ದೀಪಾವಳಿಯ ಸಂದರ್ಭ ಸರಣಿ ಸಾಮೂಹಿಕ ಗೋಪೂಜೆ ಮೂಲಕ ಸಮಾಜದಲ್ಲಿ ದೇಸೀ ಗೋ ತಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕಳೆದ ಎಂಟು ವರ್ಷಗಳಿಂದ ಗುತ್ತಿಗಾರಿನಲ್ಲಿ ನಡೆಯುತ್ತಿದೆ.
ರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ ಗುತ್ತಿಗಾರು ವಲಯದ ವೈದಿಕ ವಿಭಾಗದ ಆಶ್ರಯದಲ್ಲಿ ದೇಸೀ ಗೋವಿಗೆ ಸರಣಿ ಗೋಪೂಜೆಯ ಕಾರ್ಯಕ್ರಮ ಪ್ರತೀ ವರ್ಷ ನಡೆಯುತ್ತಿದೆ. ಈ ಬಾರಿ ಕೂಡಾ ಸರಣಿ ಗೋಪೂಜೆ ನಡೆಯಿತು. ಸುಬ್ರಹ್ಮಣ್ಯ ಘಟಕದಲ್ಲಿ ಆರಂಭಗೊಂಡ ಗೋಪೂಜಾ ಕಾರ್ಯಕ್ರಮವು ಬಳಿಕ ವಳಲಂಬೆ, ಕೊಲ್ಲಮೊಗ್ರ, ಕಮಿಲ, ಮೇಲ್ತೋಟ ,ಮರ್ಕಂಜ, ನೆಲ್ಲೂರುಕೆಮ್ರಾಜೆ ಘಟಕಗಳಲ್ಲಿ ನಡೆದು ಮೊಗ್ರ ಸತ್ಯನಾರಾಯಣ ಅವರ ಮನೆಯಲ್ಲಿ ಸಮಾರೋಪಗೊಂಡಿತು.
ಸಾಮೂಹಿಕ ಗೋಪೂಜೆಯ ಮೂಲಕ ದೇಸೀ ಗೋವಿನ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ದೇಸೀ ಗೋತಳಿ ಅಭಿವೃದ್ಧಿಯತ್ತ ಕೃಷಿಕರು ಮನಸ್ಸು ಮಾಡಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಮುರಳಿಕೃಷ್ಣ ಭಟ್ ವಳಲಂಬೆ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.
Advertisementಗುತ್ತಿಗಾರಿನಲ್ಲಿ ಸಾಮೂಹಿಕ ಸರಣಿ ಗೋಪೂಜೆ ನಡೆಯಿತು.
– The Rural Mirror (@ruralmirror) 17 Nov 2021
Advertisement
ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯನಾರಾಯಣ ಮೊಗ್ರ, ದೇವಕಿ. ಜಿ. ಭಟ್ ಪನ್ನೆ, ಶ್ರೀಕೃಷ್ಣ ಶರ್ಮ.ಪಿ., ಶ್ರೀಕೃಷ್ಣ ಭಟ್ ಗುಂಡಿಮಜಲು, ಮೊದಲಾದವರು ಇದ್ದರು.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…