಯಿಯ ಕಪ್ಪುನುಸಿ ರೋಗಕ್ಕೆ ಔಷಧವೊಂದು ಆವಿಷ್ಕಾರಗೊಂಡಿದೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ವಿಜ್ಞಾನಿಗಳು ಈ ಆವಿಷ್ಕಾರ ಮಾಡಿದ್ದಾರೆ.

ಕಳೆದ ವರ್ಷ ಕೆಂಪು ಒಣ ಮೆಣಸಿನಕಾಯಿ(Red Chilly) ದರ(Price) ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಮೆಣಸಿನ ದರ ಗಗನಕ್ಕೇರದೆ. ಈ ಬಾರಿಯೂ ಇಳಿಯುವ ಲಕ್ಷಣ ಇಲ್ಲ. ಅತಿವೃಷ್ಟಿ, ಅನಾವೃಷ್ಟಿ,(Drought) ರೋಗಬಾಧೆ(disease) ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ರೈತರಿಗೆ(Farmer) ಸರಿಯಾದ ಇಳುವರಿ ಪಡೆಯಲು ತೊಂದರೆಯಾಗುತ್ತಿದೆ. ಇದು ಗ್ರಾಹಕರ(Customer) ಮೇಲೆ ನೇರ ಪರಿಣಾಮ ಬೀರುತ್ತದೆ. ಇದೀಗ ರೋಗಬಾಧೆಯಿಂದ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಕಂಗಾಲಾಗಿದ್ದ ಮೆಣಸಿನಕಾಯಿ ಬೆಳೆಗಾರರಿಗೆ ಈ ಹೊಸ ಸಂಶೋಧನೆ(Research) ಹೊಸ ಭರವಸೆ ಮೂಡಿಸಿದೆ.

ಮೆಣಸಿನಕಾಯಿಯ ಕಪ್ಪುನುಸಿ ರೋಗಕ್ಕೆ ರಾಮಬಾಣವೊಂದು ಆವಿಷ್ಕಾರಗೊಂಡಿದೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ(Agricultural university) ವಿಜ್ಞಾನಿಗಳು ಈ ಆವಿಷ್ಕಾರ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ರಾಜ್ಯಕ್ಕೆ ಕಾಲಿಟ್ಟಿದ್ದ ಕಪ್ಪುನುಸಿ ರೋಗ ಮೆಣಸಿನಕಾಯಿ ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಮೆಣಸಿನಕಾಯಿ ಬೆಳೆಗೆ ಕಾಡುತ್ತಿದ್ದ ಕಪ್ಪುನುಸಿ ಕೀಟಬಾದೆ ತಪ್ಪಿಸಲು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಔಷಧಿ(Medicine) ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 ಸಂಶೋಧಕ ಮತ್ತು ಪ್ರಾಧ್ಯಾಪಕರಾಗಿರುವ ರಾಮಾನಗೌಡ ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿ ಕೃಷ್ಣಪ್ರಭಾ ಬೆವೇರಿಯಾ ಎನ್ನುವ ಔಷಧಿ ಕಂಡುಹಿಡಿದಿದ್ದಾರೆ.

ಸಂಶೋಧಕ ಮತ್ತು ಪ್ರಾಧ್ಯಾಪಕರಾಗಿರುವ ರಾಮಾನಗೌಡ ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿ ಕೃಷ್ಣಪ್ರಭಾ ಬೆವೇರಿಯಾ ಎನ್ನುವ ಔಷಧಿ ಕಂಡುಹಿಡಿದಿದ್ದಾರೆ. ಈಗಾಗಲೇ ಎರಡು ಖಾಸಗಿ ಕಂಪನಿಗಳು ವಿವಿ ಜೊತೆ ಒಡಂಬಡಿಕೆಯಾಗಿದ್ದು ಸದ್ಯದಲ್ಲೇ ರೈತರಿಗೆ ಈ ಔಷಧಿ ಸಿಗಲಿದೆ. ರೋಗಬಾಧೆಯಿಂದ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಕಂಗಾಲಾಗಿದ್ದ ಮೆಣಸಿನಕಾಯಿ ಬೆಳೆಗಾರರಿಗೆ ಈ ಹೊಸ ಸಂಶೋಧನೆ ಸಂತಸ ತಂದಿದೆ.

– ಅಂತರ್ಜಾಲ ಮಾಹಿತಿ

A panacea has been discovered for black nose disease of chilies. The scientists of Bagalkot Agricultural University have made this discovery. The black nose disease that had entered the state for the last three to four years was troubling the Chilly growers. The scientists of Bagalkot Horticulture University have succeeded in finding a medicine to avoid the black-nosed pest that was bothering the chilly crop.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ
March 31, 2026
6:47 AM
by: ಮಿರರ್‌ ಡೆಸ್ಕ್
“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ
March 31, 2026
6:31 AM
by: ದ ರೂರಲ್ ಮಿರರ್.ಕಾಂ
‘ಗ್ರೀನ್ ಕ್ರೈಮ್’ | ಹವಾಮಾನ ಸಂಕಷ್ಟವಲ್ಲ, ಇದು “ಪರಿಸರ ಅಪರಾಧ” | ಮನೋವಿಜ್ಞಾನಿಯ ಪುಸ್ತಕ ಜಗತ್ತಿಗೆ ಎಚ್ಚರಿಕೆ
March 31, 2026
6:09 AM
by: ದ ರೂರಲ್ ಮಿರರ್.ಕಾಂ
ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
March 30, 2026
10:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror